Subscribe to Updates

    Get the latest creative news from FooBar about art, design and business.

    What's Hot

    ಡಾ. ಜಿ.ಎಲ್. ಹೆಗಡೆ ಮತ್ತು ಸರ್ಪಂಗಳ ಈಶ್ವರ ಭಟ್ ಇವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’

    June 11, 2025

    ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈಯವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ

    June 11, 2025

    ಕುಂದಾಪುರದ ಹೇರಿಕುದ್ರು ಮಾನಸ ಮಂದಿರದಲ್ಲಿ ಯಕ್ಷಗಾನ ಪ್ರದರ್ಶನ | ಜೂನ್ 14  

    June 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ್ಕಿ ಕಸಾಪದಿಂದ ‘ಕತೆ ರಚನೆ ಕಾರ್ಯಾಗಾರ’
    Literature

    ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ್ಕಿ ಕಸಾಪದಿಂದ ‘ಕತೆ ರಚನೆ ಕಾರ್ಯಾಗಾರ’

    November 7, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಲ್ಕಿ : ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಆಯೋಜಿಸಿದ ಮೂಲ್ಕಿ ತಾಲೂಕಿನ ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ‘ಕತೆ ರಚನೆ ಕಾರ್ಯಾಗಾರ’ವು ದಿನಾಂಕ 04-11-2023ರಂದು ನಡೆಯಿತು.

    ಈ ಕಾರ್ಯಕ್ರಮ ನಡೆಸಿಕೊಟ್ಟ ಕಥೆಗಾರ ದೇವು ಹನೆಹಳ್ಳಿ ಇವರು ಮಾತನಾಡುತ್ತಾ “ಸಮಾಜ, ಪರಿಸರ, ವಸ್ತು, ಮನುಷ್ಯರು ಹೀಗೆ ಎಲ್ಲೆಡೆಗಳ ವೈಶಿಷ್ಟ್ಯಗಳನ್ನು ಗುರುತಿಸುವ ಸಂವೇದನಾಶೀಲ ಮನಸ್ಸು, ಬಳಸುವ ಭಾಷಾಶೈಲಿ, ಸತತ ಓದುವಿಕೆಯಿಂದ ಬೆಳೆದ ಮನಸ್ಥಿತಿಯಿಂದ ಮೂಡಿಬರುವ ಕಥೆಗಳು ಬರಹಗಾರನನ್ನೂ ಓದುಗನನ್ನೂ ತಟ್ಟುತ್ತವೆ, ಆಪ್ತವಾಗುತ್ತವೆ, ಯಶಸ್ವಿಯಾಗುತ್ತವೆ. ಪತ್ರಿಕೆಗಳು, ಆಕಾಶವಾಣಿ, ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಕತೆ, ಕವನಗಳಿಗೆ ಸಾಕಷ್ಟು ಅವಕಾಶಗಳಿದ್ದು, ಬರೆಯುವ ಪ್ರಯತ್ನಗಳಾಗಲಿ. ಕಾರಂತ, ಬಾಗಲೋಡಿ, ಮಾಸ್ತಿ, ಚದುರಂಗ, ಹೀಗೆ ನೂರಾರು ಕಥೆಗಳ ಓದುವಿಕೆ ಬರವಣಿಗೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗಲಿ” ಎಂದು ಹೇಳಿದರು.

    ಪ್ರೇರಣಾ ನುಡಿಗಳನ್ನಾಡಿದ ಮೂಲ್ಕಿ ಸರಕಾರಿ ಕಾಲೇಜಿನ ಪ್ರಾಚಾರ್ಯ ಡಾ. ವಾಸುದೇವ ಬೆಳ್ಳೆ ಮಾತನಾಡಿ, “ವಿದ್ಯಾರ್ಥಿಗಳನ್ನು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯಾಗಾರ ಯಶಸ್ವಿಯಾಗಿದೆ” ಎಂದರು.

