Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ವೀಣಾ ವಾದನ ಗಂಧರ್ವ ಆರ್. ಕೆ. ಸೂರ್ಯನಾರಾಯಣ

    June 14, 2025

    ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 22

    June 14, 2025

    ಉದ್ಘಾಟನೆಗೊಂಡ ‘ಯಕ್ಷಾಂತರಂಗ’ದ ಉಚಿತ ಯಕ್ಷಗಾನ ಹೆಜ್ಜೆ ತರಗತಿ

    June 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಭೂಮಿ ಉಡುಪಿಯ ಹೆಸರಾಂತ ಹಾಸ್ಯ ಕಲಾವಿದ ಶ್ರೀ ಯು.ಎಂ. ಅಸ್ಲಾಂ ಇನ್ನಿಲ್ಲ
    Drama

    ರಂಗಭೂಮಿ ಉಡುಪಿಯ ಹೆಸರಾಂತ ಹಾಸ್ಯ ಕಲಾವಿದ ಶ್ರೀ ಯು.ಎಂ. ಅಸ್ಲಾಂ ಇನ್ನಿಲ್ಲ

    May 2, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ: ಉಡುಪಿಯಲ್ಲಿ 1965ರಲ್ಲಿ ಹುಟ್ಟಿಕೊಂಡ, ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಪ್ರಸಿದ್ಧ ನಾಟಕ ಸಂಸ್ಥೆ “ರಂಗಭೂಮಿ”ಯ ಆರಂಭದ ದಿನಗಳಲ್ಲಿ ಬಹು ಹಾಸ್ಯ ಪ್ರಜ್ಞೆಯ, ಆಕರ್ಷಕ ನಗುಮೊಗದ, ಪಾದರಸದಂತೆ ಸದಾ ಚಟುವಟಿಕೆಯ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರಿಯ ಹಾಸ್ಯ ಕಲಾವಿದರಾಗಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದವರು ಹೆಸರಾಂತ ಹಿರಿಯ ರಂಗ ಕಲಾವಿದ ಉಡುಪಿ ಮಹಮ್ಮದ್ ಅಸ್ಲಾಂ (ಯು.ಎಂ. ಅಸ್ಲಾಂ) (86)ರವರು ಇಂದು ವಯೋಸಹಜ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ದಿನಾಂಕ 02-05-2023ರಂದು ದೈವಾಧೀನರಾದರು. ಮಡದಿ ಮತ್ತು 4 ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

    04-12-1937ರಂದು ಹುಟ್ಟಿದ ಅಸ್ಲಾಂರು, ಶ್ರೀ ಅಬ್ದುಲ್ ಆಲಿ ಸಾಹೇಬ್ ಹಾಗೂ ಹಫೀಝಬಿ ದಂಪತಿಗಳ 13 ಮಕ್ಕಳಲ್ಲಿ ಅಸ್ಲಾಂರು ಹಿರಿಯರು. ಅಸ್ಲಾಂ ಶಾಲಾ ದಿನಗಳಲ್ಲಿಯೇ ನಟನೆಯ ಕಡೆಗೆ ಒಲವನ್ನು ತೋರಿದವರು. ಕಾಲೇಜಿನ ಬಿ.ಎ.- ಎ.ಎಫ್.ಐ.ಐ. ಶಿಕ್ಷಣ ಪೂರೈಸುತ್ತಲೇ ಭಾರತೀಯ ಜೀವ ವಿಮಾ ನಿಗಮದಲ್ಲಿಯೇ 1967ರಲ್ಲಿ ಉದ್ಯೋಗ ದೊರಕಿಸಿಕೊಂಡರು. 20 ವರ್ಷಗಳ ಕಾಲ ಎಲ್.ಐ.ಸಿ.ಯ ವಿವಿಧ ಹುದ್ದೆಗಳಲ್ಲಿ ಪದೋನ್ನತಿ ಪಡೆದು ಕೊನೆಗೆ ಉನ್ನತ ಅಧಿಕಾರಿಯ ಹುದ್ದೆಯಲ್ಲಿದ್ದರೂ, ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಗಲ್ಫ್ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ದೊಡ್ಡ ಉದ್ಯೋಗದ ಅವಕಾಶ ಪಡೆದು ಅಲ್ಲಿ ಸುಮಾರು 25 ವರ್ಷಗಳ ಕಾಲ ನೆಲೆಸಿ ತಮ್ಮ ಹುಟ್ಟೂರಾದ ಉಡುಪಿಗೆ ಮರಳಿದ್ದರು.

