Subscribe to Updates

    Get the latest creative news from FooBar about art, design and business.

    What's Hot

    ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ – ಡಾ. ಕೆ ಎಂ ಉಷಾ

    November 24, 2025

    ವಿಶೇಷ ಲೇಖನ | ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರ ಸಮೇತನಹಳ್ಳಿ ರಾಮ ರಾವ್

    November 24, 2025

    ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಡಿಟೋರಿಯಂನಲ್ಲಿ ಅರೆಭಾಷೆ ನಾಟಕ | ನವೆಂಬರ್ 27

    November 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಾರ್ಚ್ 5ಕ್ಕೆ ಉಡುಪಿಯಲ್ಲಿ ಜಾನಪದ ಹಬ್ಬ 2023
    News

    ಮಾರ್ಚ್ 5ಕ್ಕೆ ಉಡುಪಿಯಲ್ಲಿ ಜಾನಪದ ಹಬ್ಬ 2023

    March 3, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    3 ಮಾರ್ಚ್ 2023, ಉಡುಪಿ: ಸುಮನಸಾ ಕೊಡವೂರು ಉಡುಪಿ (ರಿ), ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ), ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು (ರಿ) ಬೆಂಗಳೂರು – ಉಡುಪಿ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ದಿನಾಂಕ 05-03-2023ನೇ ರವಿವಾರ “ಭುಜಂಗ ಪಾರ್ಕ್” ಅಜ್ಜರ ಕಾಡು ಉಡುಪಿ ಇಲ್ಲಿ “ಜಾನಪದ ಹಬ್ಬ 2023” ಹಾಗೂ “ಜಾನಪದ ಸಂಘಟಕ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ ನಡೆಯಲಿದೆ.
    ಸುಮನಸಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಜಿ. ಕೊಡವೂರು ಇವರು ಸಭಾಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಪಿ. ಸುಬ್ರಹ್ಮಣ್ಯ ಯಾಡಪಡಿತ್ತಾಯ ಉದ್ಘಾಟಿಸಲಿರುವರು. ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ್, ಮಣಿಪಾಲದ ಮಾಹೆಯ ಸಹಾಯಕ ಉಪ ಕುಲಪತಿಗಳಾದ ಡಾ. ನಾರಾಯಣ ಸಬಾಹಿತ್, ಶ್ರೀ ರವೀಂದ್ರ ಶೆಟ್ಟಿ, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಉಡುಪಿ, ಶ್ರೀ ಪ್ರದೀಪ್ ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ ರಂಗಭೂಮಿ (ರಿ) ಉಡುಪಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
    ಈ ವೇದಿಕೆಯಲ್ಲಿ ಉಡುಪಿಯ ಪ್ರಸಿದ್ಧ ಜಾನಪದ ಸಂಘಟಕರಾದ ಶ್ರೀ ಗೋಪಾಲ ಸಿ. ಬಂಗೇರ ಇವರಿಗೆ ಜಾನಪದ ಸಂಘಟಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರು ತಿಳಿಸಿದ್ದಾರೆ. 25 ವರ್ಷಗಳಿಂದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಕಲಾ ಲೋಕಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಸಂಘಟನೆಯ ಮೂಲ ಉದ್ದೇಶವೇ ಕಲೆ, ಕಲಾವಿದ ಮತ್ತು ಯಕ್ಷಗಾನವನ್ನು ಪ್ರೋತ್ಸಾಹಿಸುವುದು ಮತ್ತು ಕಲಾವಿದರನ್ನು ಗುರುತಿಸಿ ಗೌರವಿಸುವುದು.
    ಪ್ರತೀ ವರ್ಷ ಎರಡು ಪ್ರಶಸ್ತಿಗಳನ್ನು ನೀಡುತ್ತಾ ಇರುವುದು ಈ ಸಂಘಟನೆಯ ಕಾರ್ಯ ವೈಖರಿಯ ಪ್ರತೀಕವಾಗಿದೆ. ಅರ್ಹ ಯಕ್ಷಗಾನ ವಿದ್ವಾಂಸರಿಗೆ “ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ”ಯನ್ನು ನೀಡಲಾಗುತ್ತದೆ. ರೂ.40,000 ನಗದು ಮೊತ್ತ ಮತ್ತು ಸನ್ಮಾನವನ್ನೊಳಗೊಂಡ ಪ್ರಶಸ್ತಿ ಇದಾಗಿದೆ. ಸಮಾಜ ಸಾಧಕರಿಗೆ “ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿ” ನೀಡಲಾಗುತ್ತದೆ. ಈ ಪ್ರಶಸ್ತಿ ರೂ.40,000 ಮತ್ತು ಸನ್ಮಾನವನ್ನೊಳಗೊಂಡಿರುತ್ತದೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ವಿಶ್ವವಿದ್ಯಾನಿಲಯದಲ್ಲಿ 18 ಮಂದಿ ಗಾಯಕರು ಮತ್ತು 4 ತಂಡಗಳಿಗೆ ಇಂದು “ಕನಕ ಪುರಸ್ಕಾರ”
    Next Article ಮಾರ್ಚ್ 5ಕ್ಕೆ 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮೂಲ್ಕಿ ಪುನರೂರಿನಲ್ಲಿ
    roovari

    Add Comment Cancel Reply


    Related Posts

    ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ – ಡಾ. ಕೆ ಎಂ ಉಷಾ

    November 24, 2025

    ಪುತ್ತೂರಿನಲ್ಲಿ ರಾಧೇಶ ತೋಳ್ಪಾಡಿಯವರಿಂದ ವಿಶೇಷ ಉಪನ್ಯಾಸ | ನವೆಂಬರ್ 23

    November 20, 2025

    NCPA Invites Arunodaya Kala Niketan for ‘Nritya Parichaya’ Session at City School, Mumbai

    November 20, 2025

    ಶ್ರೀ ಭ್ರಾಮರಿ ನಾಟ್ಯಾಲಯದ ಗೆಜ್ಜೆಯೊಂದಿಗೆ  ಬೆಳ್ಳಿ ಹೆಜ್ಜೆ ಇಡುವ ರಜತವರ್ಷದ ಸಂಭ್ರಮ

    November 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.