Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹೆಬ್ರಿಯಲ್ಲಿ ವಚನ ಸಾಹಿತ್ಯ ಸಂಭ್ರಮ, ಸಂಸ್ಥಾಪನಾ ದಿನ ಮತ್ತು ವಚನ ಗಾಯನ
    Literature

    ಹೆಬ್ರಿಯಲ್ಲಿ ವಚನ ಸಾಹಿತ್ಯ ಸಂಭ್ರಮ, ಸಂಸ್ಥಾಪನಾ ದಿನ ಮತ್ತು ವಚನ ಗಾಯನ

    August 28, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಹೆಬ್ರಿ : ಅಕ್ಷರ ಸಾಹಿತ್ಯ ಸಂಘ ಹೆಬ್ರಿ ಮತ್ತು ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ ವಚನ ಸಾಹಿತ್ಯ ಸಂಭ್ರಮ, ಸಂಸ್ಥಾಪನಾ ದಿನ ಮತ್ತು ವಚನ ಗಾಯನ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆಯಿತು.
    ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿರಂಜನ ಚೋಳಯ್ಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ “ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕನ್ನಡದ ಶ್ರೇಷ್ಠ ಕೊಡುಗೆಯಾಗಿದೆ. ಇಂತಹ ವಿಶಿಷ್ಟ ಸಾಹಿತ್ಯ ಬೇರೆ ಎಲ್ಲೂ ಇಲ್ಲ. ಸರಳ ಕನ್ನಡದಲ್ಲಿ ಜನರಿಗೆ ಮಟ್ಟುವ ರೀತಿಯಲ್ಲಿ ವಚನ ಸಾಹಿತ್ಯ ರಚನೆಯಾಗಿದೆ. ಸಾರ್ವಕಾಲಿಕ ಸತ್ಯವನ್ನು ವಚನ ಸಾಹಿತ್ಯ ಹೇಳುತ್ತದೆ” ಎಂದು ಹೇಳಿದರು.
    ಉಪಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್. ಮಾತನಾಡಿ, “ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಲ್ಲಿ ವಚನ ಸಾಹಿತ್ಯ ಮತ್ತು ಶರಣರ ಚಳವಳಿಯ ಪಾತ್ರ ಬಹುಮುಖ್ಯವಾದುದು. ಕಾಯಕ ತತ್ವವನ್ನು ಸಾರಿದ ಶರಣ ಸಾಹಿತ್ಯ ಇಂದಿಗೂ ಪ್ರಸ್ತುತ” ಎಂದರು.
    ಎಸ್‌.ಡಿ.ಎಂ.ಸಿ. ಅಧ್ಯಕ್ಷ ವಿಜಯೇಂದ್ರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಚನ ಗಾಯಕರು ಶಾಲಿನಿ ಮ್ಯೂಸಿಕ್‌ನ ಸಂಗೀತ ಗುರು ಆಶಿಷ್ ಸಾಲ್ಯಾನ್, ಅಕ್ಷರ ಸಾಹಿತ್ಯ ಸಂಘದ ಸಂಚಾಲಕ ಮಂಜುನಾಥ ಕುಲಾಲ್ ಶಿವಪುರ, ಅಕ್ಷರ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀನಿತಾ ಉಪಸ್ಥಿತರಿದ್ದರು. ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
    ವಚನ ಸಾಹಿತ್ಯ ಸಂಭ್ರಮದ ಅಂಗವಾಗಿ ಹಿಂದೂಸ್ಥಾನಿ ಸಂಗೀತ ಗಾಯಕರಾದ ಆಶಿಷ್ ಸಾಲ್ಯಾನ್ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನಲ್ಲಿ ಹಿಂದೂಸ್ಥಾನಿ ಗಾಯಕರಾದ ವಿಜಯ ಕುಮಾರ ಎಸ್. ಮೇಟಿ, ತಬಲದಲ್ಲಿ ಸುಮೇಧ ಕಶ್ಯಪ್ ಮತ್ತು ಅರುಣ್ ಸಹಕರಿಸಿದರು. ವಚನ ಸಾಹಿತ್ಯ ಸಂಬಂಧಿ ಪ್ರಬಂಧ, ಭಾಷಣ, ಚಿತ್ರಕಲೆ, ಗಾಯನ ಸ್ಪರ್ಧೆಗಳನ್ನು ನಡೆಸಿ ವಿಜೇತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಕ್ಷರ ಸಾಹಿತ್ಯ ಸಂಘದ ಉಪಾಧ್ಯಕರಾದ ವರ್ಷಾ ಸ್ವಾಗತಿಸಿ, ಅಧ್ಯಾಪಕಿ ಸಂಗೀತ ಶೆಟ್ಟಿ ವಂದಿಸಿ, ವೈಷ್ಣವಿ ಬಹುಮಾನ ಪಟ್ಟಿ ವಾಚಿಸಿದರು. ಇಂಚನಾ ಪ್ರಾರ್ಥಿಸಿ, ಪದಾಧಿಕಾರಿಗಳಾದ ಚಿನ್ಮಯಿ ಮತ್ತು ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಸಮಾರೋಪಗೊಂಡ ‘ಮಳವಳ್ಳಿ ಸುಂದರಮ್ಮ ರಂಗೋತ್ಸವ’
    Next Article ಎಡ್ಡಿ ಸಿಕ್ವೇರಾ ವಿರಚಿತ ’ನವ್- ರಂಗ್’ ನಾಟಕ ಕೃತಿ ಲೋಕಾರ್ಪಣೆ | ಆಗಸ್ಟ್ 31
    roovari

    Comments are closed.

    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.