Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುಮನಸ ರಂಗ ಹಬ್ಬದ ಉದ್ಘಾಟನೆ – ದಿನ 1
    Drama

    ಸುಮನಸ ರಂಗ ಹಬ್ಬದ ಉದ್ಘಾಟನೆ – ದಿನ 1

    February 27, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    27, ಫೆಬ್ರವರಿ 2023 ಉಡುಪಿ: “ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಶಿಸುತ್ತದೆ” ಸುಮನಸಾದ ರಂಗಹಬ್ಬ ಉದ್ಘಾಟಿಸಿದ ಸಿ. ಬಸವಲಿಂಗಯ್ಯರಂಗಭೂಮಿಯಲ್ಲಿ ರಾಜಕೀಯವನ್ನು ವಸ್ತುವಾಗಿ ಇಟ್ಟುಕೊಂಡು ನಾಟಕ ಮಾಡಬೇಕು. ಆದರೆ ರಾಜಕೀಯ ಮಾಡಬಾರದು. ರಂಗಾಯಣವೂ ಸೇರಿದಂತೆ ರಂಗಭೂಮಿಯಲ್ಲಿ ಕೆಲಸ ಮಾಡುವವರು ಪ್ರಭುತ್ವಕ್ಕೆ ಜೈಕಾರ ಹಾಕಿದರೆ ಕಲೆ ನಶಿಸುತ್ತದೆ ಎಂದು ಹಿರಿಯ ರಂಗಕರ್ಮಿ ಸಿ. ಬಸವಲಿಂಗಯ್ಯ ಹೇಳಿದರು.

    ಸಾಂಸ್ಕೃತಿಕ ಸಂಘಟನೆ ಸುಮನಸಾ ಅಜ್ಜರಕಾಡು ಬಯಲು ರಂಗಭೂಮಿಯಲ್ಲಿ ಹಮ್ಮಿಕೊಂಡಿರುವ ರಂಗಹಬ್ಬವನ್ನು ಭಾನುವಾರ 26-2-2023ರಂದು ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿ ವ್ಯವಸ್ಥೆಯ ಪ್ರತಿರೋಧ. ಅದನ್ನು ಬಿಟ್ಟು ಯಾರ ಬಗ್ಗೆಯೋ ಭಜನೆ ಮಾಡಲು ಹೊರಟರೆ ರಂಗಭೂಮಿ ಉಳಿಯುವುದಿಲ್ಲ. ನೀತಿ ಬೋಧನೆ, ಧರ್ಮಬೋಧನೆ ರಂಗಭೂಮಿಯ ಕೆಲಸವಲ್ಲ. ಆ ಕೆಲಸ ಮಾಡಲು ಬೇರೆಯವರು ಇದ್ದಾರೆ. ಮನಸ್ಸುಗಳನ್ನು ಅರಳಿಸುವ ಕೆಲಸವನ್ನು ರಂಗಭೂಮಿ ಮಾಡಬೇಕು. ಮನಸ್ಸನ್ನು ಕೆಡಿಸುವ ಕೆಲಸವನ್ನು ಮಾಡಬಾರದು ಎಂದು ಸಲಹೆ ನೀಡಿದರು. ಅದ್ಭುತ ನಾಟಕಗಳು ಹುಟ್ಟುವುದೇ ದುರಿತ ಕಾಲದಲ್ಲಿ. ಸಮಾಜವು ಸಂಕಷ್ಟದಲ್ಲಿ ಇದ್ದಾಗ ಉತ್ತಮ ನಾಟಕಗಳು ಹೊರಹೊಮ್ಮುತ್ತದೆ. ಸದ್ಯದ ಕಾಲ ನೋಡಿದಾಗ ಅಂಥ ನಾಟಕಗಳು ಬರುವ ಅವಶ್ಯಕತೆ ಇದೆ ಎಂದರು. ಭಾರತೀಯರಾದ ನಾವು ಎಂದು ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿದೆ. ಅದು ಬದಲಾಗಿ ಹಿಂದೂಗಳಾದ ನಾವು, ಮುಸ್ಲಿಮರಾದ ನಾವು, ಕ್ರಿಶ್ಚಿಯನ್ನರಾದ ನಾವು ಎಂದು ಆದರೆ ಸಂವಿಧಾನ ಎಕ್ಕುಟ್ಟಿ ಹೋಗುತ್ತದೆ. ನಾವು ಬಹುತ್ವದ ಭಾರತವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು. ರಾಜಕೀಯದ ಬಗ್ಗೆ ಯಾರಿಗೆ ತಿಳಿದಿಲ್ಲವೋ ಅವರೇ ನಿಜವಾದ ಅನಕ್ಷರಸ್ತರು ಎಂದು ಚಿಂತಕರು ಹೇಳಿದ್ದಾರೆ. ಯಾಕೆಂದರೆ ನಮ್ಮ ನಿತ್ಯದ ಬದುಕಿನಲ್ಲಿ ಆಗುವ ಎಲ್ಲದಕ್ಕೂ ರಾಜಕೀಯ ನಿರ್ಧಾರಗಳು ಕಾರಣವಾಗಿರುತ್ತವೆ. ಇಂಥ ರಾಜಕೀಯ ಹೊಲಸೆದ್ದು ಹೋದಾಗ ಅದನ್ನು ಸಮಾಜಕ್ಕೆ ತೋರಿಸುವುದಲ್ಲದೇ ಯಾವ ದಾರಿಯಲ್ಲಿ ಹೋಗಬೇಕು ಎಂಬುದನ್ನು ರಂಗಭೂಮಿ ಮಾಡಬೇಕು ಎಂದು ಸಲಹೆ ನೀಡಿದರು.

