Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ‘ತಲ್ಕಿ’ ನಾಟಕದ ಪ್ರದರ್ಶನ | ಆಗಸ್ಟ್ 13
    Drama

    ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ‘ತಲ್ಕಿ’ ನಾಟಕದ ಪ್ರದರ್ಶನ | ಆಗಸ್ಟ್ 13

    August 11, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೈದರಾಬಾದ್ : ‘ಪಯಣ’ ಪ್ರಸ್ತುತ ಪಡಿಸುವ ಶ್ರೀಜಿತ್ ಸುಂದರಂ ನಿರ್ದೇಶನದ ‘ತಲ್ಕಿ’ ನಾಟಕದ ಪ್ರದರ್ಶನವನ್ನು ಅಭಿನಯ ಥಿಯೇಟರ್ ಫೆಸ್ಟಿವಲ್ -2025 ಕಾರ್ಯಕ್ರಮದಲ್ಲಿ ದಿನಾಂಕ 13 ಆಗಸ್ಟ್ 2025ರಂದು ಸಂಜೆ ಗಂಟೆ 8-00ಕ್ಕೆ ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ಆಯೋಜಿಸಲಾಗಿದೆ.

    ನಾಟಕದ ಕುರಿತು :
    ‘ತಲ್ಕಿ’ ನಾಟಕವು ಸಮುದಾಯದವರ ಜೀವನ ಕಥೆಗಳ ಆಧಾರದ ಸತ್ಯ ಕಥೆಗಳು. ಬರವಣಿಗೆ, ಸಮಾಜಸೇವೆ, ಸಮುದಾಯ ಮುಖ್ಯಸ್ಥರು, ಅಮ್ಮಂದಿರು, ಹೀಗೆ ಸಮಾಜದ ಬೇರೆ ಬೇರೆ ಘಟಕಗಳಲ್ಲಿ ಕೆಲಸ ಮಾಡುತ್ತಿರುವ, ಐವತ್ತು ವರ್ಷ ದಾಟಿರುವ ಮಂಗಳಮುಖಿಯರು ತಮ್ಮ ಈಡೇರದ ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ನಟನೆ ಹಾಗೂ ರಂಗ ಪ್ರಕ್ರಿಯೆಗಳ ನೆರವಿನಿಂದ ಹೋರಾಡಲು ಅವಕಾಶ ಕಲ್ಪಿಸಿಕೊಡುವ ವಿಶಿಷ್ಟ ಯತ್ನ ಈ ನಾಟಕ. ಇವರೆಲ್ಲರಿಗೂ ಇರುವ ಒಂದು ಸಾಮ್ಯತೆ ಎಂದರೆ ಸಮಯ ಹಾಗೂ ಸಮಾಜ ನೀಡಿರುವ ಗಾಯದ ಗುರುತುಗಳು.

    ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳ ಜೊತೆ ಅವಿನಾಭಾವ ಸಂಬಂಧವಿರುವ ಅವರ ದೇಹದ ಮೇಲಿನ ಗುರುತುಗಳು, ಆ ಪ್ರದೇಶಗಳ ಗುರುತುಗಳಾಗಿ ಮಾರ್ಪಟ್ಟಿವೆ ಎನ್ನಬಹುದು. ಇಂತಹ ಹಿಂಸೆ, ನೋವಿನ ನಡುವೆಯೂ, ಹೋರಾಡಿ ಬದುಕುವ ಅವರ ಛಲವನ್ನು, ಅವರ ಈಡೇರದ ನಿಜದ ಕನಸುಗಳನ್ನು, ಅವರ ಆಸೆ, ನಗು, ಅಳು, ಅಪಮಾನ, ಸ್ವಾಭಿಮಾನ, ಆತ್ಮಸ್ಥೈರ್ಯಗಳ ಜೊತೆ ಹೆಣೆಯುವ ಪ್ರಯತ್ನ ಈ ನಾಟಕ.

