Subscribe to Updates

    Get the latest creative news from FooBar about art, design and business.

    What's Hot

    ʼಸಾಹಿತ್ಯ ಭಂಡಾರʼ ಕಾರ್ಯಕ್ರಮ

    October 21, 2025

    ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ತಾಳಮದ್ದಳೆ – ಸದಸ್ಯ ಸಮಾವೇಶ ಬಡಗು ಯಕ್ಷಗಾನ | ಅಕ್ಟೋಬರ್ 26

    October 21, 2025

    ಎಸ್.ಡಿ.ಎಮ್. ಕಾನೂನು ಕಾಲೇಜಿನಲ್ಲಿ ದಿನೇಶ ಅಮ್ಮಣ್ಣಾಯರಿಗೆ ನುಡಿ ನಮನ

    October 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ಸಾಧಕರಿಗೆ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ
    Felicitation

    ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ಸಾಧಕರಿಗೆ ಸನ್ಮಾನ ಮತ್ತು ಯಕ್ಷಗಾನ ಪ್ರದರ್ಶನ

    January 14, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ನವಭಾರತ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವಭಾರತ ಯಕ್ಷಗಾನ ಅಕಾಡೆಮಿಯ ‘ದಶಮಾನೋತ್ಸವ ಸಮಾರಂಭವು ದಿನಾಂಕ 11 ಜನವರಿ 2025ರಂದು ಮಂಗಳೂರಿನ ಮಣ್ಣಗುಡ್ಡೆ ಸಂಘನಿಕೇತನದ ‘ಸುಜ್ಞಾನ’ ಸಭಾಂಗಣದಲ್ಲಿ ನಡೆಯಿತು.

    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪಿ. ವಾಮನ ಶೆಣೈಯವರು ಮಾತನಾಡಿ “ನಮ್ಮ ಭಾರತೀಯ ಸಂಸ್ಕೃತಿಗಳನ್ನು ಯಕ್ಷಗಾನ ಪ್ರತಿಪಾದಿಸುತ್ತಿದೆ. ದೈಹಿಕ ಶ್ರಮದ ಮೂಲಕ, ಅದರಲ್ಲಿನ ಲಾಸ್ಯದ ಮೂಲಕ, ನಾಟ್ಯದ ಮೂಲಕ ಭಿನ್ನಭಿನ್ನ ಪರಂಪರೆಯನ್ನು ಒಂದೇ ಸುತ್ತಿನಡಿ ತಂದು ಅದು ಬೆಳಗುತ್ತದೆ. ಶಿಕ್ಷಣದ ಪ್ರತಿಯೊಂದು ರೆಂಬೆಗಳೂ ತುಂಬಿಕೊಂಡಿರಬೇಕಾದರೆ ಈ ರೀತಿಯ ಸಾಂಸ್ಕೃತಿಕ ಪುನರುತ್ಥಾನ ಈ ವಿಶಿಷ್ಠ ಕಲೆಯಲ್ಲಿದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಿಸಿದ ನವಭಾರತ ಎಜ್ಯುಕೇಶನ್ ಸೊಸೈಟಿಯಲಿ ಯಕ್ಷಗಾನ ಅಕಾಡೆಮಿಯನ್ನು ನಡೆಸುತ್ತಾ ಇದೀಗ ಹತ್ತರ ಸಂಭ್ರಮದಲ್ಲಿದೆ. ನಗರದ ಬೇರೆ ಬೇರೆ ಶಾಲೆಗಳಿಂದ ಇಲ್ಲಿ ಯಕ್ಷ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ನಾವು ಮುಕ್ತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಈ ಪ್ರಕ್ರಿಯೆಗಾಗಿ ನಾವೆಲ್ಲರೂ ಕೈಜೋಡಿಸಿ ಸಹಯೋಗಿಗಳಾಗೋಣ ಎಂದು ಕರೆ ನೀಡಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಮಧೂಸೂದನ ಅಯಾರ್ ಇವರು ಮಾತನಾಡಿ ನವಭಾರತ ಎಜ್ಯುಕೇಶನ್ ಸೊಸೈಟಿಯ ಸ್ಥಾಪನೆಯ ಉದ್ದೇಶ. ಅದರ ಬೆಳವಣಿಗೆಗಳ ಬಗ್ಗೆ ಪ್ರಸಾವಿಸಿದರು. ಎಲ್ಲಾ ವರ್ಗಗಳವರನ್ನೂ ತಲುಪುವ ಸಿ.ಎ. ತರಗತಿಗಳು, ಯಕ್ಷಗಾನ, ವೇದಿಕ್ ಮ್ಯಾಥ್ಸ್, ಯೋಗ ಇತ್ಯಾದಿಗಳನ್ನು ಕಲಿಸುವ ವ್ಯವಸ್ಥೆ ಇದೆ. ಅದರಲ್ಲೂ ಯಕ್ಷಗಾನ ಅಕಾಡೆಮಿ ಕೂಡಾ ದಶಮಾನೋತ್ಸವ ವರ್ಷ ಆಚರಿಸುತ್ತಿರುವುದು ಹರ್ಷದ ವಿಚಾರ ಎಲ್ಲರನ್ನೂ ತಲಪಲಿ ಎಂಬುದೇ ಸೊಸೈಟಿಯ ಆಶಯ ಎಂದು ಹೇಳಿದರು.

