Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಪುರಭವನದಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವದ ಸಮಾರೋಪ ಸಮಾರಂಭ | ಡಿಸೆಂಬರ್ 27 ಮತ್ತು 28
    Bharathanatya

    ಮಂಗಳೂರಿನ ಪುರಭವನದಲ್ಲಿ ನಾಟ್ಯಾರಾಧನಾ ತ್ರಿಂಶೋತ್ಸವದ ಸಮಾರೋಪ ಸಮಾರಂಭ | ಡಿಸೆಂಬರ್ 27 ಮತ್ತು 28

    December 25, 2024Updated:January 7, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಉರ್ವದ ಹೆಸಾರಂತ ಭರತನಾಟ್ಯ ಸಂಸ್ಥೆ ನಾಟ್ಯಾರಾಧನಾ ಕಲಾ ಕೇಂದ್ರದ ‘ತ್ರಿಂಶೋತ್ಸವದ ಸಮಾರೋಪ ಸಮಾರಂಭ’ವನ್ನು ದಿನಾಂಕ 27 ಡಿಸೆಂಬರ್ 2024 ಮತ್ತು 28 ಡಿಸೆಂಬರ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ. ನಾಟ್ಯಾರಾಧನಾ ಕಲಾ ಕೇಂದ್ರ ಟ್ರಸ್ಟ್ (ರಿ.) ಉರ್ವ ಮಂಗಳೂರು, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಹಾಗೂ ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.

    ದಿನಾಂಕ 27 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಸಮಾರೋಪ ಸಮಾರಂಭವನ್ನು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರು ಉದ್ಘಾಟಿಸಲಿದ್ದಾರೆ. ಅನನ್ಯ ಕಲ್ಚರಲ್ ಅಕಾಡೆಮಿ ಬೆಂಗಳೂರು ಮತ್ತು ಡಾ. ಶ್ರೀಧರ ಅಕ್ಕಿಹೆಬ್ಬಾಳು ಕಾವೇರಿ ನಾಟ್ಯಯೋಗ ಯು.ಎಸ್.ಎ. ಇವರ ಸಹಯೋಗದಲ್ಲಿ ನಾಟ್ಯಾರಾಧನಾದ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಮಂಗಳೂರು ವಿರಚಿತ ಸಂಗೀತ ಮತ್ತು ನೃತ್ಯ ನಿರ್ದೇಶಿತ ಕನ್ನಡ ಭಾಷಾ ಭರತನಾಟ್ಯ ಮಾರ್ಗದ ಧ್ವನಿ ಮುದ್ರಣ ‘ನೃತ್ಯಾಮೃತ’ವನ್ನು ಮೂಡಬಿದ್ರೆಯ ಧನಲಕ್ಷ್ಮೀ ಕ್ಯಾಶೂಸ್ ನ ಮಾಲಕರಾದ ಶ್ರೀ ಶ್ರೀಪತಿ ಭಟ್ ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೆ ಅವರದೇ ರಚನೆಯ ಭಕ್ತಿ ಮತ್ತು ನಾಯಕೀ ಭಾವ ಕೇಂದ್ರಿತ ಭರತನಾಟ್ಯ ಮಾರ್ಗದ ಪ್ರಸ್ತುತಿ ‘ಭಾವಿಕಾ’ (ಆಕೆಯ ಭಾವ ಛಾಯೆಗಳು) ನಾಡಿನ ಆಯ್ದ ಹೆಸರಾಂತ ಮಹಿಳಾ ಕಲಾವಿದೆಯರಿಂದ ರಂಗ ಸಾಕ್ಷಾತ್ಕಾರಗೊಳ್ಳಲಿದೆ.