    ‘ತಲ್ಕಿ’ ನಾಟಕದ ಮಂಗಳಮುಖಿ ನಟರು, ತಮ್ಮ ಮೆಚ್ಚುಗೆಯ ಅಡುಗೆ ಮಾಡುತ್ತಾ, ಹಾಡುತ್ತಾ, ಕಥೆಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಜೀವನದ ಒಂದು ತುಣುಕನ್ನು ನಮಗೆ ಉಣಬಡಿಸಲಿದ್ದಾರೆ. ಇದರ ಮೂಲಕ ಅವರ ಸಮುದಾಯದ ವಿಶಿಷ್ಟ ಆಚರಣೆಗಳು, ಜೀವನ ಶೈಲಿ, ಸಂಸ್ಕೃತಿ, ಪರಿವಾರ ರಚನೆ ಹಾಗೂ ಇವುಗಳಲ್ಲಿ ತುಂಬಿರುವ ಪ್ರೀತಿ, ಮಮತೆ ಹಾಗೂ ಕರುಣೆಯ ಭಾವಗಳನ್ನು ರಂಗದ ಮೇಲೆ ತರುವ ಅಪರೂಪದ ಪ್ರಯೋಗವಾಗಿ ಈ ನಾಟಕ ರೂಪುಗೊಂಡಿದೆ.

    ಶ್ರಿಜಿತ್ ಸುಂದರಂ ನಿರ್ದೇಶನ ಈ ನಾಟಕಕ್ಕೆ ರೇವಂತ್ ಅಸೋಸಿಯೇಟ್ ನಿರ್ದೇಶಕರಾಗಿ ಹಾಗೂ ರೇವತಿ ಎ. ಸಹ ನಿರ್ದೇಶಕರಾಗಿ ಸಹಕರಿಸಿದ್ದಾರೆ. ಬೆಳಕು ಮತ್ತು ವಿನ್ಯಾಸ ವಿಠಲ್ ಇವರು ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ರಿಜಿತ್ ಮತ್ತು ಸಂಕೀರ್ತಿ ಇವರದ್ದು. ಸಂದೀಪ್ ಮತ್ತು ಮದನ್ ಸಂಗೀತ ಸಂಯೋಜಿಸಿದ್ದು, ಪ್ರಸಾಧನ ಕೌಶಲ್ಯ ಶಂಕರ್ ಅವರದ್ದು. ಚಾಂದಿನಿ ಪಯಣ ಈ ನಾಟಕದ ನಿರ್ಮಾಣ ನಿರ್ವಹಣೆ ವಹಿಸಲಿದ್ದಾರೆ. ನಾಟಕದಲ್ಲಿ ರಂಗ ಮೇಲೆ ಶಾಂತಮ್ಮ, ಲಕ್ಷ್ಮಿಯಮ್ಮ, ರೇವತಿ ಎ., ಭಾನಮ್ಮ, ಶೋಭನಾ ಕುಮಾರಿ, ಸರವನ ಮತ್ತು ಚಾಂದಿನಿ ನಟಿಸಲಿದ್ದು, ರಂಗ ಹಿಂದೆ ಜನ್ನಿ ಭಾರತಿ, ಅರುವಿ, ಶರನ್, ಸತೀಶ್ ಮತ್ತು ತ್ರಿಮೂರ್ತಿ ಸಹಕರಿಸಲಿದ್ದಾರೆ.

    baikady drama roovari
    Share. Facebook Twitter Pinterest LinkedIn Tumblr WhatsApp Email
    Previous Articleಕಾರ್ಕಳದಲ್ಲಿ ‘ಕ್ರಿಯೇಟಿವ್ ಪುಸ್ತಕ ಧಾರೆ 2025’ | ಆಗಸ್ಟ್ 13
    Next Article ಡಾ. ಸುರೇಶ ನೆಗಳಗುಳಿ ಇವರಿಗೆ ಅಂತಾರಾಷ್ಟ್ರೀಯ ಮಟ್ಟದ ‘ಕವಿ ಕುಲಪತಿ ಪ್ರಶಸ್ತಿ’
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025

    ಯುವ ನಾಟಕಕಾರ ನಾರಾಯಣ ಕೊಯಿಲ ನಿಧನ

    August 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.