    ಬರಹಗಾರ್ತಿ ಶಕುಂತಲಾ ಭಟ್ ಹಳೆಯಂಗಡಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ, “ದುಃಖ ಮತ್ತು ಸಂತಸಗಳು ಭಿನ್ನಭಿನ್ನವಾಗಿವೆ. ಮೊದಲ ಬಹುಮಾನ ಬಂದಾಗ, ಪ್ರವಾಸ ಹೋದಾಗ, ಓಟದಲ್ಲಿ ಗೆದ್ದಾಗ ಹೀಗೆ ನಾನಾ ಸಂತಸಗಳನ್ನು ಕಂಡಂತೆ ಕಥೆಗಳ ರಚನೆಯೂ ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯಾಸಕ್ತಿ ಮೂಡಿ ಬದುಕಿನ ಖುಷಿಯನ್ನು ಹೆಚ್ಚಿಸಲಿ, ಶಾಲಾ ಸಂಚಿಕೆಗಳಲ್ಲಿಯೇ ಬರೆಯುವ ಪ್ರಯತ್ನಗಳಾಗಲಿ. ಒಂದು ಕಲ್ಲನ್ನು ಒಬ್ಬನಿಗೆ ಹೊಡೆಯಲೂ ಬಳಸಬಹುದು, ಮೂರ್ತಿಯಾಗಿಸಲೂಬಹುದು, ಚಪ್ಪಡಿಯಾಗಿಸಬಹುದು ಹೀಗೆ ನಾನಾ ಉಪಯೋಗಗಳನ್ನು ಮಾಡಬಹುದು. ನಮ್ಮ ದೃಷ್ಟಿ, ಚಿಂತನೆಯಂತೆ ಸಾಹಿತ್ಯದ ಬರೆವಣಿಗೆ. ನಮ್ಮ ಬದುಕಿನ ಘಟನೆಗಳೂ ಕತೆಗಳಾಗಬಹುದು” ಎಂದರು.

    ಕಸಾಪ ತಾಲೂಕು ಅಧ್ಯಕ್ಷ ಮಿಥುನ ಕೊಡೆತ್ತೂರು, ಕಾರ್ಯದರ್ಶಿ ಜೊಸ್ಸಿ ಪಿಂಟೋ, ಹೆರಿಕ್ ಪಾಯಸ್ ವೇದಿಕೆಯಲ್ಲಿದ್ದರು.
    ಪ್ರೌಢಶಾಲಾ ಮುಖ್ಯಶಿಕ್ಷಕಿ ಜಯಲಕ್ಷ್ಮೀ ಟಿ. ನಾಯಕ್ ಸ್ವಾಗತಿಸಿ, ಉಪನ್ಯಾಸಕಿ ಗಾಯತ್ರೀ ಎನ್.ಆರ್. ನಿರೂಪಿಸಿದರು. ವಿಜಯಾ ಕಾಲೇಜಿನ ಪ್ರಜ್ಞಾ ಅಭಿಪ್ರಾಯ ವ್ಯಕ್ತಪಡಿಸಿದರು. ಮೂಲ್ಕಿ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಗೀತೆಗಳನ್ನು ಹಾಡಿದರು. ಕಾರ್ಯಾಗಾರದಲ್ಲಿ ತಾಲೂಕಿನ 125 ವಿದ್ಯಾರ್ಥಿಗಳು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ‘ಕವಿಗೋಷ್ಠಿ’
    Next Article ಬಹುಮುಖ ಪ್ರತಿಭೆ ಸುಜಯೀಂದ್ರ ಹಂದೆಯವರಿಗೆ ‘ವರುಣತೀರ್ಥ ರಾಜ್ಯೋತ್ಸವ ಪುರಸ್ಕಾರ’
    roovari

    Add Comment Cancel Reply


    Related Posts

    ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮ

    June 11, 2025

    ಬದಿಯಡ್ಕ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಕವಿ ನಮನ ಕಾರ್ಯಕ್ರಮ

    June 10, 2025

    ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’

    June 10, 2025

    ಬೆಂಗಳೂರಿನಲ್ಲಿ ಎಸ್.ಎಲ್. ಭೈರಪ್ಪ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ | ಜೂನ್ 14

    June 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.