Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ

    August 23, 2025

    ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್‌ ಪುರಸ್ಕಾರ’ ಪ್ರಕಟ

    August 23, 2025

    ‘ಬೆರಗು’ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 25

    August 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತುಳು ನಾಟಕ ಕಲಾವಿದ ವಸಂತ ಶೆಟ್ಟಿ ನಿಧನ 
    Tulu

    ತುಳು ನಾಟಕ ಕಲಾವಿದ ವಸಂತ ಶೆಟ್ಟಿ ನಿಧನ 

    February 21, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮೂಡುಬಿದಿರೆ :  ಕಳೆದ ಮೂರು ದಶಕಗಳಿಂದ ನಾಟಕ ರಂಗದಲ್ಲಿ ವಿವಿಧ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ತುಳು ನಾಟಕ ಕಲಾವಿದ ವಸಂತ್ ಶೆಟ್ಟಿ ತೋಡಾರು ಅವರು ಅನಾರೋಗ್ಯದಿಂದ ದಿನಾಂಕ 18-02-2024ರ ಭಾನುವಾರ ನಿಧನರಾಗಿದ್ದಾರೆ.
    ತೋಡಾರು ಗಗನ್ ನಿವಾಸದ ಸುಂದರ ಶೆಟ್ಟಿಯವರ ಸುಪುತ್ರರಾಗಿರುವ ಐವತ್ತೆರಡು ವರ್ಷ ಪ್ರಾಯದ ವಸಂತ ಶೆಟ್ಟಿಯವರು  ಕಳೆದ ಮೂರು ವರುಷಗಳಿಂದ ಅನಾರೋಗ್ಯದಿಂದಿದ್ದರು.
    ಸುರೇಂದ್ರ ಕುಮಾರ್ ಕಲತ್ರಪಾದೆಯವರ ರಚನೆಯ ಅತ್ಯುತ್ತಮ ನಾಟಕ ‘ಬೈರ ಕುರಲ್‌’ನಲ್ಲಿ ‘ಭಾಷಾ’ ಎಂಬ ಹೆಸರಿನೊಂದಿಗೆ ಖಳನಾಯಕನಾಗಿ ಹೆಸರು ಮಾಡಿದ ವಸಂತ್ ಶೆಟ್ಟಿ, ನಂತರ ತುಳು ರಂಗಭೂಮಿಯ ಪ್ರತಿಭಾನ್ವಿತ ಕಲಾವಿದನಾಗಿ ಬೆಳೆದು ಬಂದಿದ್ದರು.
    ತೋಡಾರು ಬಂಗಬೆಟ್ಟು ಶಾಲೆಯಲ್ಲಿ 5ನೇ ತರಗತಿಯಲ್ಲಿರುವಾಗಲೇ ನಾಟಕದಲ್ಲಿ ಅಭಿನಯಿಸಿ ನಾಟಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಓದು ಮುಗಿಸಿದ ಬಳಿಕ ಅವರು ತುಳು ನಾಟಕಗಳಲ್ಲಿ ತೊಡಗಿಸಿಕೊಂಡರು. ‘ಯಶಸ್ವಿ ಕಲಾವಿದೆರ್’ ಮಂಗಳೂರು ತಂಡದ ಸದಸ್ಯರಾಗಿ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದರು.
    ನಂತರ ‘ನಮ್ಮ ಕಲಾವಿದೆರ್ ಬೆದ್ರ’ ತಂಡಕ್ಕೆ ಸೇರ್ಪಡೆಯಾಗಿ ಜಿಲ್ಲೆಯಾದ್ಯಂತ ಅನೇಕ ತುಳು ನಾಟಕಗಳಲ್ಲಿ ಅಭಿನಯಿಸಿ ಯಶಸ್ವಿ ನಟರಾಗಿ ಬೆಳೆದರು. ‘ಬೈರ ಕುರಲ್’, ‘ಮೇಘ ಮುರಾರಿ’, ‘ದೇವೆರ್ ಮುನಿಂಡ’, ‘ದೇವೆರ್ ಕೈಬುಡ್ನಗೆ’ ಇವರು ಅಭಿನಯಿಸಿದ ಜನಪ್ರಿಯ ತುಳು ನಾಟಕಗಳು. ಖಳ ನಾಯಕನ ಪಾತ್ರದ ಮೂಲಕ ಜನಮನ್ನಣೆ ಪಡೆದಿದ್ದ ಅವರು ನಾಯಕ ನಟರಾಗಿ, ಪೋಷಕ ನಟರಾಗಿ ಹಾಗೂ ಹಾಸ್ಯ. ಕಲಾವಿದರಾಗಿಯೂ ಅಭಿನಯಿಸಿ ವಿಭಿನ್ನ ಪಾತ್ರಗಳಿಗೂ ಸೈ ಅನ್ನಿಸಿಕೊಂಡಿದ್ದರು.
    ಕನ್ನಡ ಟಿ. ವಿ. ವಾಹಿನಿಯಲ್ಲಿ ಪ್ರಸಾರಾವಾದ ‘ಗೊತ್ತಾನಗ ಪೊರ್ತಾಂಡ್’ ತುಳು ಧಾರವಾಹಿಯಲ್ಲೂ ಅಭಿನಯಿಸಿದ್ದರು. ಅನಾರೋಗ್ಯ ನಿಮಿತ್ತ ಒಂದು ವರ್ಷದಿಂದ ಮನೆಯಲ್ಲಿ ಇದ್ದರು. ಮೃತರು ಪತ್ನಿ, ಇಬ್ಬರು ಪುತ್ರನನ್ನು ಅಗಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ‘ವಿಶ್ವ ಮಾತೃಭಾಷೆ ದಿನಾಚರಣೆ’
    Next Article ಕಲಾಕುಂಚದಿಂದ ಯುಗಾದಿ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 15
    roovari

    Add Comment Cancel Reply


    Related Posts

    ಸೋಮೇಶ್ವರದ ಆನಂದಾಶ್ರಮ ಪ್ರೌಢ ಶಾಲೆಯಲ್ಲಿ ‘ಡೆನ್ನ ಡೆನ್ನಾನ – ಪದ ಪನ್ಕನ’ | ಆಗಸ್ಟ್ 22

    August 21, 2025

    ಮೂಡಬಿದಿರೆಯ ಜೈನ ಮಠದಲ್ಲಿ ‘ತುಳು ಕಾವ್ಯ ಯಾನ 28’ | ಆಗಸ್ಟ್ 24

    August 19, 2025

    ಜವಾಬ್ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ

    August 14, 2025

    ಯುವ ನಾಟಕಕಾರ ನಾರಾಯಣ ಕೊಯಿಲ ನಿಧನ

    August 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.