ಬಂಟ್ವಾಳ : ತುಳು ರಂಗಭೂಮಿಯ ಹವ್ಯಾಸಿ ಕಲಾವಿದ, ಮಾಣಿ ಸಮೀಪದ ಕಾಪಿಕಾಡು ನಿವಾಸಿ ಮೌನೇಶ ಆಚಾರ್ಯ ಮಾಣಿ ಇವರು ಹೃದಯಾಘಾತಕ್ಕೊಳಗಾಗಿ ದಿನಾಂಕ 15 ಜುಲೈ 2025ರಂದು ನಿಧನರಾದರು, ಅವರಿಗೆ 44ವರ್ಷ ವಯಸ್ಸಾಗಿತ್ತು.
ಹಾಸ್ಯಪ್ರಜ್ಞೆಯ ಇವರು ಜಯಂ ಕಲಾನಿಕೇತನ ಮಾಣಿ ನೃತ್ಯತಂಡದಲ್ಲಿ ಕಲಾವಿದರಾಗಿ ಗುರುತಿಸಿದ್ದರು. ಕಲಾಮಾತೆ ನಾಗನವಳಚ್ಚಿಲ್ ತಂಡದಲ್ಲೂ ಕಲಾಸೇವೆ ಮಾಡುತ್ತಿದ್ದ ಅವರು ಹಿರಿಯ ಕಲಾವಿದ ದಿವಂಗತ ಶಾಂತರಾಮ್ ಕಲ್ಲಡ್ಕ ಅವರ ಕಲಾ ಬಳಗದ ನಾಟಕಗಳಲ್ಲಿಯೂ ಅಭಿನಯಿಸಿದ್ದರು.
ಪ್ರಸ್ತುತ ನಮ್ಮ ಕಲಾವಿದರು ನೆಲ್ಯಾಡಿ ತುಳುನಾಟಕ ತಂಡದಲ್ಲಿ ಕಲಾಸೆವೆಗೈಯುತ್ತಿದ್ದ ಇವರು ಹಲವು ಹಾಸ್ಯ ವೀಡಿಯೋಗಳಲ್ಲಿ ಅಭಿನಯಿಸಿದ್ದಾರೆ. ಮೃತರು ತಾಯಿ, ಸಹೋದರ, ಪತ್ನಿ, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.
Previous Article2025-26ನೆಯ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಹಾಗೂ ರತ್ನ ಪರೀಕ್ಷೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ
Next Article ಸಾಗರದಲ್ಲಿ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ | ಜುಲೈ 19