    ರೊ. ಜೆ.ವಿ. ಶೆಟ್ಟಿ, ಸೊಸೈಟಿ ಸದಸ್ಯ ಆರ್.ಎಂ. ಬಸವರಾಜು, ಅಂತಾರಾಷ್ಟ್ರೀಯ ಈಜುಪಟು ನಾಗರಾಜ ಖಾರ್ವಿ, ಕಿರಣ್ ಕುಮಾರ್ ಕೋಡಿಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನವಭಾರತ ಯಕ್ಷಗಾನ ಅಕಾಡೆಮಿಯ ಹಿರಿಯ ಸದಸ್ಯೆ ಹಾಗೂ ಕಲಾವಿದೆ ಸಾವಿತ್ರಿ ಯಸ್. ಮಲ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಭಾರತೀ ಪ್ರಮೋದ್‌ರವರು ವಾಚಿಸಿದರು. ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯರು ನಿರ್ವಹಿಸಿ, ದಿನೇಶ್ ಕುಮಾರ್ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಮೊದಲು ‘ಶ್ರೀದೇವಿ ಮಹಿಷಮರ್ದಿನಿ’ ಹಾಗೂ ಬಳಿಕ ನವಭಾರತ ಯಕ್ಷಗಾನ ಅಕಾಡೆಮಿಯ ಶಿಕ್ಷಣಾರ್ಥಿ ವಿದ್ಯಾರ್ಥಿಗಳಿಂದ ‘ಶ್ರೀದೇವಿ ಕೌಶಿಕೆ’ ಎಂಬ ಯಕ್ಷಗಾನ ಬಯಲಾಟ ಜರಗಿತು.

    felicitation yakshagana
    Share. Facebook Twitter Pinterest LinkedIn Tumblr WhatsApp Email
    Previous Articleಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಜನವರಿ 31
    Next Article ವಿಜಯನಗರ ಬಿಂಬ (ರಿ.) ವತಿಯಿಂದ ‘ಮದರ್ ಕರೇಜ್’ ನಾಟಕ ಪ್ರದರ್ಶನ | ಜನವರಿ 21
    roovari

    Add Comment Cancel Reply


    Related Posts

    ಸಿರಿಬಾಗಿಲು ಸಾಂಸ್ಕೃತಿಕ ಭವನದಲ್ಲಿ ತಾಳಮದ್ದಳೆ – ಸದಸ್ಯ ಸಮಾವೇಶ ಬಡಗು ಯಕ್ಷಗಾನ | ಅಕ್ಟೋಬರ್ 26

    October 21, 2025

    ಎಸ್.ಡಿ.ಎಮ್. ಕಾನೂನು ಕಾಲೇಜಿನಲ್ಲಿ ದಿನೇಶ ಅಮ್ಮಣ್ಣಾಯರಿಗೆ ನುಡಿ ನಮನ

    October 21, 2025

    ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ 81ನೆಯ ವಾರ್ಷಿಕೋತ್ಸವ | ಅಕ್ಟೋಬರ್ 25

    October 20, 2025

    ಶ್ರೀ ಬೆಣ್ಣೆಗಣಪತಿ ಸಭಾಭವನ ‘ಯಕ್ಷಶ್ರಾವ್ಯ’ ತಾಳಮದ್ದಲೆ ಕಾರ್ಯಕ್ರಮ | ಅಕ್ಟೋಬರ್ 25

    October 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.