    ನಾಟ್ಯ ನಿಕೇತನ ಕೊಲ್ಯದ ಸ್ಥಾಪಕ ನಿರ್ದೇಶಕರಾಗಿರುವ ಗುರು ಉಳ್ಳಾಲ ಮೋಹನ್ ಕುಮಾರ್ ಹಾಗೂ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ನ ನಿರ್ದೇಶಕರಾದ ಗುರು ಚಂದ್ರಶೇಖರ ನಾವಡರು ಆಶೀರ್ವಚನಗೈಯಲಿದ್ದು, ಅನನ್ಯ ಫೀಡ್ಸ್‌ ಹುಬ್ಬಳ್ಳಿಯ ಮಾಲಕರಾದ ದಿವಾಣ ಗೋವಿಂದ ಭಟ್, ಕಲಾಪೋಷಕಿ ಶ್ರೀಮತಿ ಶಕುಂತಲಾ ರಮಾನಂದ ಭಟ್ ಇಡ್ಯ, ಲಯನ್ಸ್ ಕ್ಲಬ್ ನ ಈಜನ್ 11ರ ರೀಜನಲ್ ಚಯರ್ ಪರ್ಸನ್ ಲಯನ್ ವೆಂಕಟೇಶ ಹೆಬ್ಬಾರ್, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್, ನಾಟ್ಯಾರಾಧನಾದ ಟ್ರಸ್ಟಿ ಶ್ರೀ ಬಿ. ರತ್ನಾಕರ ರಾವ್, ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಬೆಂಗಳೂರಿನ ವಿದುಷಿ ಸುಶ್ಮಿತಾ ರಾವ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ತ್ರಿಂಶೋತ್ಸವದ ಗೌರವಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ಸಮಾರಂಭದಲ್ಲಿ ಕಾರ್ಯಕ್ರಮ ನೆರವೇರಲಿದೆ. ‘ಭಾವಿಕಾ’ದ ಪ್ರಸ್ತುತಿಯಲ್ಲಿ ಗುರು ರಾಧಿಕಾ ಶೆಟ್ಟಿ ಮಂಗಳೂರು, ವಿದುಷಿ ಮಂಜರಿಚಂದ್ರ ಪುಷ್ಪರಾಜ್ ಉಡುಪಿ, ವಿದುಷಿ ಸಂಧ್ಯಾ ಉಡುಪ ಬೆಂಗಳೂರು, ವಿದುಷಿ ಶ್ರೀವಿದ್ಯಾ ಶಶಿಧರ್ ಮೈಸೂರು, ವಿದುಷಿ ದಿವ್ಯ ಪ್ರಭಾತ್ ಬೆಂಗಳೂರು ಹಾಗೂ ನಾಟ್ಯಾರಾಧನಾದ ಹಿರಿಯ ನೃತ್ಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಿಮ್ಮೇಳದಲ್ಲಿ ಗುರು ವಿದುಷಿ ಸುಮಂಗಲಾ ರತ್ನಾಕರ ರಾವ್ ಮಂಗಳೂರು ಜತೆಗೆ ಬೆಂಗಳೂರಿನ ವಿದುಷಿ ಹರ್ಷಿತಾ ವಿದ್ಯಾ ಗಾಯನದಲ್ಲಿ, ವಿದ್ವಾನ್ ವಿನಯ್ ನಾಗರಾಜನ್ ಮೃದಂಗದಲ್ಲಿ ಹಾಗೂ ವಿದ್ವಾನ್ ಕೃಷ್ಣ ಕಶ್ಯಪ್ ಕೊಳಲಿನಲ್ಲಿ ಸಹಕರಿಸಲಿದ್ದಾರೆ.

    ದಿನಾಂಕ 28 ಡಿಸೆಂಬರ್ 2024ರಂದು ‘ನೃತ್ಯ ಸಂಭ್ರಮ’ ಹಾಗೂ ‘ಯಕ್ಷ ಭರತ ಸಂಗಮ’ವನ್ನು ಆಯೋಜಿಸಿದ್ದು, ಅಂದಿನ ಕಾರ್ಯಕ್ರಮ ಆಸರೆ ಚಾರಿಟೇಬಲ್ ಟ್ರಸ್ಟಿನ ಡಾ. ಆಶಾಜ್ಯೋತಿ ರೈ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಾಟ್ಯಾರಾಧನಾ ಸಂಸ್ಥೆಗೆ ನಿಸ್ವಾರ್ಥವಾಗಿ ತೆರೆಮರೆಲ್ಲಿ ಆಧಾರವಾಗಿ ಸಹಕರಿಸಿದ ಹಿರಿಯ ಮೃದಂಗವಾದಕರಾದ ಶ್ರೀ ಬಿ. ರಮೇಶ್ ರಾವ್ ಸುರತ್ಕಲ್, ವರ್ಣಾಲಂಕಾರ ವಸ್ತ್ರಾಲಂಕಾರ ತಜ್ಞರಾದ ಶ್ರೀ ಎಚ್.ಯು. ಅನಂತಯ್ಯ ಹೊಸಬೆಟ್ಟು, ಶ್ರೀ ಎಚ್. ಧನಪಾಲ್‌ ಶೆಟ್ಟಿಗಾರ್, ಶ್ರೀ ದಿನೇಶ್ ಶೆಟ್ಟಿಗಾರ್ ಮಂಗಳೂರು ಹಾಗೂ ವಿದುಷಿ ಪ್ರಾರ್ಥನಾ ಜೆ. ಹೊಸಬೆಟ್ಟು ಇವರುಗಳನ್ನು ‘ತ್ರಿಂಶೋತ್ಸವ ಸನ್ಮಾನ’ದ ಮೂಲಕ ಗೌರವಿಸಲಾಗುತ್ತದೆ.

