Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಕನ್ನಡದ ಮೇಲ್ಪಂಕ್ತಿಯ ಬರಹಗಾರ ಶಾಂತಿನಾಥ ದೇಸಾಯಿ

    July 22, 2025

    ಸಾಲಿಗ್ರಾಮ ಮಕ್ಕಳ ಮೇಳದಿಂದ ಹಾರಾಡಿ – ಮಟಪಾಡಿ ಯಕ್ಷಗಾನ ಪ್ರಾತ್ಯಕ್ಷಿಕೆ

    July 22, 2025

    ಕೊಂಕಣಿ ಸಾಹಿತಿ ಸಿಂಪ್ರೊಜಾ ಫಿಲೋಮಿನ ಗ್ಲೇಡಿಸ್ ಸಿಕ್ವೇರಾ ನಿಧನ

    July 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೀಲಾವತಿ ಬೈಪಾಡಿತ್ತಾಯರಿಗೆ ‘ಗಾನ ನಮನ’
    Yakshagana

    ಲೀಲಾವತಿ ಬೈಪಾಡಿತ್ತಾಯರಿಗೆ ‘ಗಾನ ನಮನ’

    December 27, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ‘ನಿಲ್ಲದ ಮನವಲ್ಲಿ ಪೋಗದೆ ಕಳುಹಿಸಲಾಗದೆ…’ ಪ್ರಾಣವಲ್ಲಭ ಭಾಗವತೆ ಶಾಲಿನಿ ಹೆಬ್ಬಾರ್ ಮಧುರ ರಾಗ ಚಾರುಕೇಶಿಯಲ್ಲಿ ದಕ್ಷಾಧ್ವರ ಪ್ರಸಂಗದ ಈ ಪದವನ್ನು ಏರುಧ್ವನಿಯಲ್ಲಿ ಹಾಡುತ್ತಿದ್ದರೆ, ಅವರ ಗುರು ಲೀಲಾವತಿ ಬೈಪಾಡಿತ್ತಾಯ ಅವರ ಭಾವಚಿತ್ರದ ಮೇಲೆ ದೃಷ್ಟಿ ನೆಟ್ಟಿದ್ದ ಯಕ್ಷಗಾನಪ್ರಿಯರ ಕಣ್ಣುಗಳು ಮಂಜಾಗಿದ್ದವು.

    ಈಚೆಗೆ ನಿಧನರಾದ ಬಜಪೆ ಸಮೀಪದ ತಲಕಲ ನಿವಾಸಿ, ಯಕ್ಷಗಾನ ಕ್ಷೇತ್ರದಲ್ಲಿ ಮಹಿಳಾ ಕ್ರಾಂತಿಗೆ ಕಾರಣರಾದ ಲೀಲಾವತಿ ಬೈಪಾಡಿತ್ತಾಯ ಅವರ ಮನೆಯ ಸಮೀಪದ ಕಾಶಿ ವಿಶ್ವನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ದಿನಾಂಕ 26 ಡಿಸೆಂಬರ್ 2024ರ ಗುರುವಾರ ನಡೆದ ‘ಗಾನ ನಮನ’ ಕಾರ್ಯಕ್ರಮದಲ್ಲಿ ಲೀಲಾವತಿ ಅವರ ಶಿಷ್ಯರು ಮತ್ತು ಅಭಿಮಾನಿಗಳು ಯಕ್ಷಗಾನದ ಪದಗಳನ್ನು ಹಾಡಿ ಅಗಲಿದ ಕಲಾವಿದೆಯನ್ನು ಸ್ಮರಿಸಿದರು.

    ‘ನಿಲ್ಲದ ಮನವಲ್ಲಿ ಪೋಗದೆ…’ ಹಾಡಿಗೂ ಮೊದಲು ‘ಕಾಮಿನಿ ಮಣಿ ಕೇಳು..’ ಹಾಡಿಗೆ ಸಭಿಕರ ಒತ್ತಾಯದ ಮೇರೆಗೆ ಲೀಲಾವತಿ ಅವರ ಪತಿ ಹರಿನಾರಾಯಣ ಬೈಪಾಡಿತ್ತಾಯರು ಮದ್ದಲೆ ನುಡಿಸಿದರೆ ಪುತ್ರ ಅವಿನಾಶ್ ಬೈಪಾಡಿತ್ತಾಯ ಚೆಂಡೆ ಸಹಕಾರ ನೀಡಿದರು. ವಾಲಿಮೋಕ್ಷ ಪ್ರಸಂಗದ ‘ಕರುಣವಿಷ್ಟೇ ಸಾಕು..’ ಹಾಡು ಹಿಂದೋಳ ರಾಗದಲ್ಲಿ ತೇಲಿಬಂದು ಕಲಾಪ್ರಿಯರ ಹೃದಯ ಕಲಕಿತು.