    ಅಸ್ಲಾಂರ ರಂಗ ಚಟುವಟಿಕೆಗಳ ಬಗ್ಗೆ ಬರೆಯುತ್ತಾ ಹೋದರೆ ಹಲವು ಪುಟಗಳೇ ಬೇಕಾದೀತು. ರಂಗಭೂಮಿ (ರಿ.) ಉಡುಪಿಯ ಆರಂಭದಿಂದ ಹಲವಾರು ವರ್ಷಗಳ ಕಾಲ ಕಾರ್ಯಕಾರಿ ಮಂಡಳಿಯ ಸಕ್ರಿಯ ಸದಸ್ಯನಾಗಿದ್ದುಕೊಂಡು ತನ್ನನ್ನು ರಂಗಭೂಮಿಯ ಕೆಲಸಗಳಿಗಾಗಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ರಂಗಭೂಮಿಯ ಆರಂಭದ ರಂಗಪ್ರಯೋಗಗಳಾದ ರಾಷ್ಟ್ರಭಕ್ತಿ, ಅಣ್ಣತಮ್ಮ, ಪುತ್ಥಳಿ, ಸಾಧ್ವೀಮಣಿ, ಮಂಗಳ, ಕುಮಾರರಾಮ, ಶಹರದ ಹುಡುಗಿ, ಬಾಣಸಿಗ ಭೀಮ, ಧರ್ಮಚಕ್ರ, ಸಾಮ್ರಾಟ ಅಶೋಕ, ವೀರ ಪುರೂರವ ಮುಂತಾದ ಪ್ರಸಿದ್ಧ ನಾಟಕಗಳಲ್ಲಿ ಅವರ ಹಾಸ್ಯ ಪಾತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ಅಸ್ಲಾಂರು ತಮ್ಮ ನಿಜ ಜೀವನದಲ್ಲಿಯೂ ತುಂಬಾ ಹಾಸ್ಯ ಪ್ರವೃತ್ತಿಯವರಾಗಿದ್ದ ಕಾರಣಕ್ಕೆ ಅವರು ಅಭಿನಯಿಸಿದ ಎಲ್ಲಾ ಹಾಸ್ಯ ಪಾತ್ರಗಳೂ ಪ್ರೇಕ್ಷಕರಿಗೆ ಅಷ್ಟೇ ಮುದ ನೀಡುತ್ತಿದ್ದುವು. ರಂಗಭೂಮಿ ನಾಟಕ ಸಂಸ್ಥೆಯಲ್ಲಿ ಅವರು ಅಭಿನಯಿಸಿ ಸಂಸ್ಥೆಗೂ ಕೀರ್ತಿ ತಂದುದಲ್ಲದೇ ಆ ಕಾಲದ ಶ್ರೇಷ್ಟ ಹಾಸ್ಯ ನಟ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು.

    ಶ್ರೀ ಯು.ಎಂ. ಅಸ್ಲಾಂರವರ ಈ ಅಮೋಘ ಕಲಾಸೇವೆಯನ್ನು “ರಂಗಭೂಮಿ ಉಡುಪಿ”ಯು ಈ ವರ್ಷ ವಿಶ್ವರಂಗಭೂಮಿ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ನೆನೆಸಿಕೊಂಡು ಸನ್ಮಾನಿಸಿತ್ತು.

    Share. Facebook Twitter Pinterest LinkedIn Tumblr WhatsApp Email
    Previous Articleಅಳಿಕೆ ರಾಮಯ್ಯ ರೈ ಸಂಸ್ಮರಣೆ – ಸಹಾಯ ನಿಧಿ
    Next Article ಪರಿಚಯ ಲೇಖನ | ‘ಯಕ್ಷ ಮೋಹಿನಿ’ ಶ್ರೀ ದಿನಕರ್ ಕುಂದರ್ ನಡೂರು
    roovari

    Add Comment Cancel Reply


    Related Posts

    ಮಂಗಳೂರಿನ ರಂಗ ಸಂಸ್ಥೆ ಕಲಾಭಿಯಿಂದ ಶೀಘ್ರದಲ್ಲಿ ನಟನ ತರಬೇತಿ

    June 14, 2025

    ವಿಶೇಷ ಲೇಖನ – ಜನಪ್ರಿಯ ರಂಗಭೂಮಿ ನಟ ಯಶವಂತ ಸರದೇಶಪಾಂಡೆ

    June 13, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘Beg Borrow ಅಳಿಯ’ ಹಾಸ್ಯ ನಾಟಕ | ಜೂನ್ 14

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.