ಧಾರವಾಡ : ಅಭಿನಯ ಭಾರತಿ (ರಿ.) ಧಾರವಾಡ ಇವರ ವತಿಯಿಂದ ‘ಸ್ತ್ರೀ ನಾಟಕೋತ್ಸವ’ವನ್ನು ದಿನಾಂಕ 06 ಮತ್ತು 07 ಜುಲೈ 2025ರಂದು ಧಾರವಾಡದ ಕರ್ಣಾಟಕ ಕಾಲೇಜ್ ಆವರಣದಲ್ಲಿರುವ ಸೃಜನ ಡಾ. ಅಣ್ಣಾಜಿ ರಾವ್ ಶಿರೂರ್ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 06 ಜುಲೈ 2025ರಂದು ಉಮಾಶ್ರೀ ನಟಿಸಿದ ‘ಶರ್ಮಿಷ್ಠೆ’ ಮತ್ತು ದಿನಾಂಕ 07 ಜುಲೈ 2025ರಂದು ವೀಣಾ ಮೋಹನ ಅಠವಲೆ ನಟಿಸಿದ ‘ಅನಾಥರ ಮಾಯಿ’ ಹಾಗೂ ಜ್ಯೋತಿ ದೀಕ್ಷಿತ ನಟಿಸಿದ ‘ಉರಿಯ ಉಯ್ಯಾಲೆ’ ನಾಟಕ ಪ್ರದರ್ಶನ ನಡೆಯಲಿದೆ.