Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ

    August 23, 2025

    ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್‌ ಪುರಸ್ಕಾರ’ ಪ್ರಕಟ

    August 23, 2025

    ‘ಬೆರಗು’ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 25

    August 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಗೀತಾಭಿಮಾನಿಗಳನ್ನು ರಂಜಿಸಿದ  ‘ಸ್ವರಸ್ವಾದ್’ 
    Music

    ಸಂಗೀತಾಭಿಮಾನಿಗಳನ್ನು ರಂಜಿಸಿದ  ‘ಸ್ವರಸ್ವಾದ್’ 

    November 5, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಉಡುಪಿ : ಚಿರಂತನ ಚ್ಯಾರಿಟೇಬಲ್ ಟ್ರಸ್ಟ್ ಸುರತ್ಕಲ್ ಮತ್ತು ಮ್ಯಾಕ್ಸ್ ಮೀಡಿಯಾ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಿಂದುಸ್ತಾನಿ ಕಛೇರಿಗಳ ಸಂಗೀತ ಹಬ್ಬ ‘ಸ್ವರಸ್ವಾದ್’ ಕಾರ್ಯಕ್ರಮವು ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2024ರಂದು ಜರುಗಿತು.
    ಕಾರ್ಯಕ್ರಮದಲ್ಲಿ ಉಸ್ತಾದ್ ರಫೀಕ್ ಖಾನ್, ಶ್ರೀ ಟಿ. ರಂಗ ಪೈ, ಶ್ರೀ ಎಮ್. ಗಂಗಾಧರ್, ಶ್ರೀ ಮುರಳಿ ಕಡೇಕಾರ್ ಹಾಗೂ ಶ್ರೀ ರತ್ನಕುಮಾರ್ ಜೊತೆ ಸೇರಿ ದೀಪ ಪ್ರಜ್ವಲನವನ್ನು ನಡೆಸಿಕೊಟ್ಟರು. ಚಿರಂತನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಭಾರವಿ ದೇರಾಜೆ ಹಾಗೂ ಮ್ಯಾಕ್ಸ್ ಮೀಡಿಯಾದ ಶ್ರೀ ಜಯಂತ್ ಐತಾಳ್ ಉಪಸ್ಥಿತರಿದ್ದರು.
    ಕಾರ್ಯಕ್ರಮದ ಆರಂಭದಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ ಹಾಗೂ ವಿದುಷಿ ಸಂಗೀತ ಕಟ್ಟಿಯವರ ಶಿಷ್ಯೆ ಉಡುಪಿಯ ಯುವ ಕಲಾವಿದೆ ಕುಮಾರಿ ಅನುರಾಧ ಭಟ್ ಇವರು ರಾಗ ಕೇದಾರದಲ್ಲಿ ವಿಲಂಬಿತ್ ತೀನ್ ತಾಲ್ ಹಾಗೂ ದೃತ್ ತೀನ್ ತಾಲ್‌ ಇದರ ಬಂಧಿಶ್‌ಗಳನ್ನು ಪ್ರಸ್ತುತ ಪಡಿಸಿ ಭಜನ್‌ಗಳನ್ನು ಹಾಡಿ ತನ್ನ ಗಾಯನ  ಪ್ರಸ್ತುತಿಯನ್ನು  ಮುಕ್ತಾಯಗೊಳಿಸಿದರು. ಇವರಿಗೆ ತಬ್ಲಾದಲ್ಲಿ  ಶ್ರೀ ದೀಪಕ್ ನಾಯಕ್ ಹರಿಖಂಡಿಗೆ, ಸಂವಾದಿನಿಯಲ್ಲಿ  ಶ್ರೀ ಪ್ರಸಾದ್ ಕಾಮತ್ ಉಡುಪಿ ಹಾಗೂ ತಾನ್ಪುರದಲ್ಲಿ ಕುಮಾರಿ ಜಯಶ್ರೀ ಶೇಟ್ ಸಹಕರಿಸಿದರು.
