Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿಯಲ್ಲಿ ಉದ್ಘಾಟನೆಗೊಂಡ ‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ
    Visual Arts

    ಉಡುಪಿಯಲ್ಲಿ ಉದ್ಘಾಟನೆಗೊಂಡ ‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ

    April 28, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಆಯೋಜಿಸುವ ‘ಜನಪದ’ ದೇಶೀಯ ಕಲೆಗಳ ಸರಣಿ ಕಾರ್ಯಾಗಾರವು ಉಡುಪಿಯ ವೆಂಟನಾ ಪೌಂಡೇಶನ್‌ನ ಸಹಯೋಗದಲ್ಲಿ ದಿನಾಂಕ 27-04-2023 ಗುರುವಾರದಂದು ಪೌಂಡೇಶನ್‌ನ ಟ್ರಸ್ಟಿಗಳಾದ ಶಿಲ್ಪಾ ಭಟ್‌ರವರಿಂದ ಉದ್ಘಾಟನೆಗೊಂಡಿತು. “ವೆಂಟನಾ ಸಂಸ್ಥೆಯು ಹಲವಾರು ಜನೋಪಯೋಗೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತ ನಮ್ಮಲ್ಲಿನ ಕಲೆ, ಸಂಸ್ಕೃತಿ ಮತ್ತು ದೇಶೀಯ ಕಲಾಪ್ರಕಾರಗಳ ಪ್ರೋತ್ಸಾಹಕ್ಕೆ ಯಾವತ್ತೂ ಸಹಕಾರಿಯಾಗಲಿದೆ” ಎಂಬುದಾಗಿ ಹೇಳಿದರು.

    ಮುಖ್ಯ ಅತಿಥಿಗಳಾಗಿ ಬಹುಶ್ರುತ ವಿದ್ವಾಂಸರಾದ ನಾಡೋಜ ಕೆ.ಪಿ.ರಾವ್‌ರವರು “ಪಾರಂಪರಿಕ ಸೊಗಡನ್ನು ಜನಪದ ಕಲೆಗಳು ಕಳೆದುಕೊಳ್ಳುತ್ತ ಮಾರುಕಟ್ಟೆಯಲ್ಲಿನ ಸಿಂಥೆಟಿಕ್ ವರ್ಣಗಳ ಬಳಕೆ ಇತ್ಯಾದಿಯಾಗಿ ಕಲೆಯ ಜೀವಾಳವಾಗಿರುವ ಸಪಾಟಾದ ಮೇಲ್ಮೈಯ ಗುಣವನ್ನು ತೋರಿಸುವುದರ ಬದಲು ದುಂಡನೆಯದಾಗಿಸುವ ವಿಕೃತಿ ಮೆರೆಯುತ್ತಿರುವುದು ನಿಜಕ್ಕೂ ಶೋಚನೀಯ. ಆ ನಿಟ್ಟಿನಲ್ಲಿ ಈ ತೆರನಾದ ತರಬೇತಿ ಕಾರ್ಯಾಗಾರಗಳು ನಿಜ ಬಣ್ಣವನ್ನು ತೋರ್ಪಡಿಸುವುದರ ಜೊತೆಗೆ ಯಶಸ್ವಿಯಾಗಲಿ” ಎಂಬುದಾಗಿ ಅಭಿಪ್ರಾಯವಿತ್ತರು.

    ಉದ್ಯಮಿಗಳಾದ ಸುಗುಣ ಶಂಕರ್ ಸುವರ್ಣ, ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥರಾವ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಾಗಾರದ ಸಂಯೋಜಕರಾದ ಡಾ.ಜನಾರ್ದನ ಹಾವಂಜೆಯವರು ನಿರೂಪಿಸಿದರು.

    ಈ ಸರಣಿ ಕಾರ್ಯಾಗಾರದ ಭಾಗವಾಗಿ ಬಿಹಾರದ ಕರಕುಶಲ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಮಿಥಿಲಾ ಲೋಕಚಿತ್ರವಾದ ಮಧುಬನಿ, ಗೋಧ್ನಾ ಹಾಗೂ ಪೇಪರ್ ಮೆಶ್ ಕಲಾಕೃತಿಗಳನ್ನು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರವಣ್ ಪಾಸ್ವಾನ್, ಉಜಾಲಾ ಕುಮಾರಿ, ಸಂತೋಷ್ ಪಾಸ್ವಾನ್‌ರವರುಗಳು 27ನೇ ಏಪ್ರಿಲ್‌ನಿಂದ 30ನೇ ಏಪ್ರಿಲ್‌ ತನಕ ದಿನಕ್ಕೊಂದು ಶೈಲಿಯ ಕಲೆಯನ್ನು ರಚಿಸಲು ಇಲ್ಲಿ ಕಲಿಸಿಕೊಡುತ್ತಿದ್ದಾರೆ. ನೈಸರ್ಗಿಕ ವರ್ಣಗಳ ರಚನಾಕ್ರಮ, ಅದನ್ನು ಬಳಸುವ ಕ್ರಮ ಹಾಗೂ ಮಧುಬನಿ ಶೈಲಿಯ ಗುಣಗಳನ್ನು ಕಲಿಸಿಕೊಡುತ್ತಾರಲ್ಲದೇ ಸಂಜೆ ಮಧುಬನಿ ಕಲೆಯ ಮಾರಾಟವನ್ನೂ ಹಮ್ಮಿಕೊಳ್ಳಲಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ಬೆಂಗಾಲಿ ಕ್ರಿಯೇಟಿವ್ ಡಾನ್ಸ್ ಕಾರ್ಯಾಗಾರ
    Next Article ಪುತ್ತೂರು – ‘ಸುಭದ್ರಾ ರಾಯಭಾರ ಮತ್ತು ವಿದುರಾತಿಥ್ಯ’ ತಾಳಮದ್ದಳೆ
    roovari

    Add Comment Cancel Reply


    Related Posts

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    ಬ್ಯಾರಿ ನಾಟಕ ತರಬೇತಿ ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಮೇ 25

    May 19, 2025

    ಸಮಾರೋಪಗೊಂಡ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ

    May 17, 2025

    ಸುಳ್ಯದ ಕನ್ನಡ ಭವನದಲ್ಲಿ ಮಕ್ಕಳ ಕಥಾ ರಚನೆ ಕಾರ್ಯಾಗಾರ | ಮೇ 30

    May 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications