ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ದಿನಾಂಕ 04 ಜೂನ್ 2025ರಂದು ಮಂಚಿ ಸಮೀಪದ ಬಾವದ ಶ್ರೀಮತಿ ಮೀನಾಕ್ಷಿ ಮೋಹನ್ ಶೆಟ್ಟಿಯವರ ನೂತನ ಗೃಹ ‘ಭ್ರಾಮರಿ’ ಇದರ ಪ್ರವೇಶೋತ್ಸವದ ಅಂಗವಾಗಿ ‘ಲಕ್ಷ್ಮೀ ಸ್ವಯ೦ವರ’ (ಸಮುದ್ರ ಮಥನ) ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಬೇಂದ್ರೋಡಿ ಲಕ್ಷ್ಮೀಶ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಮಹಾವಿಷ್ಣು ಮತ್ತು ನಾರದ (ಕಿಶೋರಿ ದುಗ್ಗಪ್ಪ ನಡುಗಲ್ಲು), ಬಲಿ ಚಕ್ರವರ್ತಿ (ಶುಭಾ ಜೆ.ಸಿ. ಅಡಿಗ), ದೇವೇಂದ್ರ (ಹರಿಣಾಕ್ಷಿ ಜೆ. ಶೆಟ್ಟಿ), ವಾಲಿ ಮತ್ತು ದೂರ್ವಾಸ (ಶಾರದಾ ಅರಸ್), ಲಕ್ಷ್ಮೀ (ಭಾರತಿ ರೈ ಅರಿಯಡ್ಕ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿದರು. ಅಭಿಮತ ಚಾನೆಲ್ ನ ಡಾ. ಮಮತಾ ಪ್ರವೀಣ್ ಶೆಟ್ಟಿ ಕಲಾವಿದರನ್ನು ಶಲ್ಯ ಹೊದಿಸಿ, ಗೌರವಿಸಿ ವಂದಿಸಿದರು.