    ಎರಡನೆಯ ಕಛೇರಿಯನ್ನು ಕೆನಡಾದಲ್ಲಿ ನೆಲೆಸಿರುವ ಸರೋದ್ ಕಲಾವಿದ ಶ್ರೀ ಆರ್ನಾಬ್ ಚಕ್ರವರ್ತಿ ನಡೆಸಿಕೊಟ್ಟರು. ಇವರು ಅಪರೂಪದ ರಾಗ ಮಾಲ್ಗುಂಜಿಯನ್ನು ವಿಲಂಬಿತ್ ಹಾಗೂ ದೃತ್ ತೀನ್ ತಾಲ್ ಗಳಲ್ಲಿ ಪ್ರಸ್ತುತಪಡಿಸಿ ಅನಂತರ ತಿಲಕ್ ಕಾಮೋದ್ ರಾಗವನ್ನು ಮಧ್ಯಲಯ ರೂಪಕ್ ಹಾಗೂ ದೃತ್ ತೀನ್ ತಾಲ್‌ಗಳಲ್ಲಿ ನುಡಿಸಿದರು. ಇವರಿಗೆ ತಬ್ಲಾದಲ್ಲಿ  ಕೋಟೇಶ್ವರದ ಶ್ರೀ ವಿಘ್ನೇಶ್ ಕಾಮತ್ ಸಾಥ್ ನೀಡಿದರು.
    ಕೊನೆಯದಾಗಿ ಪಂಡಿತ್ ಪಾರ್ಥ ಭೋಸ್ ಕೋಲ್ಕತಾ ಇವರಿಂದ ಸಿತಾರ್ ವಾದನ ಕಾರ್ಯಕ್ರಮ ನಡೆಯಿತು. ತಮ್ಮ ಕಛೇರಿಯಲ್ಲಿ  ಸುಂದರ ಆಲಾಪ್ ಹಾಗೂ ವಿಲಂಬಿತ್ ಝಪ್ ತಾಳದ ಗತ್ ನೊಂದಿಗೆ ಮಾಧುರ್ಯಪೂರ್ಣವಾಗಿ  ರಾಗ ದುರ್ಗಾವನ್ನು  ಪ್ರಸ್ತುತ ಪಡಿಸಿದರು ಮತ್ತು  ಮಿಶ್ರ ಕಮಾಜ್ ರಾಗದ ಗತ್ ಮಾಲಾದೊಂದಿಗೆ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದರು. ಪಾರ್ಥ ಭೋಸ್ ಅವರಿಗೆ ಗೋವಾದ ಶ್ರೀ ಮಯಾಂಕ್ ಬೇಡೇಕರ್ ತಬ್ಲಾ ಸಾಥ್ ನೀಡಿದರು.
    ಚಿರಂತನದ ಅಧ್ಯಕ್ಷರಾದ ಶ್ರೀ ತೇಜಸ್ವಿ ಶಂಕರ್ ಜೂನಿಯರ್ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿಕೊಟ್ಟರು.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಸಂಸ್ಕೃತಿ ನೃತ್ಯ ಅಕಾಡೆಮಿ ವತಿಯಿಂದ ‘ನೂಪುರ ನಿನಾದ’ | ನವೆಂಬರ್ 10
    Next Article ಬದಿಯಡ್ಕದಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ | ನವೆಂಬರ್ 06
    roovari

    Add Comment Cancel Reply


    Related Posts

    ವಂಡ್ಸೆಯ ಉಪಾಧ್ಯಾಯರ ಗದ್ದೆಯಲ್ಲಿ ‘ಯಕ್ಷ ಹೆಜ್ಜೆ’ | ಆಗಸ್ಟ್ 24

    August 23, 2025

    ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ‘ರಿಮ್ಜಿಮ್ ಬೈಠಕ್’ | ಆಗಸ್ಟ್ 24

    August 23, 2025

    ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ‘ಭೀಮರಾವ್ ವಾಷ್ಠರ್ ಉತ್ಸವ’ | ಆಗಸ್ಟ್ 24

    August 23, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಾರ್ಯಾಗಾರ ಮತ್ತು ಗಾಯನ ಕಾರ್ಯಕ್ರಮ | ಆಗಸ್ಟ್ 24

    August 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.