    ರಂಗ ಸನ್ಮಾನ ಪಡೆದ ಕಲಾವಿದ ತೋನ್ಸೆ ವಿಜಯಕುಮಾರ್ ಮಾತನಾಡಿ, ನಾನು ಮುಂಬೈಗೆ ಹೋದಾಗ ಇಲ್ಲಿ ಕಲಿತಿದ್ದನ್ನು ಅಲ್ಲಿ ಪ್ರದರ್ಶಿಸಲು ಹೋದಾಗ ನನಗೆ ತಡೆಗಳು ಬಂದವು. ಇಲ್ಲಿಂದ ಹೋದವರು ಅಲ್ಲಿನ ಮರಾಠಿ, ಹಿಂದಿಯಲ್ಲಿ ಲೀನರಾಗಿದ್ದರು. ನಮ್ಮ ನಾಟಕಗಳಿಗೆ ಪ್ರೇಕ್ಷಕರಿರಲಿಲ್ಲ. ಪ್ರೇಕ್ಷಕರನ್ನು ಸೃಷ್ಟಿಸಿ ನಾಟಕ ಮಾಡಿದೆ ಎಂದು ನೆನಪು ಮಾಡಿಕೊಂಡರು. “ಶಾಲೆಯ ಅಧ್ಯಾಪಕರು, ಯಕ್ಷಗಾನ ಗುರುಗಳು ಎಲ್ಲರೂ ಕಲಿಸಿದವರೇ. ಆದರೆ ನನ್ನಿಷ್ಟದ ರಂಗಭೂಮಿಯನ್ನು ಕಲಿಸಿದವರು ಆನಂದ ಗಾಣಿಗ, ರಾಘವೇಂದ್ರ ಭಟ್, ವೆಂಕಟಾಚಲ ಭಟ್ ಮುಂತಾದವರು. ಅವರಿಗೆ ಈ ಸನ್ಮಾನವನ್ನು ಸಮರ್ಪಿಸುತ್ತೇನೆ’ ಎಂದರು. ಮುಂಬೈಯಲ್ಲಿ ಇಲ್ಲಿನ ಜನರಿಗೆ ಗಟ್ಟಿತನದ ಭಾಷೆ ಇರಲಿಲ್ಲ. ಅಲ್ಲಿ ತುಳು, ಹಿಂದಿ ಯಾವುದೇ ಭಾಷಯಲ್ಲಿ ಒಂದು ವಾಕ್ಯ ಹೇಳಿದರೆ ಅದರಲ್ಲಿ ನಾಲ್ಕು ಭಾಷೆಗಳ ಮಿಶ್ರಣ ಇರುತ್ತಿದ್ದವು. ಅದನ್ನು ತಿದ್ದುವುದೇ ಕಷ್ಟದ ಕೆಲಸವಾಗಿತ್ತು. 60 ವರ್ಷಕ್ಕೆ 60 ಪಾತ್ರಗಳನ್ನು ಮಾಡಿದ್ದು ನಾನು ಏನು ಕಲಿತಿದ್ದೇನೆ ಎಂಬುದನ್ನು ತೋರಿಸುವುದಕ್ಕಾಗಿ. ನಾನು ಸಾಂಸಾರಿಕ ನಾಟಕಗಳನ್ನು ಹೆಚ್ಚು ಮಾಡಿದ್ದು ಎಂದು ಹೇಳಿದರು.

    ಜಿಲ್ಲಾ ರಂಗಮಂದಿರಕ್ಕೆ 2012ರಲ್ಲಿ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಭೂಮಿ ಸಿಕ್ಕಿರಲಿಲ್ಲ. ಐದು ವರ್ಷಗಳ ಹಿಂದೆ ಮತ್ತೆ ಅನುದಾನ ಬಂದಿತ್ತು. ಕೆಲವೇ ಸಮಯದಲ್ಲಿ ರಂಗಮಂದಿರ ನಿರ್ಮಾಣಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.

    ಉದ್ಯಮಿಗಳಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯನ್, ದಿವಾಕರ ಸನಿಲ್, ಸುಮನಸಾ ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು. ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ನಾಗೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನವೋದಯ ಮೈಸೂರು ತಂಡದಿಂದ ಅರಣ್ಯಕಾಂಡ ನಾಟಕ ಪ್ರದರ್ಶನಗೊಂಡಿತು.

    ಫೆಬ್ರವರಿ 26, ಭಾನುವಾರ – ಅರಣ್ಯ ಕಾಂಡ – ಕನ್ನಡ ನಾಟಕ
    ತಂಡ: ನವೋದಯ ಮೈಸೂರು
    ರಚನೆ: ಪ್ರಸನ್ನ ಹೆಗ್ಗೋಡು ವಿನ್ಯಾಸ-ನಿರ್ದೇಶನ: ಶ್ರೀಪಾದ್ ಭಟ್

    Share. Facebook Twitter Pinterest LinkedIn Tumblr WhatsApp Email
    Previous Articleವೈದೇಹಿಗೆ “ನೃಪತುಂಗ ಸಾಹಿತ್ಯ ಪ್ರಶಸ್ತಿ”
    Next Article ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಾಧಕರಿಗೆ ಸನ್ಮಾನ
    roovari

    Add Comment Cancel Reply


    Related Posts

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘#36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನ | ಜೂನ್ 01

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.