Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗ ಹಬ್ಬಕ್ಕೆ ಇನ್ನಷ್ಟು ರಂಗು ತಂದ ರಂಗ ಸಂಗಾತಿ ಪ್ರತಿಷ್ಟಾನ, ಮಂಗಳೂರು – ಪೂರ್ಣಿಮಾ ಜನಾರ್ದನ ಕೊಡವೂರು (ವಿಮರ್ಶೆ)
    Drama

    ರಂಗ ಹಬ್ಬಕ್ಕೆ ಇನ್ನಷ್ಟು ರಂಗು ತಂದ ರಂಗ ಸಂಗಾತಿ ಪ್ರತಿಷ್ಟಾನ, ಮಂಗಳೂರು – ಪೂರ್ಣಿಮಾ ಜನಾರ್ದನ ಕೊಡವೂರು (ವಿಮರ್ಶೆ)

    March 3, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    03 ಮಾರ್ಚ್ 2023, ಉಡುಪಿ:  3ನೇ ದಿನದ ಸುಮನಸ ರಂಗ ಹಬ್ಬ(ಫೆಬ್ರವರಿ 28, ಮಂಗಳವಾರ)ದಲ್ಲಿ ಪ್ರದರ್ಶನಗೊಂಡ ದ್ಯಾಟ್ಸ್ ಆಲ್ ಯುವರ್ ಆನರ್ ಕನ್ನಡ ನಾಟಕ – ಪೂರ್ಣಿಮಾ ಜನಾರ್ದನ ಕೊಡವೂರು ಕಂಡಂತೆ

    ದ್ಯಾಟ್ಸ್ ಆಲ್ ಯುವರ್ ಆನರ್ – ಕನ್ನಡ ನಾಟಕ
    ತಂಡ: ರಂಗ ಸಂಗಾತಿ, ಮಂಗಳೂರು       
    ರಚನೆ-ನಿರ್ದೇಶನ: ಶಶಿರಾಜ್ ರಾವ್ ಕಾವೂರು

    ರಂಗಾಸಕ್ತರು ಪ್ರತಿ ವರುಷ ಕಾಯುವ ರಂಗ ಹಬ್ಬದಲ್ಲಿ ಇವತ್ತಿನ ರಂಗ ಮಂಟಪವನ್ನು ರಂಗಾಗಿಸಿದ್ದು ರಂಗ ಸಂಗಾತಿ ಪ್ರತಿಷ್ಠಾನ ರಿ. ಮಂಗಳೂರು ಪ್ರಸ್ತುತಪಡಿಸಿದ ಶಶಿರಾಜ್ ಕಾವೂರು ಸ್ವತಃ ರಚಿಸಿ ನಿರ್ದೇಶಿಸಿದ ದಾಟ್ಸ್ ಆಲ್ ಯುವರ್ ಆನರ್ ಎಂಬ ರಂಗ ಪ್ರದರ್ಶನ .
    ಕೋರ್ಟ್ ಕಲಾಪಗಳ ವಿಷಯಾಧಾರಿತವಾಗಿ ಆರಂಭದಿಂದ ಕೊನೆಯ ದೃಶ್ಯದವರೆಗೂ ಪ್ರೇಕ್ಷಕರನ್ನು ಹದವಾಗಿ ಹಿಡಿದಿಟ್ಟುಕೊಂಡು , ಒಂದಷ್ಟು ಯೋಚನೆಗೆ ಸಿಲುಕಿಸಿ ಅಲ್ಲಲ್ಲಿ ನಗೆ ಹನಿಯ ಉಕ್ಕಿಸುವ ನವಿರಾದ ಹಾಸ್ಯ ಭರಿತ ಸಾಲುಗಳೊಂದಿಗೆ ಆಗಾಗ ಗಾಂಭೀರ ಹೊತ್ತ ಅರ್ಥಪೂರ್ಣ ಪದಪುಂಜಗಳ ಜೋಡಣೆ. ಮನದಲ್ಲಿ ಮೆಲುಕು ಹಾಕುವಂತಹ ಕನ್ನಡ ಭಾಷಾ ಕಸ್ತೂರಿಯ ಸೊಬಗಿನೊಂದಿಗೆ ಅಡುಗೆಯ ರುಚಿ ಹೆಚ್ಚಿಸುವ ಒಗ್ಗರಣೆಯ ರೀತಿಯಲಿ ನಾಟಕದ ಮಧ್ಯಮಧ್ಯ ಸಂಸ್ಕೃತ ಶ್ಲೋಕಗಳ ಉಲ್ಲೇಖ. ಒಂದು ಅರ್ಥಪೂರ್ಣ ಸುಂದರ ಅನುಭಾವದ ನಾಟಕವನ್ನು ಇವತ್ತು ಅನುಭವಿಸಲು ಕಾರಣರಾದವರು ನಾಟಕದ ರಚನೆಯೊಂದಿಗೆ ನಿರ್ದೇಶನವನ್ನು ಮಾಡಿದ ಯುವ ಸಾಹಿತಿ ಶಶಿರಾಜ್ ಕಾವೂರು ಅಭಿನಂದನಾರ್ಹರು.
    ಒಂದು ನಾಟಕ ರಚನೆ ಆದ ಬಳಿಕ ನಾಟಕಕಾರನ ಕನಸಿನಂತೆ, ಮನಸ್ಸಿನಂತೆ ನಾಟಕ ಪ್ರದರ್ಶನ ಆಗಬೇಕಾದಲ್ಲಿ ಅದರ ನಿರ್ದೇಶನವನ್ನು ಕೂಡ ನಾಟಕಕಾರನೇ ಮಾಡಿದರೆ ಅದರ ಫಲಿತಾಂಶ ಒಂದಷ್ಟು ಅರ್ಥಪೂರ್ಣ.‌ ತನ್ನ ಮನದ ಭಾವನೆಗಳಿಗೆ ನೀಡಿದ ಅಕ್ಷರ ರೂಪವು ನಿರ್ದೇಶನದಲ್ಲಿ ಪ್ರತಿಫಲಿಸಿದಾಗ ಒಂದು ಉತ್ತಮ ನಾಟಕ ಪ್ರಸ್ತುತಿ ಸುಲಭ ಸಾಧ್ಯ. ಅದಕ್ಕೊಂದು ಉಪಮೆ ದಾಟ್ಸ್ ಆಲ್ ಯುವರ್ ಆನರ್ ನಾಟಕ.
    ಯಾವುದೇ ನಾಟಕದ ಯಶಸ್ವಿಗೆ ನಾಟಕ ರಚನೆ ಹಾಗೂ ನಿರ್ದೇಶನ ಒಂದು ಮಾನ ದಂಡವಾದರೂ ಆ ನಾಟಕಕ್ಕೆ ಜೀವ ತುಂಬುವುದು ಅದರಲ್ಲಿ ಅಭಿನಯಿಸುವ ಕಲಾವಿದರು. ಒಂದು ಯಶಸ್ವಿ ನಾಟಕದ ಸೂತ್ರಧಾರಿಗಳು ಕಲಾವಿದರು ಎಂದರೆ ತಪ್ಪಾಗಲಿಕ್ಕಿಲ್ಲ .ತನ್ನ ಘನ ಗಾಂಭೀರ ವ್ಯಕ್ತಿತ್ವ, ಎಲ್ಲಿಯೂ ತಡವರಿಸದ ಸ್ಪಷ್ಟ ಮಾತುಗಳಿಂದ ಇಡೀ ನಾಟಕದ ಜೀವಾಳವಾಗಿ ಅಭಿನಯಿಸಿದ ಮದನಮೋಹನ ರಾವ್ ಎಂ ಎಂ ಆರ್ (ಗೋಪಿನಾಥ್ ಭಟ್ ),ತನ್ನ ತೂಕದ ಮಾತುಗಳಿಂದ,ನಾಟಕದ ಪಾತ್ರದ ವಯಸ್ಸಿಗೆ ತಕ್ಕಂತೆ ಅಭಿನಯಿಸಿ ತನ್ನ ಪಾತ್ರಕ್ಕೆ ಜೀವ ತುಂಬಿ ನಟಿಸಿ ಮನೆಗೆದ್ದ ನ್ಯಾಯಾಧೀಶ (ಲಕ್ಷ್ಮಣ ಮಲ್ಲೂರ್ ),ನಾಟಕ ದುದ್ದಕ್ಕೂ ತನ್ನ ವಿಶಿಷ್ಟ ಆಂಗಿಕ ಅಭಿನಯ, ಮಧ್ಯೆ ಮಧ್ಯೆ ತಮಾಷೆಯ ಮಾತುಗಳಿಂದ ಶೋತ್ರಗಳನ್ನು ನಗೆಗಡಲಲ್ಲಿ ತೇಲಿಸಿ ಒಲಿಸಿಕೊಂಡ ಜನಪ್ರಿಯ ಶಿಂಧೆ (ಮೈಮ್ ರಾಮದಾಸ್ ),ಪಂಚರ್ ಹಾಕುವವನ ಪಾತ್ರದಲ್ಲಿ ಅಮಾಯಕನಂತೆ ನಟಿಸಿ ಸೈ ಅನಿಸಿಕೊಂಡ ಜಯರಾಮ್ (ಮುರಳೀಧರ ಕಾಮತ್), ಅಂತೆಯೇ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ ದತ್ತಾತ್ರೇಯ (ಸಂತೋಷ್ ಶೆಟ್ಟಿ) ವಕೀಲ (ರಂಜನ್ ಬೋಳೂರ್ ) ಮೆಲು ವ್ಯಕ್ತಿತ್ವದ ಮೃದು ಮಾತಿನ ಗಣಪಯ್ಯ, ವೇದಿಕೆ ಪ್ರವೇಶಿಸಿ ಅಭಿನಯಿಸಿದ ಐದೇ ನಿಮಿಷಗಳಲ್ಲಿ ಪ್ರೇಕ್ಷಕರ ಮೊಗದಲ್ಲಿ ನಗೆ ತಂದ ಚಿನ್ನಸ್ವಾಮಿ ಪಳನಿ ಸ್ವಾಮಿ ( ಸುಧೀರ್ ರಾಜ್ ಉರ್ವ) , ಹೀಗೆ ಅಭಿನಯಿಸಿದ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದವರು .ಅಲ್ಲದೆ ಕಿವಿಗಳಿಗೆ ಇಂಪಾದ ಮನಕೆ ತಂಪು ನೀಡಿದ ಹಿತವಾದ ಸಂಗೀತ ,ನಾಟಕ ದುದ್ದಕ್ಕೂ ಅರ್ಥಪೂರ್ಣವಾದ ಸಾಹಿತ್ಯ, ಪ್ರತಿಯೊಂದು ದೃಶ್ಯಕ್ಕೆ ಒಪ್ಪುವ ಅಪೂರ್ವ ರಂಗ ಸಜ್ಜಿಗೆ ಹೀಗೆ ಒಂದು ಯಶಸ್ವಿ ನಾಟಕ ಪ್ರದರ್ಶನಕ್ಕೆ ಅಗತ್ಯವಾದ ಎಲ್ಲಾ ವಿಷಯಗಳನ್ನು ಒಳಗೊಂಡ ದಾಟ್ಸ್ ಆಲ್ ಯುವರ್ ಆನರ್ ನಿಜವಾಗಿಯೂ ಪ್ರೇಕ್ಷಕರ ಮನದಲ್ಲಿ ಬಹುಕಾಲ ಉಳಿಯುವಂತಹ, ಮನಕ್ಕೆ ಮುದ ನೀಡಿದಂತಹ ನಾಟಕ ಎಂದರೆ ಸುಳ್ಳಲ್ಲ. ಈ ನಾಟಕದ ಎಲ್ಲಾ ಕಲಾವಿದರಿಗೆ ,ನಾಟಕದ ರಚನೆ ಹಾಗೂ ನಿರ್ದೇಶನ ಮಾಡಿದ ಖ್ಯಾತ ಸಾಹಿತಿ ಶಶಿರಾಜ್ ಕಾವೂರು ಹಾಗು ಈ ನಾಟಕ ರಂಗಹಬ್ಬದಲ್ಲಿ ಪ್ರಸ್ತುತ ಪಡಿಸಲು ಕಾರಣವಾದ ಸುಮನಸಾ ಸಂಸ್ಥೆ ಕೊಡವೂರು ಇವರೆಲ್ಲರಿಗೂ ಅಭಿನಂದನೆಗಳು, ಅಭಿವಾದನೆಗಳು.

     

    • ಪೂರ್ಣಿಮಾ ಜನಾರ್ದನ ಕೊಡವೂರು

     

    Share. Facebook Twitter Pinterest LinkedIn Tumblr WhatsApp Email
    Previous Articleಮಾರ್ಚ್ 5ಕ್ಕೆ 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮೂಲ್ಕಿ ಪುನರೂರಿನಲ್ಲಿ
    Next Article ರಂಗ ಹಬ್ಬದ ರಂಗಸ್ಥಳ ರಂಗೇರಿಸಿದ ಏಕಲವ್ಯ ಯಕ್ಷಗಾನ – ಪೂರ್ಣಿಮಾ ಜನಾರ್ದನ ಕೊಡವೂರು (ವಿಮರ್ಶೆ)
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ | ಮೇ 04

    May 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.