Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ –2026’ಗೆ ಆರ್ಗೋಡು ಮೋಹನದಾಸ್ ಶೆಣೈ ಆಯ್ಕೆ

    December 10, 2025

    ವಿಭಿನ್ನ ನೃತ್ತಪ್ರಯೋಗಗಳಿಗೆ ಸಾಕ್ಷಿಯಾದ ‘ನೃತ್ಯ ವಾಹಿನಿ’

    December 10, 2025

    ಮಂಗಳೂರಿನಲ್ಲಿ ‘ಕನ್ನಡದ ಕಂಪು ಸರಣಿ -5’ | ಡಿಸೆಂಬರ್ 21

    December 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸರಯೂ ಸಪ್ತಾಹದಲ್ಲಿ ‘ತುಳುನಾಡ ಬಲಿಯೇಂದ್ರೆ’ ಯಕ್ಷಗಾನ ಬಯಲಾಟ
    Yakshagana

    ಸರಯೂ ಸಪ್ತಾಹದಲ್ಲಿ ‘ತುಳುನಾಡ ಬಲಿಯೇಂದ್ರೆ’ ಯಕ್ಷಗಾನ ಬಯಲಾಟ

    May 31, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಆರನೇ ದಿನದ ಕಾರ್ಯಕ್ರಮವು ದಿನಾಂಕ 30-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.

    ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷ ಹಾಗೂ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಮಾತನಾಡಿ “ನಮ್ಮ ದೇಶೀಯ ಕಲೆಗಳೆಲ್ಲವೂ ವಿಶ್ವಖ್ಯಾತಿಯನ್ನು ಪಡೆದಿವೆ. ಯಕ್ಷಗಾನ, ಭಾರತನಾಟ್ಯ ಯಾವುದೇ ಇರಲಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ ಎಂಬುದರಲ್ಲಿ ನಮಗೆ ಹೆಮ್ಮೆ ಇದೆ. ಯಾರನ್ನೂ ಕಲೆ ಬಿಟ್ಟಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬನೂ ಪ್ರತಿಭಾನ್ವಿತನಾಗಿರುತ್ತಾನೆ. ಅವಕಾಶ ಹಾಗೂ ಸಂದರ್ಭ ಒದಗಿದಾಗ ಆತನಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುತ್ತದೆ. ಇಂತಹಾ ಕಲಾರಾಧನೆಯನ್ನು ಯಾರು ಮಾಡುತ್ತಾರೋ ಅವರನ್ನು ಬೆಂಬಲಿಸಿ ಆಧರಿಸುವುದರ ಅಗತ್ಯ ಇದೆ.” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವೇಷಧಾರಿ ಹಾಗೂ ಪ್ರಸಾದನ ಕಲಾವಿದರಾದ ಕೋಳ್ಯೂರು ಪ್ರಶಾಂತ್ ಇವರನ್ನು ಗೌರವಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ್ ಕಲ್ಕೂರ ಹಾಗೂ ಚಂದ್ರಶೇಖರ ಶೆಟ್ಟಿ ಸನ್ಮಾನ ನೆರವೇರಿಸಿದರು.ಶರತ್ ಶೆಟ್ಟಿ ಪಡುಪಳ್ಳಿ, ಸಿ.ಎಸ್.ಭಂಡಾರಿ, ಸಂಜಯ ಕುಮಾರ್ ಶೆಟ್ಟಿ, ಗೋಣಿಬೀಡು, ಬೆಟ್ಟಂಪಾಡಿ ಸುಂದರ ಶೆಟ್ಟಿ, ಗಣೇಶಪುರ ಗಿರೀಶ್ ನಾವಡ, ಅಕ್ಷಯ ಸುವರ್ಣ,ಪ್ರತೀಕ್ ರಾಪ್, ಕೃತಿ, ನಿತ್ಯಶ್ರೀ, ಮಾ. ದೃಶಾಲ್, ಹಾಗೂ ಸರಯೂ ಕಲಾವಿದರು ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.ಸಭಾಕಾರ್ಯಕ್ರಮದ ಬಳಿಕ ಹರೀಶ್ ಶೆಟ್ಟಿ ವಿರಚಿತ ಪ್ರಸಿದ್ಧ ತುಳು ಪ್ರಸಂಗ ‘ತುಳುನಾಡ ಬಲಿಯೇಂದ್ರೆ’ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಕವಿಸಂಧಿ’ ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮ
    Next Article ಪರಿಚಯ ಲೇಖನ | ‘ಸಹೃದಯಿ ಯಕ್ಷನಿಧಿ’ ವೆಂಕಟೇಶ್ ಗುಡ್ಡೆಯಂಗಡಿ
    roovari

    Add Comment Cancel Reply


    Related Posts

    ಉಪ್ಪಿನಕುದ್ರು ‘ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ –2026’ಗೆ ಆರ್ಗೋಡು ಮೋಹನದಾಸ್ ಶೆಣೈ ಆಯ್ಕೆ

    December 10, 2025

    ಉಚ್ಚಿಲದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ ಉದ್ಘಾಟನೆ

    December 10, 2025

    ಯಶಸ್ವಿ ಕಲಾವೃಂದದ ವತಿಯಿಂದ ರಂಗಾರ್ಪಣ ಮತ್ತು ಅಭಿನಂದನಾ ಸಮಾರಂಭ

    December 9, 2025

    ಕಂಕನಾಡಿ ಗರಡಿಯಲ್ಲಿ ತಾಳಮದ್ದಳೆ ಕಾರ್ಯಕ್ರಮ

    December 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.