    ಕಾರ್ಯಕ್ರಮದಲ್ಲಿ ಲೀಲಾವತಿ ಅವರ ನೆನಪಿನಲ್ಲೇ ಬರೆದ ಹಾಡುಗಳು ಕೂಡ ಕೇಳಿಬಂದವು. ಬೆಳ್ಳಾರೆ ಮಂಜುನಾಥ ರಚಿಸಿದ ‘ಪರಮ ಷಡುರಸ ಭೋಜನದ ಸವಿ…’ಯನ್ನು ಶಾಲಿನಿ ಅವರು ಭೈರವಿ ಮತ್ತು ಕಲ್ಯಾಣಿ ರಾಗಗಳ ಮಾಲಿಕೆಯಲ್ಲಿ ಹೆಣೆದು ಹಾಡಿದರೆ, ಭಾಗವತ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ ಅವರು ಧರ್ಮಸ್ಥಳ ಮೇಳದ ಗಿರೀಶ್ ಹೆಗಡೆ ಬರೆದ ‘ಕನ್ನಡಾಂಬೆಯ ದಿವ್ಯ ಕಲೆ ಕಲಾವಿದರೆಲ್ಲ ಕನ್ನಡಿಯಹುದು ಸಂಸ್ಕೃತಿಗೆ…’ ಹಾಡನ್ನು ಮಧ್ಯಮಾವತಿ ರಾಗದಲ್ಲಿ, ‘ಅಳಿವು ಜೀವಿಗೆ ಸಹಜವಾದರೂ ನಲಿದು ಬಳಸಿದ ದಿನವೆ ಸುಂದರ…’ ಮತ್ತು ‘ಜನನದಲೆ ಕೊನೆದಿನದ ಗಳಿಗೆಯನೆಣಿಸಿ ಕಳುಹುವ ದೇವ…’ವನ್ನು ಮೋಹನ ರಾಗದಲ್ಲಿ ಪ್ರಸ್ತುತಪಡಿಸಿದರು.

    ಲೀಲಾವತಿ ಅವರ ಶಿಷ್ಯರಾದ ದಿವ್ಯಶ್ರೀ ಮತ್ತು ಮುರಾರಿ ಭಟ್ ಅವರೂ ಹಾಡಿದರು. ಚಂಡೆ ಮದ್ದಳೆಯಲ್ಲಿ ಆನಂದ ಗುಡಿಗಾರ್, ಗಿರೀಶ್ ಕಿನಿಲಕೋಡಿ ಮತ್ತು ಚಂದ್ರಶೇಖರ ಕೊಂಕಣಾಜೆ ಸಹಕರಿಸಿದರು. ಪ್ರದೀಪ್‌ ಕುಮಾರ್ ಕಲ್ಕೂರ, ಪ್ರಭಾಕರ ರಾವ್ ಪೇಜಾವರ, ಸಂಜಯ ರಾವ್ ಮತ್ತು ಶರವು ಶ್ರೀನಿವಾಸ ರಾವ್ ನುಡಿನಮನ ಸಲ್ಲಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಪ್ರಸಾರ ಭಾರತಿಯಿಂದ ಎ-ಗ್ರೇಡ್ ಮಾನ್ಯತೆ ಪಡೆದ ಅಂಕುಶ್ ಎನ್. ನಾಯಕ್
    Next Article ತೆಕ್ಕಟ್ಟೆಯ ಹಯಗ್ರೀವದಲ್ಲಿ ಉದ್ಘಾಟನೆಗೊಂಡ “ನಾಟಕಾಷ್ಟಕ”
    roovari

    Add Comment Cancel Reply


    Related Posts

    ಸಾಲಿಗ್ರಾಮ ಮಕ್ಕಳ ಮೇಳದಿಂದ ಹಾರಾಡಿ – ಮಟಪಾಡಿ ಯಕ್ಷಗಾನ ಪ್ರಾತ್ಯಕ್ಷಿಕೆ

    July 22, 2025

    ಕಲ್ಕೂರ ಪ್ರತಿಷ್ಠಾನದ ವತಿಯಿಂದ ನುಡಿ ನಮನ

    July 22, 2025

    ಉಡುಪಿಯಲ್ಲಿ ‘ಯಕ್ಷ ಸಾಧಕ’ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ

    July 22, 2025

    ಯಕ್ಷಗಾನ ಗುರು, ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಿಗೆ ಗುರುಪೂರ್ಣಿಮೆಯ ಗುರುವಂದನೆ

    July 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications