Subscribe to Updates

    Get the latest creative news from FooBar about art, design and business.

    What's Hot

    ಪುತ್ತೂರಿನ ಶ್ರೀ ಸ್ವಾಮಿ ಕಲಾಮಂದಿರದ ದರ್ಶನ ಸಭಾಭವನದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಅಕ್ಟೋಬರ್ 05

    October 2, 2025

    ಡಾ. ಉದಯ ಕುಮಾರ ಇರ್ವತ್ತೂರು ಇವರು ರಚಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಅಕ್ಟೋಬರ್ 04

    October 2, 2025

    ‘ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚಿಸಲು ಫೆಲೋಶಿಪ್’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30

    October 2, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನಲ್ಲಿ ‘ರಾಜ್ಯ ಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮಾವೇಶ 2025’ | ಸೆಪ್ಟೆಂಬರ್ 28
    Awards

    ಬೆಂಗಳೂರಿನಲ್ಲಿ ‘ರಾಜ್ಯ ಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮಾವೇಶ 2025’ | ಸೆಪ್ಟೆಂಬರ್ 28

    September 24, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ). ಸಿದ್ಧನಹಳ್ಳಿ ಇದರ ವತಿಯಿಂದ ಅನಿಕೇತನ ಕನ್ನಡ ಬಳಗ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿರುವ ಗಾಂಧಿ ವಿವೇಕಾನಂದ ಪ್ರಣಿತಾ ರಾಜ್ಯ ಮಟ್ಟದ 10ನೇ ಯುವಜನ ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ದಿನಾಂಕ 28 ಸೆಪ್ಟೆಂಬರ್ 2025ರಂದು ಬೆಳಗ್ಗೆ 9-15 ಗಂಟೆಗೆ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಕವಿಗಳು, ಕೃಷಿಕರು, ಕನ್ನಡ ಉಪನ್ಯಾಸಕರು ಆಗಿರುವ ಡಾ. ಎಂ.ಆರ್.ಉಪೇಂದ್ರ ಕುಮಾರ್ ಇವರ ಸರ್ವಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ.

    ಕಾರ್ಯಕ್ರಮವನ್ನು ಶಿಕ್ಷಣ ತಜ್ಞ, ಗಾಂಧಿ ಭವನದ ಅಧ್ಯಕ್ಷರಾದ ಡಾ. ವೂಡೇ ಪಿ. ಕೃಷ್ಣ ಉದ್ಘಾಟಿಸಲಿದ್ದು, ಪ್ರಸಿದ್ಧ ವಿದ್ವಾಂಸರಾದ ಡಾ. ವಿಜಯಾ ಸುಬ್ಬರಾಜ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ಗಾಂಧೀಜಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮೀಣ ಶಾಲಾ ಶಿಕ್ಷಕರ ಸಂಘದ ಎಂ.ಆರ್. ಮಲ್ಲಿಕಾರ್ಜುನಯ್ಯ, ವಕೀಲರಾದ ನಂಜಪ್ಪ ಕಾಳೇಗೌಡ್ರು, ಹಿರಿಯ ಸಾಹಿತಿಗಳಾದ ಸುರೇಶ್ ಕೋರಕೊಪ್ಪ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಬಿಎಂಶ್ರೀ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಶಾಂತರಾಜು, ಪತ್ರಕರ್ತ ಪರಿಸರ ಮಂಜುನಾಥ್, ಶಿಕ್ಷಕಿ ಜಿ.ಬಿ. ಮಾಲಾ, ಕ್ರೀಡಾಭಿಮಾನಿ‌ ಸುಗುಮಾರನ್ ದೇವರಾಜ್, ಸಾಮಾಜಿಕ ಹೋರಾಟಗಾರ ಕೆ.ಜಿ. ಕುಮಾರ್, ಸಾಹಿತಿ ಗುಂಡೀಗೆರೆ ವಿಶ್ವನಾಥ್ ಹಾಗೆಯೇ ಸಮಾರೋಪ ಸಮಾರಂಭದಲ್ಲಿ ಅನಿಕೇತನ ಪ್ರಶಸ್ತಿಗೆ ಖ್ಯಾತ ನೃತ್ಯಪಟು ಡಾ. ಶುಭಾರಾಣಿ ಬೋಲಾರ್, ಪ್ರಗತಿಪರ ಕೃಷಿಕ ಎಂ.ಸಿ. ರಾಜು, ಯುವ ವೈದ್ಯ ಡಾ. ಪ್ರಜ್ವಲ್ ಜಿ. ಗೌಡ, ಕನ್ನಡ ಚಳುವಳಿಯ ಸು. ಜಗದೀಶ್ ಇವರಿಗೆ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಪ್ರದಾನ ಮಾಡುವರು.

