Subscribe to Updates

    Get the latest creative news from FooBar about art, design and business.

    What's Hot

    ಚೆಂಬೂರು ಚೆಡ್ಡಾ ನಗರ ಸುಬ್ರಹ್ಮಣ್ಯ ಮಠದಲ್ಲಿ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಳೆ

    August 19, 2025

    ಸಿರಿಬಾಗಿಲು ಪ್ರತಿಷ್ಠಾನಕ್ಕೆ ಉಜಿರೆ ಯಸ್. ಡಿ. ಯಂ. ವಿದ್ಯಾರ್ಥಿಗಳ ಭೇಟಿ

    August 19, 2025

    ಚೇಳಾರು ಗುತ್ತಿನಲ್ಲಿ ಆಗೋಳಿ ಮಂಜಣ್ಣ ನೆಂಪು ಹಾಗೂ ಪ್ರತಿಭಾ ಪುರಸ್ಕಾರ

    August 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ತುಳು ಕೂಟ ಕುಡ್ಲದಿಂದ ‘ತುಳುವರೆ ಹಳ್ಳಿ ಗೊಬ್ಬುಲು’
    News

    ಮಂಗಳೂರಿನಲ್ಲಿ ತುಳು ಕೂಟ ಕುಡ್ಲದಿಂದ ‘ತುಳುವರೆ ಹಳ್ಳಿ ಗೊಬ್ಬುಲು’

    August 24, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ‘ಬಂಗಾರ್ ಪರ್ಬದ ಸರಣಿ ವೈಭವೊ-6’ ಇದರ ಅಂಗವಾಗಿ ‘ತುಳುವರೆ ಹಳ್ಳಿ ಗೊಬ್ಬುಲು’ ಕಾರ್ಯಕ್ರಮ ದಿನಾಂಕ 18-08-2023ರಂದು ಕೊಡ್ಮಣ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡ್ಮಣ್ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ.ಭಾಸ್ಕರ ರಾವ್ ಇವರು ಮಾತನಾಡುತ್ತಾ “ಇಂದು ಭಾಷಾ ಗೊಂದಲಗಳ ಮಧ್ಯೆ ತುಳುವನ್ನು ಬಡವಾಗಲು ಬಿಡಬಾರದು. ತುಳುವಿಗೆ ಅದರದೇ ಆದ ವೈಶಿಷ್ಟವಿದೆ. ಈ ಮಣ್ಣಿನ ಕಂಪನ್ನು ಪಸರಿಸಲು ತುಳು ಕಾರಣವಾಗುತ್ತದೆ. ಇಂದಿನ ಯುಗದಲ್ಲಿ ಯಾವುದೇ ದೇಶದಲ್ಲಿದ್ದರೂ ನಾವು ಪ್ರತಿಯೊಬ್ಬನನ್ನೂ ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಭಾಷಾ ವಿನಿಮಯದಿಂದ ವಿಚಾರಗಳನ್ನೂ ಅವರಿಗೆ ತಿಳಿಸಬಹುದು. ಆಗ ತುಳುವರು ತಮ್ಮ ತಮ್ಮ ಆಚಾರ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಭಾಷಾ ಪ್ರೇಮವನ್ನು ವೃದ್ಧಿಗೊಳಿಸಬಹುದು. ಭಾಷಾ ಬಳಕೆ ಹೆಚ್ಚಿದಷ್ಟೂ ಅದು ವೃದ್ಧಿಸುತ್ತದೆ” ಎಂದು ಹೇಳಿದರು.

    ಕೂಟದ ಅಧ್ಯಕ್ಷರಾದ ಬಿ.ದಾಮೋದರ ನಿಸರ್ಗರವರು “ಮರೆಯಾಗುತ್ತಿರುವ ಹಳ್ಳಿ ಆಟಗಳು, ಗ್ರಾಮೀಣ ಕ್ರೀಡೆಗಳು ಇಂದಿನ ಜನಾಂಗಕ್ಕೆ ಪರಿಚಯಿಸಲ್ಪಡಬೇಕು ಎಂಬ ಕಾರಣಕ್ಕಾಗಿ ಇಂದು ಈ ಸರಕಾರಿ ಪ್ರೌಢಶಾಲೆಯಲ್ಲಿ ‘ತುಳುವೆರೆ ಹಳ್ಳಿ ಗೊಬ್ಬುಲು’ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಮ್ಮತನವನ್ನು ಈ ಆಟಗಳು ದೃಢಗೊಳಿಸುತ್ತವೆ. ತುಳು ಪರಂಪರೆಯನ್ನು ಉಳಿಸುವ ಆ ಹೊಣೆ ನಾಳಿನ ಪ್ರಜೆಗಳಾದ ಯುವ ಪಡೆಯಾದ ನಿಮ್ಮ ಮೇಲೆ ಇದೆ. ಹಾಗಾಗಿ, ನೆಲದ ಸತ್ತ್ವವನ್ನು ತಿಳಿದು ಭಾಷಾಭಿವೃದ್ದಿಗೊಳಿಸಿ”

    ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ದೇವದಾಸ್ ಕೆ, ಶ್ರೀಮತಿ ಹೇಮಾ ನಿಸರ್ಗ ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಪದ್ಮನಾಭ ಕೋಟ್ಯಾನ್ ಇವರು ಹಳ್ಳಿಗೊಬ್ಬುಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿಯನ್ನು ತುಂಬಿದರು.

    ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ದಿನೇಶ ಕು೦ಪಲ, ರಮೇಶ ಕುಲಾಲ್ ಬಾಯಾರು ಕಾರ್ಯಕ್ರಮ ನಿರ್ವಹಿಸಿ, ಶ್ರೀಮತಿ ಸುಜಾತಾ ಸುವರ್ಣ ವಂದನಾರ್ಪಣೆ ಸಲ್ಲಿಸಿದರು. ಶಾಲಾ ಅಧ್ಯಾಪಿಕಾ ಗಣ ಹಾಗೂ ತುಳುಕೂಟದ ಪದಾಧಿಕಾರಿಗಳು ತುಳುವೆರೆ ಹಳ್ಳಿಗೊಬ್ಬುಗಳ ಸ್ಪರ್ಧೆಯನ್ನು ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿ, ವಿಜೇತರಿಗೆ ಅಧ್ಯಕ್ಷರು ಬಹುಮಾನ ವಿತರಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ತರಬೇತಿ
    Next Article ಬೆಂಗಳೂರಿನಲ್ಲಿ ‘ಸರಸತಿಯಾಗಲೊಲ್ಲೆ’ | ಆಗಸ್ಟ್ 25ರಂದು
    roovari

    Add Comment Cancel Reply


    Related Posts

    ಚೇಳಾರು ಗುತ್ತಿನಲ್ಲಿ ಆಗೋಳಿ ಮಂಜಣ್ಣ ನೆಂಪು ಹಾಗೂ ಪ್ರತಿಭಾ ಪುರಸ್ಕಾರ

    August 19, 2025

    ಮೂಡಬಿದಿರೆಯ ಜೈನ ಮಠದಲ್ಲಿ ‘ತುಳು ಕಾವ್ಯ ಯಾನ 28’ | ಆಗಸ್ಟ್ 24

    August 19, 2025

    ಜವಾಬ್ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ

    August 14, 2025

    ಯುವ ನಾಟಕಕಾರ ನಾರಾಯಣ ಕೊಯಿಲ ನಿಧನ

    August 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.