Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿ ಪುರಭವನದಲ್ಲಿ ‘ಜಲವಳ್ಳಿ ಯಕ್ಷಯಾನ 30’
    Yakshagana

    ಉಡುಪಿ ಪುರಭವನದಲ್ಲಿ ‘ಜಲವಳ್ಳಿ ಯಕ್ಷಯಾನ 30’

    August 10, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಶ್ರೀ ಜಲವಳ್ಳಿ ವಿದ್ಯಾಧರ ರಾವ್‌ ಅಭಿಮಾನಿ ಬಳಗ ಉಡುಪಿ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ‘ಜಲವಳ್ಳಿ ಯಕ್ಷಯಾನ-30’ ಜಲವಳ್ಳಿಯವರ ಸಾರ್ಥಕ ಮೂರು ದಶಕಗಳ ಯಕ್ಷಗಾನ ಕಲಾಸೇವೆಯ ಸಂಭ್ರಮ, ಸಮ್ಮಾನ ಹಾಗೂ ಯಕ್ಷಗಾನ ಪ್ರದರ್ಶನಗಳ ಕಾರ್ಯಕ್ರಮವು ದಿನಾಂಕ 06-08-2023ರಂದು ನಡೆಯಿತು. ಇದೇ ಸಂದರ್ಭದಲ್ಲಿ ಜಲವಳ್ಳಿ ವಿದ್ಯಾಧರ ರಾವ್‌ ಅವರನ್ನು ಸಮ್ಮಾನಿಸಲಾಯಿತು.

    ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಕೆ. ಜಯಪ್ರಕಾಶ ಹೆಗ್ಡೆ ಉದ್ಘಾಟನೆ ನೆರವೇರಿಸಿ “ಯಕ್ಷಗಾನ ಕಲೆ ಸ್ವಚ್ಛ ಕನ್ನಡ ಭಾಷೆ ಉಳಿವಿಗೆ ಪೂರಕವಾಗಿದ್ದು, ಕಲಾವಿದನಿಗೆ ಭಾಷೆಯ ಮೇಲಿದ್ದ ಹಿಡಿತ ಅಸಾಧಾರಣ. ಆಧುನಿಕ ಭರಾಟೆಯಲ್ಲಿ ಯಕ್ಷಗಾನ ಕಲೆ ನಶಿಸಿ ಹೋಗುತ್ತಿದೆ ಎನ್ನುವ ಭೀತಿಯ ಹೊತ್ತಿಗೆ ಯುವ ಸಮುದಾಯ ಹಿರಿಯ ಮಾರ್ಗದರ್ಶನದೊಂದಿಗೆ ಈ ಕಲೆಯನ್ನು ಉಳಿಸಿ, ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ” ಎಂದರು. ಜಲವಳ್ಳಿ ವಿದ್ಯಾಧರ ರಾವ್‌ ಕಲಾ ಸೇವೆಯನ್ನು ಕೊಂಡಾಡಿದರು.

    ಶಾಸಕರಾದ ಶ್ರೀ ಯಶಪಾಲ ಎ. ಸುವರ್ಣ ಜಲವಳ್ಳಿ ವಿದ್ಯಾಧರ ರಾವ್ ಅವರ ಯಕ್ಷಗಾನ ಕಲಾ ಸೇವೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ವಿದ್ವಾನ್ ದತ್ತಮೂರ್ತಿ ಭಟ್, ಶಿವಮೊಗ್ಗ ಮಾತನಾಡಿದರು. ದೊಡ್ಡಣಗುಡ್ಡೆ  ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ, ಮಾಹಿ ಸಹಕುಲಾ ಪತಿ ಡಾ. ಎಚ್‌.ಎಸ್. ಬಲ್ಲಾಳ್‌, ಉದ್ಯಮಿಗಳಾದ ಶ್ರೀ ಬಿ. ಶಾಂತಾರಾಮ ಶೆಟ್ಟಿ ಬಾರ್ಕೂರು, ಶ್ರೀ ಪುರುಷೋತ್ತಮ ಶೆಟ್ಟಿ, ಬ್ರಹ್ಮಾವರ ವಿ.ಎಸ್.ಎಸ್. ಸಂಘದ ನಿರ್ದೇಶಕ ಶ್ರೀ ಬಿರ್ತಿ ರಾಜೇಶ ಶೆಟ್ಟಿ, ಶ್ರೀ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಉಪಸ್ಥಿತರಿದ್ದರು.

    ಸಭಾ ಕಾರ್ಯಕ್ರಮದ ನಂತರ ‘ಮಹಾಮಲ್ಲ ಮಾಗಧ’ ಹಾಗೂ ‘ದ್ರೌಪದಿ ಪ್ರತಾಪ’ ಎಂಬ ಯಕ್ಷಗಾನ ಪ್ರಸಂಗಗಳ ಪದರ್ಶನ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಪ್ರೊ. ಕೆ.ಪಿ. ರಾವ್ ಅವರಿಗೆ ‘ಅಭಿನಂದನಾ ಕಾರ್ಯಕ್ರಮ’
    Next Article ಪರಿಚಯ ಲೇಖನ | ಕೊಡಗಿನ ಸಾಹಿತಿ ಚೆಟ್ಟಂಗಡ ರವಿ ಸುಬ್ಬಯ್ಯ (ಸಿ.ಎಸ್. ಪೂಣಚ್ಚ)
    roovari

    Add Comment Cancel Reply


    Related Posts

    ಶಿರಸಿಯ ರಂಗಧಾಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 01

    May 31, 2025

    ಕಟೇಲಿನಲ್ಲಿ ಮುಂಬೈನ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ವಾರ್ಷಿಕೋತ್ಸವ

    May 30, 2025

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025

    ಭಾಗವತ ಶ್ರೇಷ್ಠ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ 2025’ ಪ್ರದಾನ

    May 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.