Subscribe to Updates

    Get the latest creative news from FooBar about art, design and business.

    What's Hot

    ಮೂಡಬಿದಿರೆಯಲ್ಲಿ ‘ರಂಗ ಸಂಸ್ಕ್ಕತಿ’ ಉಪನ್ಯಾಸ

    August 15, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತೆಂಟನೇ ಉಪನ್ಯಾಸ

    August 14, 2025

    ಜವಾಬ್ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ

    August 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶೇಣಿಯಲ್ಲಿ ಅದ್ದೂರಿಯಾಗಿ ನಡೆದ 63ನೇ ಕೇರಳ ರಾಜ್ಯ ಶಾಲಾ ಕಲೋತ್ಸವ
    Cultural

    ಶೇಣಿಯಲ್ಲಿ ಅದ್ದೂರಿಯಾಗಿ ನಡೆದ 63ನೇ ಕೇರಳ ರಾಜ್ಯ ಶಾಲಾ ಕಲೋತ್ಸವ

    November 21, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಕೇರಳ ರಾಜ್ಯ ಶಾಲಾ ಕಲೋತ್ಸವ ದಿನಾಂಕ 18 ನವೆಂಬರ್ 2024ರ ಸೋಮವಾರದಂದು ನಡೆಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಜೇಶ್ವರದ ಶಾಸಕ ಎ. ಕೆ. ಎಂ. ಅಶ್ರಫ್ ಮಾತನಾಡಿ “ಕೇರಳದಲ್ಲಿ ಪ್ರತಿ ವರ್ಷ ನಡೆಯುವ ಶಾಲಾ ಕಲೋತ್ಸವವನ್ನು ಏಷ್ಯಾದ ಅತಿ ದೊಡ್ಡ ಕಲೋತ್ಸವ ಎಂದೇ ಅಂತಾರಾಷ್ಟ್ರೀಯ ಮಾಧ್ಯಮಗಳು ಬಿಂಬಿಸಿವೆ. ಪಠ್ಯದೊಂದಿಗೆ ಕಲೆ, ಕ್ರೀಡೆ ಸಹಿತ ಪಠೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕೇರಳದ ಶಿಕ್ಷಣ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಕಲೆಗೆ ಜಾತಿ, ಮತ, ಧರ್ಮಗಳ ಬೇಧವಿಲ್ಲ. ಇದರಿಂದ ಜನರನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ. ಯಕ್ಷಗಾನ, ಭರತ ನಾಟ್ಯ, ಶಾಸ್ತ್ರೀಯ ಸಂಗೀತ ಸಹಿತ ನಾನಾ ಕಲಾ ಪ್ರಕಾರಗಳನ್ನೊಳಗೊಂಡ ಶಾಲಾ ಕಲೋತ್ಸವವು ನಾಳೆಯ ಗೋವಿಂದ ಪೈ ಹಾಗೂ ಕಯ್ಯಾರ ಕಿಂಞಣ್ಣ ರೈಗಳಂಥ ಮೇರು ವ್ಯಕ್ತಿಗಳನ್ನು ನಾಡಿಗೆ ಸಮರ್ಪಿಸುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.” ಎಂದರು.
    ಎಣ್ಮಕಜೆ ಗ್ರಾಮ ಪಂಚಾಯತ್ ಮತ್ತು ಕಲೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸೋಮಶೇಖರ್ ಜೆ. ಎಸ್. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಿ.ಬಿ.ಐ ವಿಭಾಗದ ಬೆಂಗಳೂರು ಶಾಖೆಯ ಸೀನಿಯರ್ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉದುಮ ಶಾಸಕ ಸಿ.ಎಚ್. ಕುಂಞಂಬು ಮಾತನಾಡಿ “ಯಕ್ಷಗಾನ ಕೇವಲ ತುಳುನಾಡಿಗೆ ಸೀಮಿತವಾಗಿಲ್ಲ. ಕಲೆಗೆ ಜಾತಿ, ಮತ, ಸ್ಥಳಗಳ ಸೀಮೆಯಿಲ್ಲ.” ಎಂದು ಅಭಿಪ್ರಾಯ ಪಟ್ಟರು.


    ಉದ್ಯಮಿ ಅಬ್ದುಲ್ಲ ಮಧುಮೂಲೆ, ಅಬುಧಾಬಿ ಯು .ಎ. ಇ ಎಕ್ಸ್‌ಚೇಂಜ್ ಇದರ ನಿವೃತ್ತ ಸಿ. ಇ. ಒ. ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಪುತ್ತಿಗೆ ಗ್ರಾ. ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಮಣಿಯಂಪಾರೆ ಇಗರ್ಜಿಯ ಧರ್ಮಗುರು ಫಾ. ನೆಲ್ಸನ್ ಡಿ. ಅಲ್ಮೆಡಾ, ನವಜೀವನ ವಿಶೇಷ ಶಾಲೆಯ ವ್ಯವಸ್ಥಾಪಕ ಫಾ. ಜೋಸ್ ಚೆಂಬೋಟಿಕ್ಕಲ್ ಹಾಗೂ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
    ಎಣ್ಮಕಜೆ ಗ್ರಾ. ಪಂ. ಉಪಾಧ್ಯಕ್ಷೆ ರಮ್ಲ ಇಬ್ರಾಹಿಂ, ಜಿ. ಪಂ. ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂ. ಸದಸ್ಯರಾದ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ. ಪಿ. , ವಿದ್ಯಾ ಸಂಸ್ಥೆಯ ವ್ಯವಸ್ಥಾಪಕಿ ಶಾರದಾ ವೈ., ಸ್ವಾಗತ ಸಮಿತಿ ಸಂಚಾಲಕ ಹಾಗೂ ಯು. ಪಿ. ವಿಭಾಗದ ಮುಖ್ಯ ಶಿಕ್ಷಕ ರಾಧಾಕೃಷ್ಣ ನಾಯಕ್ ಶೇಣಿ, ಸಹ ಸಂಚಾಲಕ ಮತ್ತು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶ್ರೀಶ ಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿ’ಸೋಜ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೂಸುಫ್ ಶೇಣಿ, ಎಣ್ಮಕಜೆ – ಪುತ್ತಿಗೆ ಗ್ರಾ. ಪಂ. ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಶಶಿಧರ್ ಸ್ವಾಗತಿಸಿ, ಶಿಕ್ಷಕ ಅಶ್ರಫ್ ಮರ್ತ್ಯ ನಿರೂಪಿಸಿ, ಹೈಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಶಾಸ್ತ ಕುಮಾರ್ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸರಿಗಮ ಭಾರತಿ ಸಂಗೀತ ವಿದ್ಯಾಲಯದಲ್ಲಿ ರಾಗರತ್ನಮಾಲಿಕೆ -31 ‘ಗೃಹಸಂಗೀತ’ ಕಾರ್ಯಕ್ರಮ
    Next Article ನೃತ್ಯಾಂಗನ್ ಪ್ರಸ್ತುತ ಪಡಿಸುವ ‘ಮಂಥನ’ ಭರತನಾಟ್ಯ ಕಾರ್ಯಕ್ರಮ | ನವೆಂಬರ್ 22
    roovari

    Add Comment Cancel Reply


    Related Posts

    ರಾಜ್ಯ ಒಕ್ಕಲಿಗರ ಒಕ್ಕೂಟದಿಂದ ರಾಜ್ಯಮಟ್ಟದ ಜಾನಪದ ಸಂಭ್ರಮ

    August 12, 2025

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ವೈವಿಧ್ಯಮಯ ಕಾರ್ಯಕ್ರಮ’ | ಆಗಸ್ಟ್ 15

    August 12, 2025

    ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 25

    August 12, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.