Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಾಂಗಣದಿಂದ ಆನಂದ ಆಳ್ವ, ಪೆರುವಡಿ ಹಾಸ್ಯಗಾರರಿಗೆ ಶ್ರದ್ಧಾಂಜಲಿ
    Yakshagana

    ಯಕ್ಷಾಂಗಣದಿಂದ ಆನಂದ ಆಳ್ವ, ಪೆರುವಡಿ ಹಾಸ್ಯಗಾರರಿಗೆ ಶ್ರದ್ಧಾಂಜಲಿ

    November 4, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ದಿನಾಂಕ 31-10-2023 ರಂದು ಮೂಡುಬಿದಿರೆಯಲ್ಲಿ ನಿಧನರಾದ ಹಿರಿಯ‌ ಸಾಧಕ ಹಾಗೂ ಸಾಮಾಜಿಕ ನೇತಾರ ಎಂ.ಆನಂದ ಆಳ್ವ ಮತ್ತು ಅದೇ ದಿನ ಸಾಯಂಕಾಲ ನಿಧನರಾದ ಯಕ್ಷಗಾನದ ಹಿರಿಯ ಹಾಸ್ಯ ದಿಗ್ಗಜ ಪೆರುವಡಿ ನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ದಿನಾಂಕ 01-11-2023 ರಂದು ಮಂಗಳೂರಿನ ‘ಯಕ್ಷಾಂಗಣ’ದಲ್ಲಿ ನಡೆಯಿತು.

    “ತಮ್ಮ ಶಿಸ್ತುಬದ್ಧ ಜೀವನ ಶೈಲಿಯಿಂದಾಗಿ 2023 ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನದಂದು 106 ವಸಂತಗಳ ತುಂಬು ಬದುಕನ್ನು ಪೂರೈಸಿದ್ದ ಮಿಜಾರುಗುತ್ತು ಆನಂದ ಆಳ್ವರು ಪರಿಪೂರ್ಣ ವ್ಯಕ್ತಿತ್ವಕ್ಕೊಂದು ಶ್ರೇಷ್ಠ ಮಾದರಿ. ಶತಾಯುಷಿಗಳಾಗಿ ಆಗಲೇ ಅಮರತ್ವಕ್ಕೇರಿದ್ದ ಅವರು ಇದೀಗ ಭೌತಿಕವಾಗಿ ನಮ್ಮನ್ನಗಲಿದ್ದಾರೆ.  ಕೃಷಿ ಬದುಕಿನ ಉನ್ನತ ನಿದರ್ಶನವೂ ಸೇರಿದಂತೆ ಆಧುನಿಕ ಮೂಡಬಿದ್ರೆಯ ಶಿಲ್ಪಿ, ಕನ್ನಡ ನಾಡಿನ ಸಾಂಸ್ಕೃತಿಕ ವಕ್ತಾರ ಡಾ.ಎಂ.ಮೋಹನ ಆಳ್ವರೇ ಸ್ವಯಂ ಆನಂದ ಆಳ್ವರು ಸಮಾಜಕ್ಕೆ ಬಿಟ್ಟು ಹೋದ ದೊಡ್ಡ ಆಸ್ತಿ’. ” ಎಂದು ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

    ಹಾಸ್ಯರಸದ ಮೇರು ಪ್ರತಿಭೆ ಪೆರುವಡಿ:
      ಅದೇ ದಿನ ಸಾಯಂಕಾಲ ನಿಧನರಾದ ಯಕ್ಷಗಾನದ ಹಿರಿಯ ಹಾಸ್ಯ ದಿಗ್ಗಜ ಪೆರುವಡಿ ನಾರಾಯಣ ಭಟ್ಟರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ “ಪಾಪಣ್ಣ ಭಟ್ಟರೆಂದೇ ಜನಪ್ರಿಯರಾದ ಯಕ್ಷಗಾನದ ಶ್ರೇಷ್ಠ ಹಾಸ್ಯಗಾರ, ಗಂಭೀರ ಹಾಸ್ಯದ ಚರಿತ್ರ ನಟ, ಮೇಳ ಸಂಘಟಕ ಪುತ್ತೂರು ನಾರಾಯಣ ಭಟ್ಟರು ನೂರರ ಹೊಸ್ತಿಲಲ್ಲಿರುವಾಗಲೇ ನಮ್ಮನ್ನಗಲಿರುವುದು ಮತ್ತೊಂದು ದೊಡ್ಡ ಆಘಾತ. ಹಳೆಯ ತಲೆಮಾರಿನ ಹಿರಿಯ ಪ್ರತಿನಿಧಿಯಾಗಿದ್ದ ಅವರು ಕಲಾವಂತಿಕೆ ಮತ್ತು ಸಜ್ಜನಿಕೆ ಮೇಳೈಸಿದ ಅಪರೂಪದ ಕಲಾವಿದರು ಮತ್ತು ಹಾಸ್ಯರಸದ ಮೇರು ಪ್ರತಿಭೆ” ಎಂದರು.

    ಯಕ್ಷಾಂಗಣದ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ರವೀಂದ್ರ ರೈ ಕಲ್ಲಿಮಾರು,  ಉಮೇಶ್ ಆಚಾರ್ಯ ಗೇರುಕಟ್ಟೆ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ನಿವೇದಿತಾ ಎನ್ ಶೆಟ್ಟಿ ನುಡಿ ನಮನ ಸಲ್ಲಿಸಿದರು.

    ಇದೇ ಸಂದರ್ಭದಲ್ಲಿ ನಿನ್ನೆ ಅಕಾಲಿಕವಾಗಿ ಅಗಲಿ ಹೋದ ಉತ್ಸಾಹೀ ಪತ್ರಕರ್ತ – ಸಂಘಟಕ ಶೇಖರ ಅಜೆಕಾರು ಅವರ ನಿಧನಕ್ಕೂ ತೀವ್ರ ಸಂತಾಪ ವ್ಯಕ್ತಪಡಿಸಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಶಿಬಿರ ‘ಸಾಹಿತ್ಯ ಸಂಭ್ರಮ’
    Next Article ವಿಶ್ವಮಂಗಳದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ವಿಶೇಷೋಪನ್ಯಾಸ
    roovari

    Add Comment Cancel Reply


    Related Posts

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025

    ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ | ಜೂನ್ 15 ರಿಂದ 21

    June 14, 2025

    ಸುಬ್ರಾಯ ಹೊಳ್ಳರಿಗೆ ‘ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ’

    June 14, 2025

    ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

    June 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.