    ಸಮಾರಂಭದಲ್ಲಿ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ರಾಮನಗರದ ಡಿ.ವೈ.ಎಸ್.ಪಿ. ಶ್ರೀ ಪಿ. ದಿನಕರ್ ಶೆಟ್ಟಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ, ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕರಾದ ಶ್ರೀ ಪಣಂಬೂರು ವಾಸುದೇವ ಐತಾಳ್, ಕಲಾಶ್ರೀ ಗುರು ಚಂದ್ರಶೇಖರ ನಾವಡ, ಪಣಂಬೂರು ವೆಂಕಟ್ರಾಯ ಐತಾಳ್, ಉಡುಪಿಯ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪಕಿ ಶ್ರೀಮತಿ ಗೋಪಿಕಾ ಸತೀಶ್ ಮಯ್ಯ, ನಾಟ್ಯಾರಾಧನಾ ತ್ರಿಂಶೋತ್ಸವದ ಉಪಾಧ್ಯಕ್ಷರಾದ ಬೈಕಾಡಿ ಶ್ರೀನಿವಾಸ ರಾವ್, ನಾಟ್ಯಾರಾಧನಾ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮೃಣಾಲ ರಾಘವೇಂದ್ರ ಬೆಂಗಳೂರು ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಅಮೆರಿಕಾದ ನೇಹಾ ಬಿ. ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ನಿರ್ದೇಶನದಲ್ಲಿ ತಮ್ಮ ಸಮಗ್ರ ವಿದ್ಯಾರ್ಥಿ ವೃಂದದಿಂದ ನಡೆಯಲಿದೆ. ‘ಯಕ್ಷ ಭರತ ಸಂಗಮ’ಕ್ಕೆ ‘ಭಸ್ಮಾಸುರ ಮೋಹಿನಿ’ ಎಂಬ ಆಖ್ಯಾನವನ್ನು ನಿರ್ಣಯಿಸಿದ್ದು ಭರತನಾಟ್ಯ ಮತ್ತು ಯಕ್ಷಗಾನ ಪ್ರಕಾರಗಳಲ್ಲಿ ಎರಡು ಹಿಮ್ಮೇಳಗಳ ಸಹಿತ ರಂಗ ಸಾಕ್ಷಾತ್ಕಾರಗೊಳ್ಳಲಿದೆ. ಭರತನಾಟ್ಯ ಹಿಮ್ಮೇಳ ಕಲಾವಿದರಾಗಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಮಂಗಳೂರು, ವಿದ್ವಾನ್ ಶ್ರೀ ಕೃಷ್ಣ ಆಚಾರ್ ಪಾಣೆಮಂಗಳೂರು, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು, ವಿದುಷಿ ಶರ್ಮಿಳಾ ರಾವ್ ಉಡುಪಿ ಹಾಗೂ ಯಕ್ಷಗಾನದ ಹಿಮ್ಮೇಳದಲ್ಲಿ ಧೀರಜ್ ರೈ ಸಂಪಾಜೆ, ಶಿತಿಕಂಠ ಭಟ್ ಉಜಿರೆ, ಶ್ರೀ ಕೌಶಿಕ್ ರಾವ್ ಪುತ್ತಿಗೆ ಹಾಗೂ ಶ್ರೀ ಸ್ವಸ್ತಿಕ್ ರಾವ್ ಕಾವೂರು ಸಹಕರಿಸಲಿದ್ದಾರೆ.

    ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸುವ ನಾಟ್ಯಾರಾಧನಾ ಕಲಾ ಕೇಂದ್ರ ಟ್ರಸ್ಟ್ (ರಿ.) ಉರ್ವ ಮಂಗಳೂರು, ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ವಿದ್ಯಾರ್ಥಿ ಸಮಿತಿ.

    Share. Facebook Twitter Pinterest LinkedIn Tumblr WhatsApp Email
    Previous Articleಚನ್ನಪಟ್ಟಣದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ | ಡಿಸೆಂಬರ್ 29
    Next Article ಸಂಗೀತ ಕಛೇರಿ ವಿಮರ್ಶೆ | ಭಾವೋತ್ಪಾದಿಸಿದ ಬಾನ್ಸುರಿ ವಾದನ
    roovari

    Add Comment Cancel Reply


    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.