Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದಲ್ಲಿ ಅಮೋಘವಾಗಿ ಸಂಪನ್ನಗೊಂಡ ‘ಅನಂತ ಸ್ವರ ನಮನ’ ಸಂಗೀತೋತ್ಸವ
    Music

    ಧಾರವಾಡದಲ್ಲಿ ಅಮೋಘವಾಗಿ ಸಂಪನ್ನಗೊಂಡ ‘ಅನಂತ ಸ್ವರ ನಮನ’ ಸಂಗೀತೋತ್ಸವ

    August 27, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವದ ಸಮಾರೋಪ ಸಮಾರಂಭವು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ದಿನಾಂಕ 25 ಆಗಸ್ಟ್ 2024ರಂದು ಸಂಪನ್ನಗೊಂಡಿತು.

    ಈ ಕಾರ್ಯಕ್ರಮದಲ್ಲಿ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇವರು ಮಾತನಾಡಿ “ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಧಾರವಾಡ ಸಂಗೀತ ಕ್ಷೇತ್ರದ ಬೆಳೆವಣಿಗೆಗೆ ಅನಂತ ಹರಿಹರ ಅವರ ಕೊಡುಗೆ ಅಪಾರ. ಅನಂತ ಹರಿಹರ ಅವರನ್ನು ಕಳೆದುಕೊಂಡಿದ್ದು ಸಂಗೀತದ ರತ್ನ ಕಳಿಚಿದಂತಾಗಿದೆ. ಅನಾಮಿಕ ಸಂಗೀತ ಸೇವಕರಾಗಿದ್ದ ಅವರು ಪ್ರತಿ ಸಂಗೀತ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಪ್ರಸಿದ್ಧರಾಗಿದ್ದರು. ಈ ಮೂಲಕ ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು ಎಂದು ಹೇಳಿದರು.

    ಪಂಡಿತ್ ಬಿ.ಎಸ್. ಮಠ ಮಾತನಾಡಿ “ಅನಂತ ಹರಿಹರರು ಎಲ್ಲಾ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಸಹಕಾರವನ್ನು ಮರೆಯುವಂತಿಲ್ಲ. ಆದ್ದರಿಂದ ಕಲಾವಿದರ ಸ್ಮರಣೆಯಲ್ಲಿ ಅನಂತ ಹರಿಹರರು ಸದಾ ಇರುತ್ತಾರೆ” ಎಂದರು. ಪಂಡಿತ್ ಶ್ರೀಪಾದ ಹೆಗಡೆ, ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿದರು. ಎಚ್.ವಿ. ಕಾಖಂಡಕಿ, ಡಾ. ರಮಾಕಾಂತ ಜೋಶಿ ಇತರರು ಉಪಸ್ಥಿತರಿದ್ದರು.

    ಅನಂತ ಹರಿಹರ ಸಂಸ್ಮರಣೆಯ ‘ಅನಂತ ಸ್ವರ ನಮನ’ ಸಂಗೀತೋತ್ಸವದ ಮೂರನೇ ದಿನದ ಕಾರ್ಯಕ್ರಮವು ನಿಖಿಲ್ ಜೋಶಿಯವರ ಸಿತಾರ ವಾದನದೊಂದಿಗೆ ಆರಂಭಗೊಂಡಿತು. ಸಿತಾರ ತಂತುಗಳಿಂದ ಗಾವತಿ ರಾಗವನ್ನು ಪ್ರಸ್ತುತಪಡಿಸಿದ ಇವರಿಗೆ ಅಕ್ಷಯ ಭಟ್ಟ ತಬಲಾ ಸಾಥ್ ನೀಡಿದರು. ನಂತರ ಯುವ ಕಲಾವಿದೆ ಶಿವಾನಿ ಮಿರಜಕರ ಜೈನ ಇವರು ಭೂಪಾಲಿ ರಾಗವನ್ನು ಸಾದರಪಡಿಸಿದರು. ವಿಲಂಬಿತ್ ಏಕತಾಲ್ ನಲ್ಲಿ “ಜಬ ಮೇ ಜಾನಿ…”, ಧೃತ್ ತೀನತಾಲದಲ್ಲಿ “ಮೊರಾ ಜಾಂಝ ಮಂದಿಲಗಾ…” ಪ್ರಸ್ತುತ ಪಡಿಸಿದ ಇವರಿಗೆ ಶ್ರೀಧರ ಮಾಂಡ್ರೆ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಿದರು. ಕೊನೆಯಲ್ಲಿ ಧಾರವಾಡ ಘರಾಣೆಯ ಯುವ ಪ್ರತಿಭೆ ಮೊಹಸಿನ್ ಖಾನರ ಸಿತಾರ ವಾದನದಲ್ಲಿ ಪೂರಿಯಾ ಕಲ್ಯಾಣ ರಾಗವನ್ನು ಪ್ರಸ್ತುತಪಡಿಸಿ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು. ಇವರಿಗೆ ಯುವ ತಬಲಾ ಪ್ರತಿಭೆ ಹೇಮಂತ ಜೋಶಿ ಸಮರ್ಥ ತಬಲಾ ಸಾಥ್ ನೀಡಿದರು. ಧಾರವಾಡದ ಪ್ರಬುದ್ದ ಗಾಯಕ ಕುಮಾರ ಮರಡೂರ ಇವರ ಗಾಯನದೊಂದಿಗೆ ಈ ಕಾರ್ಯಕ್ರಮಕ್ಕೆ ತೆರೆ ಬಿತ್ತು.

    Share. Facebook Twitter Pinterest LinkedIn Tumblr WhatsApp Email
    Previous Articleಸುರತ್ಕಲ್ ನಲ್ಲಿ ‘ಉದಯರಾಗ – 55’ | ಸೆಪ್ಟೆಂಬರ್ 1
    Next Article ‘ಸೀತಾಂಗೋಳಿಯ ಗತವೈಭವ’ ಕೃತಿ ಪರಿಚಯ ಹಾಗೂ ವಿಮರ್ಶೆ ಕಾರ್ಯಕ್ರಮ | ಸೆಪ್ಟೆಂಬರ್ 1
    roovari

    Comments are closed.

    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.