Subscribe to Updates

    Get the latest creative news from FooBar about art, design and business.

    What's Hot

    ಬಡಗ ಎಕ್ಕಾರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಉದ್ಘಾಟನೆಗೊಂಡ ಯಕ್ಷಶಿಕ್ಷಣ

    July 5, 2025

    Book review | The Gory Account of Genocide in the Heaven of India

    July 5, 2025

    ನಿದೀಶ್ ಕುಮಾರ್ ಮಡಿಲಿಗೆ ಅಂತಾರಾಷ್ಟ್ರೀಯ ಗೋಲ್ಡ್ ಮೆಡಲ್

    July 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ಕಲಾಗ್ರಾಮದಲ್ಲಿ ‘ತಲ್ಕಿ’ ನಾಟಕದ ಪ್ರದರ್ಶನ | ಸೆಪ್ಟೆಂಬರ್ 15ರಂದು  
    Drama

    ಬೆಂಗಳೂರಿನ ಕಲಾಗ್ರಾಮದಲ್ಲಿ ‘ತಲ್ಕಿ’ ನಾಟಕದ ಪ್ರದರ್ಶನ | ಸೆಪ್ಟೆಂಬರ್ 15ರಂದು  

    September 9, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಜಂಗಮ ಕಲೆಕ್ಟಿವ್ ಆಯೋಜನೆಯಲ್ಲಿ ‘ಪಯಣ’ ಪ್ರಸ್ತುತ ಪಡಿಸುವ ಶ್ರೀಜಿತ್ ಸುಂದರಂ ನಿರ್ದೇಶನದ ‘ತಲ್ಕಿ’ ನಾಟಕದ ಪ್ರದರ್ಶನವು ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ದಿನಾಂಕ 15-09-2023ರಂದು ಸಂಜೆ ಗಂಟೆ 7.30ಕ್ಕೆ ನಡೆಯಲಿದೆ.

    ನಾಟಕದ ಕುರಿತು :
    ‘ತಲ್ಕಿ’ ನಾಟಕವು ಸಮುದಾಯದವರ ಜೀವನ ಕಥೆಗಳ ಆಧಾರದ ಸತ್ಯ ಕಥೆಗಳು. ಬರವಣಿಗೆ, ಸಮಾಜಸೇವೆ, ಸಮುದಾಯ ಮುಖ್ಯಸ್ಥರು, ಅಮ್ಮಂದಿರು, ಹೀಗೆ ಸಮಾಜದ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ, ಐವತ್ತು ವರ್ಷ ದಾಟಿರುವ ಮಂಗಳಮುಖಿಯರು ತಮ್ಮ ಈಡೇರದ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ನಟನೆ ಹಾಗೂ ರಂಗ ಪ್ರಕ್ರಿಯೆಗಳ ನೆರವಿನಿಂದ ಹೋರಾಡಲು ಅವಕಾಶ ಕಲ್ಪಿಸಿಕೊಡುವ ವಿಶಿಷ್ಟ ಯತ್ನ ಈ ನಾಟಕ. ಇವರೆಲ್ಲರಿಗೂ ಇರುವ ಒಂದು ಸಾಮ್ಯತೆ ಎಂದರೆ ಸಮಯ ಹಾಗೂ ಸಮಾಜ ನೀಡಿರುವ ಗಾಯದ ಗುರುತುಗಳು.

    ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳ ಜೊತೆ ಅವಿನಾಭಾವ ಸಂಬಂಧವಿರುವ ಅವರ ದೇಹದ ಮೇಲಿನ ಗುರುತುಗಳು, ಆ ಪ್ರದೇಶಗಳ ಗುರುತುಗಳಾಗಿ ಮಾರ್ಪಟ್ಟಿವೆ ಎನ್ನಬಹುದು. ಇಂತಹ ಹಿಂಸೆ, ನೋವಿನ ನಡುವೆಯೂ, ಹೋರಾಡಿ ಬದುಕುವ ಅವರ ಛಲವನ್ನು, ಅವರ ಈಡೇರದ ನಿಜದ ಕನಸುಗಳನ್ನು, ಅವರ ಆಸೆ, ನಗು, ಅಳು, ಅಪಮಾನ, ಸ್ವಾಭಿಮಾನ, ಆತ್ಮಸ್ಥೈರ್ಯಗಳ ಜೊತೆ ಹೆಣೆಯುವ ಪ್ರಯತ್ನ ಈ ನಾಟಕ.

    ‘ತಲ್ಕಿ’ ನಾಟಕದ ಮಂಗಳಮುಖಿ ನಟರು, ತಮ್ಮ ಮೆಚ್ಚುಗೆಯ ಅಡುಗೆ ಮಾಡುತ್ತಾ, ಹಾಡುತ್ತಾ, ಕಥೆಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಜೀವನದ ಒಂದು ತುಣುಕನ್ನು ನಮಗೆ ಉಣಬಡಿಸಲಿದ್ದಾರೆ. ಇದರ ಮೂಲಕ ಅವರ ಸಮುದಾಯದ ವಿಶಿಷ್ಟ ಆಚರಣೆಗಳು, ಜೀವನ ಶೈಲಿ, ಸಂಸ್ಕೃತಿ, ಪರಿವಾರ ರಚನೆ ಹಾಗೂ ಇವುಗಳಲ್ಲಿ ತುಂಬಿರುವ ಪ್ರೀತಿ, ಮಮತೆ ಹಾಗೂ ಕರುಣೆಯ ಭಾವಗಳನ್ನು ರಂಗದ ಮೇಲೆ ತರುವ ಅಪರೂಪದ ಪ್ರಯೋಗವಾಗಿ ಈ ನಾಟಕ ರೂಪುಗೊಂಡಿದೆ.

    ಶ್ರಿಜಿತ್ ಸುಂದರಂ ನಿರ್ದೇಶನ ಈ ನಾಟಕಕ್ಕೆ ರೇವಂತ್ ಅಸೋಸಿಯೇಟ್ ನಿರ್ದೇಶಕರಾಗಿ ಹಾಗೂ ರೇವತಿ ಎ. ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ಬೆಳಕು ಮತ್ತು ವಿನ್ಯಾಸ ವಿಠಲ್ ಇವರು ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ರಿಜಿತ್ ಮತ್ತು ಸಂಕೀರ್ತಿ ಇವರದ್ದು. ಸಂದೀಪ್ ಮತ್ತು ಮದನ್ ಸಂಗೀತ ಸಂಯೋಜಿಸಿದ್ದು, ಪ್ರಸಾಧನ ಕೌಶಲ್ಯ ಶಂಕರ್ ಅವರದ್ದು. ಚಾಂದಿನಿ ಪಯಣ ಈ ನಾಟಕದ ನಿರ್ಮಾಣ ನಿರ್ವಹಣೆ ವಹಿಸಲಿದ್ದಾರೆ. ನಾಟಕದಲ್ಲಿ ರಂಗ ಮೇಲೆ ಶಾಂತಮ್ಮ, ಲಕ್ಷ್ಮಿಯಮ್ಮ, ರೇವತಿ ಎ., ಭಾನಮ್ಮ, ಶೋಭನಾ ಕುಮಾರಿ, ಸರವನ ಮತ್ತು ಚಾಂದಿನಿ ನಟಿಸಲಿದ್ದು, ರಂಗ ಹಿಂದೆ ಜನ್ನಿ ಭಾರತಿ, ಅರುವಿ, ಶರನ್, ಸತೀಶ್ ಮತ್ತು ತ್ರಿಮೂರ್ತಿ ಸಹಕರಿಸಲಿದ್ದಾರೆ.

    ಪ್ರೀತಿ ಹಾಗೂ ಅರಿವು ತುಂಬಿರುವ ಅಜ್ಜಿಕಥೆಗಳನ್ನು ಕೇಳುವ ಮುಗ್ಧ ಮಕ್ಕಳಾಗಿ, ಈ ಕಥೆಯನ್ನು ನೋಡಿ ಆನಂದಿಸಲು, ನಮ್ಮ ಬಂಧುಗಳೇ ಆದ ನಿಮ್ಮನ್ನು ಅಮಂತ್ರಿಸುತ್ತಿದ್ದೇವೆ.

    Share. Facebook Twitter Pinterest LinkedIn Tumblr WhatsApp Email
    Previous Articleಭರವಸೆಯ ನೃತ್ಯಕಲಾವಿದೆ ಮಾಧುರ್ಯ ಸುರೇಂದ್ರ ರಂಗಪ್ರವೇಶ | ಸಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ
    Next Article ಬೆಂಗಳೂರಿನಲ್ಲಿ ‘ಜನಪದ ದೀಪಾರಾಧನೆ 43’ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಕಲಿಕಾ ತರಬೇತಿ ಪ್ರಾರಂಭ

    July 5, 2025

    ಬೆಂಗಳೂರಿನ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ‘ಅನುಗ್ರಹ’ | ಜುಲೈ 06

    July 4, 2025

    ಹಿರಿಯ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಇವರಿಗೆ ‘ರಂಗ ಭಾಸ್ಕರ ಪ್ರಶಸ್ತಿ’

    July 4, 2025

    ತೀರ್ಥಹಳ್ಳಿಯಲ್ಲಿ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ | ಜುಲೈ 13

    July 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.