Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬ್ರಹ್ಮಾವರದಲ್ಲಿ ‘ನುಡಿ ಚಿತ್ತಾರ -2023’ ಕಥೆ ಹೇಳುವ ಹಾಗೂ ಛದ್ಮವೇಷ ಸ್ಪರ್ಧೆ | ನವೆಂಬರ್ 5ರಂದು
    Competition

    ಬ್ರಹ್ಮಾವರದಲ್ಲಿ ‘ನುಡಿ ಚಿತ್ತಾರ -2023’ ಕಥೆ ಹೇಳುವ ಹಾಗೂ ಛದ್ಮವೇಷ ಸ್ಪರ್ಧೆ | ನವೆಂಬರ್ 5ರಂದು

    October 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬ್ರಹ್ಮಾವರ : ಬೈಕಾಡಿಯ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯು ಕನ್ನಡ ರಾಜ್ಯೋತ್ಸವದ ಸಂಭ್ರಮಾಚಾರಣೆ ಪ್ರಯುಕ್ತ ‘ನುಡಿ ಚಿತ್ತಾರ -2023’ ಮಕ್ಕಳಿಗಾಗಿ ಕಥೆ ಹೇಳುವ ಸ್ಪರ್ಧೆ ಮತ್ತು ಸಾರ್ವಜನಿಕರಿಗಾಗಿ ಛದ್ಮವೇಷ ಸ್ಪರ್ಧೆಯನ್ನು (ವಿಷಯ : ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ) ಆಯೋಜಿಸುತ್ತಿದೆ. ಸ್ಪರ್ಧೆಗಳು ದಿನಾಂಕ 05-11-2023ರಂದು ಬ್ರಹ್ಮಾವರದ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

    ಕಥೆ ಹೇಳುವ ಸ್ಪರ್ಧೆಯ ನಿಯಮ ನಿಬಂಧನೆಗಳು :
    > 8ರಿಂದ 14 ವರ್ಷದ ಒಳಗಿನ ಮಕ್ಕಆಗೆ ಮಾತ್ರ ಅವಕಾಶ. ವೈಯಕ್ತಿಕ ವಿಭಾಗ ಮಾತ್ರ.
    > ಪ್ರವೇಶ ಉಚಿತ.
    > ಕಡ್ಡಾಯವಾಗಿ ಕನ್ನಡದಲ್ಲೇ ಕಥೆ ಹೇಳತಕ್ಕದ್ದು.
    > ಸಮಯಮಿತಿ ಗರಿಷ್ಠ 5 ನಿಮಿಷ
    > ಕಥೆಯ ಆಯ್ಕೆ, ಸ್ಪಷ್ಟತೆ, ಪ್ರಸ್ತುತಿ ಹಾಗೂ ಒಟ್ಟು ಪರಿಣಾಮ ಇವು ಮುಖ್ಯವಾಗಿ ಪರಿಗಣಿಸಲ್ಪಡುವ ಅಂಶಗಳು.
    > ನೋಂದಾವಣೆ ಕಡ್ಡಾಯ. ಸೀಮಿತ ಅವಕಾಶವಿದ್ದು ಮೊದಲು ನೋಂದಾಯಿಸಿದವರಿಗೆ ಆದ್ಯತೆ.
    > ತೀರ್ಪುಗಾರರ ತೀರ್ಮಾನವೇ ಅಂತಿಮ.

    ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಪ್ರಥಮ ರೂಪಾಯಿ 2,000/-, ದ್ವಿತೀಯ ರೂಪಾಯಿ 1,000/- ಹಾಗೂ ತೃತೀಯ ರೂಪಾಯಿ 500/- ನೀಡಲಾಗುವುದು.

    ಛದ್ಮವೇಷ ಸ್ಪರ್ಧೆಯ ನಿಯಮ ನಿಬಂಧನೆಗಳು :
    > 14 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮುಕ್ತ ಅವಕಾಶ ವೈಯಕ್ತಿಕ ವಿಭಾಗ ಮಾತ್ರ.
    > ನೋಂದಾವಣೆ ಕಡ್ಡಾಯ.
    > ಪ್ರವೇಶ ಶುಲ್ಕ ರೂ 100/- ಮಾತ್ರ.
    > ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿ ವಸ್ತು ವಿಷಯಕ್ಕೆ ಸಂಬಂಧಿಸಿದಂತೆಯೇ ನಿಮ್ಮ ಪ್ರಸ್ತುತಿ ಇರತಕ್ಕದ್ದು.
    > ಸಮಯಮಿತಿ – ವೇದಿಕೆ ತಯಾರಿಗೆ ಗರಿಷ್ಠ 2 ನಿಮಿಷ + ಪ್ರಸ್ತುತಿಗೆ ಗರಿಷ್ಠ 2 ನಿಮಿಷ (2+2).
    ಮಾತಿಗೆ ಅವಕಾಶ ಇಲ್ಲ, ಹಿನ್ನೆಲೆ ಸಂಗೀತ ಬಳಸಬಹುದು.
    > ಅಶ್ಲೀಲ, ಅಸಭ್ಯತೆ ಮತ್ತು ವ್ಯಕ್ತಿಗತ ನಿಂದನೆಗೆ ಅವಕಾಶ ಇಲ್ಲ.
    > ಹಾವ-ಭಾವ, ವೇಷಭೂಷಣ ಹಾಗೂ ಒಟ್ಟು ಪರಿಣಾಮ ಇವು ಮುಖ್ಯವಾಗಿ ಪರಿಗಣಿಸಲ್ಪಡುವ ಅಂಶಗಳು.
    > ತೀರ್ಪುಗಾರರ ತೀರ್ಮಾನವೇ ಅಂತಿಮ.

    ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಪ್ರಥಮ ರೂಪಾಯಿ 5,000/-, ದ್ವಿತೀಯ ರೂಪಾಯಿ 3,000/- ಹಾಗೂ ತೃತೀಯ ರೂಪಾಯಿ 1,000/- ನೀಡಲಾಗುವುದು.
    ಎರಡೂ ಸ್ಪರ್ಧೆಗಳ ನೋಂದಣಿಗೆ 02-11-2023 ಕೊನೆಯ ದಿನಾಂಕ, ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9972117300, 9880470301, 9481253585 ಸಂಖ್ಯೆಗಳನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶ್ವಕರ್ಮ ಕಲಾ ಪರಿಷತ್ ಆಯೋಜಿಸಿದ ‘ವಿಶ್ವಕರ್ಮ ಕಲಾ ಸಿಂಚನ 2023’
    Next Article ಹೊಸಕೋಟೆಯಲ್ಲಿ ಜನಪದರು ಅಮೃತ ರಂಗ ಮಾಲೆಯ ಯಶಸ್ವಿ ಸಮಾರೋಪ
    roovari

    Add Comment Cancel Reply


    Related Posts

    ಕಟಪಾಡಿ ವೇಣುಗಿರಿಯಲ್ಲಿ ‘ಭಜನಾ ವೈಭವ 2025’ ಸಾಂಪ್ರದಾಯಿಕ ಭಜನಾ ಸ್ಪರ್ಧೆ | ಜೂನ್ 22

    May 20, 2025

    ರಾಜ್ಯ ಮಟ್ಟದ ಕವನ ಮತ್ತು ಸಣ್ಣಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ

    May 19, 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    ವಿವೇಕಾನಂದ ಕಾಲೇಜಿನಲ್ಲಿ ವಿಚಾರಗೋಷ್ಠಿ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

    May 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.