    ಕೃಷಿ ತಜ್ಞ, ಸಾಹಿತಿ ಡಾ. ಶರತ್ಚಂದ್ರ ಜಿ. ರಾನಡೆ ಅವರು ಬಿ. ಶೃಂಗೇಶ್ವರ, ಸಿದ್ಧರಾಮ ಕಲ್ಮಠ, ರಾಮಕೃಷ್ಣಯ್ಯ ನೊಣವಿನಕೆರೆ, ಡಾ. ಎಸ್. ಪಾರಿಜಾತ, ಡಾ. ಸಂಗಮೇಶ ಎಸ್. ಗಣಿ, ಲೋಕೇಶ್ ಮನ್ವಿತ್ ಇವರ ಕೃತಿಗಳಿಗೆ ಬಿಎಂಶ್ರೀ ಪುಸ್ತಕ ಪ್ರಶಸ್ತಿ ಪ್ರದಾನ ಮಾಡುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅನಿಕೇತನ ಕನ್ನಡ ಬಳಗದ ಅಧ್ಯಕ್ಷರಾದ ಮಾಯಣ್ಣ ವಹಿಸಲಿದ್ದಾರೆ. ಕನ್ನಡದ ಕಣ್ವ ಬಿ.ಎಂ.ಶ್ರೀ ಪ್ರಶಸ್ತಿಯನ್ನು ಸಮಾವೇಶದ ಅಧ್ಯಕ್ಷರಾದ ಡಾ. ಉಪೇಂದ್ರಕುಮಾರ್ ಇವರಿಗೆ ನೀಡಲಾಗುತ್ತದೆ. ಕುಂಚ ಕಲಾವಿದೆ ಶಾಂತಿ ವಾಸು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ, ಅಂಬುಜಾ ಪ್ರಕಾಶ್ ಇವರಿಂದ ಪುಸ್ತಕ ಮಳಿಗೆ ಉದ್ಘಾಟನೆ, ಬಿ.ಆರ್‌. ನಾಗೇಶ್ ಇವರಿಂದ ಧ್ವಜಾರೋಹಣ ನೆರವೇರಲಿದೆ. ಸಂಸ್ಥೆಯ ಅಧ್ಯಕ್ಷ ಡಾ. ರಾಮಲಿಂಗೇಶ್ವರ ಪ್ರಾಸ್ತಾವಿಕ ಭಾಷಣ ಮಾಡುವರು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಯಿತ್ರಿ ಪುಷ್ಪ ಬಣಕಾರ್, ಲೇಖಕ ಡಾ. ಆರ್. ವಾದಿರಾಜ್, ಕವಿ ಕೃಷ್ಣ ಹಾನ್ ಬಾಳ್, ನಾಗರಾಜ್ ನಾದಲೀಲೆ, ಡಾ. ವೆ. ಅಜಿತ್ ಕುಮಾರ್, ಟಿ. ವೀರಭದ್ರಪ್ಪ, ನಗೆಮಳೆರಾಜ ಚಂದ್ರಾಜು, ಕನ್ನಡಭಕ್ತ ಕಿರಣ್ ಇವರಿಂದ ವಿವಿಧ ವಿಷಯ ವಿಚಾರ ಕುರಿತು ಮಾತನಾಡುವರು. ಗೀತಗಾಯನ, ಸಮೂಹ ನೃತ್ಯ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿವೆ.

    award baikady Cultural dance exhibition felicitation folk Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮಣಿಪಾಲದ ರತ್ನ ಸಂಜೀವ ಕಲಾ ಮಂಡಲ ವೇದಿಕೆಯಲ್ಲಿ ‘ನವರಸಗಳಲ್ಲಿ ನವರಾತ್ರಿ’ ಕವಿಗೋಷ್ಠಿ
    Next Article ಸೊರಬದಲ್ಲಿ ‘ಯಕ್ಷ ಗಾಯನ ವೈವಿಧ್ಯ’ ಯಕ್ಷಗಾನ ಹಿಮ್ಮೇಳ ಕಾರ್ಯಕ್ರಮ | ಸೆಪ್ಟೆಂಬರ್ 29
    roovari

    Add Comment Cancel Reply


    Related Posts

    ಪುತ್ತೂರಿನ ಶ್ರೀ ಸ್ವಾಮಿ ಕಲಾಮಂದಿರದ ದರ್ಶನ ಸಭಾಭವನದಲ್ಲಿ ‘ವಿಶ್ವ ಬನ್ನಂಜೆ 90ರ ನಮನ’ | ಅಕ್ಟೋಬರ್ 05

    October 2, 2025

    ಡಾ. ಉದಯ ಕುಮಾರ ಇರ್ವತ್ತೂರು ಇವರು ರಚಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಅಕ್ಟೋಬರ್ 04

    October 2, 2025

    ‘ಕನ್ನಡದಲ್ಲಿ ಮಕ್ಕಳಿಗಾಗಿ ಸಾಹಿತ್ಯ ರಚಿಸಲು ಫೆಲೋಶಿಪ್’ಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 30

    October 2, 2025

    ಸುಳ್ಯದಲ್ಲಿ ನಿರಂಜನ ಜನ್ಮಶತಮಾನೋತ್ಸವ ಕಾರ್ಯಕ್ರಮ

    October 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.