Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಕನ್ನಡ ಕಟ್ಟೆಯ ವಿಂಶತಿ ಆಚರಣೆ 
    Literature

    ಮಂಗಳೂರಿನ ಕನ್ನಡ ಕಟ್ಟೆಯ ವಿಂಶತಿ ಆಚರಣೆ 

    November 8, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕನ್ನಡ ಕಟ್ಟೆಯ ವಿಂಶತಿ ಆಚರಣೆಯ ಉದ್ಘಾಟನಾ ಸಮಾರಂಭವು ದಿನಾಂಕ 05-11-2023ರಂದು ಮಂಗಳೂರಿನ ಕದ್ರಿಯ ಹೊಟೇಲ್ ಡಿಂಕಿ ಡೈನ್ ಇದರ ಸಭಾಂಗಣದಲ್ಲಿ ನಡೆಯಿತು.

    “ನಾಡು, ನುಡಿ, ನೆಲ, ಪರಿಸರ, ಪ್ರಕೃತಿ ಪರ ಚಿಂತನೆ ಹೋರಾಟಗಳಿಗೆ ಹಾಗೂ ಅನುಷ್ಠಾನಕ್ಕೆ ನೇರ ನಿಷ್ಠುರ ಗಟ್ಟಿ ಧ್ವನಿಯ ಕನ್ನಡ ಕಟ್ಟೆಯಂತಹ ಸಂಘಟನೆಗಳು ಇನ್ನಷ್ಟು ಬೇಕು” ಎಂದು ಡಾ. ಹರಿಕೃಷ್ಣ ಪುನರೂರು ಹಾಗೂ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯಪಟ್ಟರು.

    ವಿಂಶತಿ ಆಚರಣೆಯ ಪ್ರಯುಕ್ತ ಶಾಲಾ ಮಕ್ಕಳಿಗೆ ಏರ್ಪಡಿಸಿದ ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರರನ್ನು ಮತ್ತು ಸಂತೋಷ್ ಕುಮಾ‌ರ್ ಶೆಟ್ಟಿ ಜಪ್ತಿ ಅವರನ್ನು ಸಮ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆಯ ಜಪ್ಪು ಯೋಗೀಶ್ ಶೆಟ್ಟಿ ಅವರು ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮತ್ತು ಡಾ. ವಿಜಯ್ ಕುಮಾ‌ರ್ ಶುಭ ಹಾರೈಸಿದರು.

    ಕನ್ನಡ ಕಟ್ಟೆಯ ವಿಂಶತಿ ಕಾರ್ಯಕ್ರಮದ ಮುಂದಿನ ಭಾಗವಾಗಿ ‘ಬ್ರಿಟೀಷರಿಗೊಂದು ಪತ್ರ – ಸಾರ್ವಜನಿಕರಿಗೆ ಮುಕ್ತ ಲೇಖನ ಸ್ಪರ್ಧೆ’ಯನ್ನ ಹಮ್ಮಿಕೊಂಡಿದ್ದು, ಲೇಖನಗಳನ್ನು ದಿನಾಂಕ 31-03-2024ರ ಒಳಗಾಗಿ ಕನ್ನಡ ಕಟ್ಟೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಕೊಡಕ್ಕಲ್ ಪಡೀಲ್-ಮಂಗಳೂರು 575007 ಇಲ್ಲಿಗೆ ಕಳುಹಿಸಬಹುದು. ವಿಜೇತರಿಗೆ ದಿನಾಂಕ 01-05-2024ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು ಎಂದು ಕನ್ನಡ ಕಟ್ಟೆಯ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ಳೂರು ತಿಳಿಸಿದರು.

    ಹಿರಿಯ ನಾಯಕರಾದ ಸ್ವರ್ಣ ಸುಂದರ್, ಜಾರ್ಜ್, ಸುರೇಶ್ ಆಚಾರ್, ಅನಿತಾ ಭಂಡಾರ್ಕಾರ್, ಜಗದೀಶ್ ಬಿಜೈ, ಸುಧಾಕರ್ ಸುರತ್ಕಲ್, ವಿನಯ ಕೃಷಿ ಬಳಗದ ವಿಜಯ್ ಶೆಟ್ಟಿ ಮತ್ತು ಚಂದ್ರಹಾಸ್, ಮಹಾಬಲ ಮಾಸ್ಟರ್, ಹಮೀದ್ ಹಸನ್, ಫಾರೂಕ್ ಕಿನ್ಯ, ಹಮೀದ್ ಕಿನ್ಯ, ಯೋಗೀಶ್ ರಾವ್, ಗೋಪಾಲ್ ಕೆದೂರು, ಸುಬ್ರಮಣ್ಯ, ಮಹೇಶ್ ನಾಯಕ್, ನಿಶ್ಚಿತ್, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಮಮತಾ ಕುಲಾಲ್, ಎನ್‌.ಇ.ಸಿ.ಎಫ್‌. ಇದರ ಹರೀಶ್, ಡಾ. ಚಂದನಾ, ಕಾಸರಗೋಡಿನ ಕರ್ಮಾರ್ಕರ್, ಡಾ. ವಾಣಿ ಮತ್ತು ಡಿಂಕಿ ಡೈನ್ ನ  ತೇಜು ಪೂಜಾರಿ ಸಹಿತ ಉಡುಪಿ, ಕುಂದಾಪುರ, ಕಾರ್ಕಳ, ಮೂಲ್ಕಿ ಸುರತ್ಕಲ್, ಉಳ್ಳಾಲ, ಕಾಸರಗೋಡು ಭಾಗದ `ಸಮಾನ ಮನಸ್ಕ ಕನ್ನಡ ಹೋರಾಟಗಾರರು ಭಾಗವಹಿಸಿದ್ದರು.

    ಮಣ್ಣಗುಡ್ಡ ಶಾಲಾ ಮಕ್ಕಳು ಕನ್ನಡ ಗೀತೆ ಮತ್ತು ಯಕ್ಷಗಾನದ ಶೈಲಿಯಲ್ಲಿ ಡಾ. ಚಂದನಾ ಹಾಗೂ ಪವಿತ್ರ ನಿಶ್ಚಿತ ಮತ್ತು ತಂಡದವರು ನಾಡಗೀತೆ ಹಾಡಿದರು. ಕಾರ್ಯಕ್ರಶಮಕ್ಕೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮತ್ತೂ ಡಿಂಕಿ ಡೈನ್ ಹೋಟೆಲ್ ನ ಪದಾಧಿಕಾರಿಗಳು ಸಹಕರಿಸಿದ್ದರು.  ಡಾ. ಅಣ್ಣಯ್ಯ ಕುಲಾಲ್ ಸ್ವಾಗತಿಸಿ, ಪ್ರಸ್ತಾಪಿಸಿದರು. ಕಾರ್ಯದರ್ಶಿ ಶಶಿಧರ್ ಶೆಟ್ಟಿ ನಿರೂಪಿಸಿ, ಹಮೀದ್ ಹಸನ್ ಮಾಡೂರು ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮುಂಬಯಿ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ ನವರಾತ್ರಿ ನಿಮಿತ್ತ ಸಾಂಸ್ಕೃತಿಕ ಮತ್ತು ಯಕ್ಷಗಾನ ಕಾರ್ಯಕ್ರಮ
    Next Article ಕಸಾಪ ಸೋಮವಾರಪೇಟೆ ಘಟಕದಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಸುವರ್ಣ ಸಂಭ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳು | ನವಂಬರ್ 22ರಂದು
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.