Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಶಾರದಾ ನಾಟ್ಯಾಲಯದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭ

    November 3, 2025

    ವಿಪ್ರವೇದಿಕೆಯಿಂದ ದಶಮಾನೋತ್ಸವ ಸರಣಿಯ ‘ಗೀತ-ನೃತ್ಯ ಸಂಭ್ರಮ’

    November 3, 2025

    ‘ಪುಟಾಣಿ ಕಿನ್ನರಿ ಕವಿತಾ’ ಮಕ್ಕಳ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

    November 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಶಾರದಾ ನಾಟ್ಯಾಲಯದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭ
    Bharathanatya

    ಶ್ರೀ ಶಾರದಾ ನಾಟ್ಯಾಲಯದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭ

    November 3, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಶ್ರೀ ಶಾರದಾ ನಾಟ್ಯಾಲಯದ 30ನೇ ವರ್ಷದ ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಾರೋಪ ಸಮಾರಂಭವು ದಿನಾಂಕ 26 ಅಕ್ಟೋಬರ್ 2025ರಂದು ಸುರತ್ಕಲ್ಲಿನ ವಿದ್ಯಾದಾಯಿನೀ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.

    ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಇವರ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿದುಷಿ ಶ್ರೀಮತಿ ಭಾರತಿ ಸುರೇಶ್ ಹಾಗೂ ಅವರ ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಭರತನಾಟ್ಯ ನಡೆಯಿತು. ಅದೇ ಸಮಯದಲ್ಲಿ ‘ನೃತ್ಯ ಕುಂಚ’ ಕಾರ್ಯಕ್ರಮದಲ್ಲಿ ಶ್ರೀಮತಿ ಅಪೂರ್ವ ಆರ್. ತಂತ್ರಿಯವರು ಶ್ರೀ ಕೃಷ್ಣನ ಚಿತ್ರವನ್ನು ಅನಾಯಾಸವಾಗಿ ಬಿಡಿಸಿ ಜನರ ಚಪ್ಪಾಳೆಯನ್ನು ತಮ್ಮದಾಗಿಸಿಕೊಂಡರು.

    ಮುಂದಿನ ಕಾರ್ಯಕ್ರಮವಾಗಿ ಚಕ್ರಪಾಣಿ ನೃತ್ಯ ಕಲಾ ಕೇಂದ್ರ (ರಿ.) ಅತ್ತಾವರ ಮಂಗಳೂರು, ಇದರ ನೃತ್ಯ ಗುರುಗಳಾದ ನಾಟ್ಯ ಕಲಾ ರತ್ನ ವಿದ್ವಾನ್ ಶ್ರೀ ಸುರೇಶ್ ಅತ್ತಾವರ್ ಅವರ ಶಿಷ್ಯ ವೃಂದದವರಿಂದ ‘ಮಣಿಕಂಠ ಜನನ’ ನೃತ್ಯ ರೂಪಕ ಜನರ ಮೆಚ್ಚುಗೆಗೆ ಪಾತ್ರವಾಯಿತು. ‘ನೃತ್ಯ ಸಂಯೋಗ’ ಕಾರ್ಯಕ್ರಮದಲ್ಲಿ ಕರ್ನಾಟಕ ಕರಾವಳಿಯ ಖ್ಯಾತ ನೃತ್ಯ ಗುರುಗಳಾದ ವಿದುಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್, ವಿದುಷಿ ಶ್ರೀಮತಿ ವಿದ್ಯಾ ಮನೋಜ್, ವಿದ್ವಾನ್ ಶ್ರೀ ದೀಪಕ್ ಕುಮಾರ್ ಪುತ್ತೂರು, ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಮತಿ ಲತಾ ನಾಗರಾಜ್, ವಿದ್ವಾನ್ ಶ್ರೀ ಸುಧೀರ್ ಕೊಡವೂರು, ವಿದುಷಿ ಶ್ರೀಮತಿ ಯಶಾ ರಾಮಕೃಷ್ಣ, ವಿದುಷಿ ಶ್ರೀಮತಿ ಲಕ್ಷ್ಮೀ ಗುರುರಾಜ್ ಮತ್ತು ವಿದುಷಿ ಶ್ರೀಮತಿ ರಾಜಶ್ರೀ ಉಳ್ಳಾಲ್ ಇವರುಗಳ ನಿರ್ದೇಶನದಲ್ಲಿ ಸಮೂಹ ನೃತ್ಯ ಪ್ರದರ್ಶನ ನಡೆಯಿತು. ಒಂದಕ್ಕಿಂತ ಒಂದು ತಂಡ ಅತ್ಯದ್ಭುತವಾದ ನೃತ್ಯವನ್ನು ಪ್ರದರ್ಶಿಸಿ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು.

    ಮಧ್ಯಾಹ್ನದ ಕಾರ್ಯಕ್ರಮವಾದಂತಹ ‘ನೃತ್ಯೈಕ್ಯಂ’ನಲ್ಲಿ ನಾಟ್ಯ ನಿಲಯಂ, ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರ ಮಗಳು ಹಾಗೂ ಶಿಷ್ಯರಿಂದ ಭರತನಾಟ್ಯ- ಕೂಚಿಪುಡಿ – ಮೋಹಿನಿಯಾಟ್ಟಂ ಜುಗಲಬಂಧಿ ನಡೆಯಿತು. ಅತ್ಯಂತ ಸುಂದರವಾಗಿ ಮೂಡಿ ಬಂದಂತಹ ಈ ಪ್ರಸ್ತುತಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆಸಿತು. ಮುಂದೆ ‘ಯಕ್ಷ ವೈಭವ’ದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಪೂರ್ಣಿಮ ಯತೀಶ್ ರೈ ಇವರ ನಿರ್ದೇಶನದಲ್ಲಿ ‘ನರಕಾಸುರ ಮೋಕ್ಷ’ ಯಶಸ್ವಿಯಾಗಿ ಮೂಡಿ ಬಂತು.

    baikady bharatanatyam dance Kuchipudi Mohiniyattam Music roovari
    Share. Facebook Twitter Pinterest LinkedIn Tumblr WhatsApp Email
    Previous Articleವಿಪ್ರವೇದಿಕೆಯಿಂದ ದಶಮಾನೋತ್ಸವ ಸರಣಿಯ ‘ಗೀತ-ನೃತ್ಯ ಸಂಭ್ರಮ’
    roovari

    Add Comment Cancel Reply


    Related Posts

    ವಿಪ್ರವೇದಿಕೆಯಿಂದ ದಶಮಾನೋತ್ಸವ ಸರಣಿಯ ‘ಗೀತ-ನೃತ್ಯ ಸಂಭ್ರಮ’

    November 3, 2025

    ‘ಪುಟಾಣಿ ಕಿನ್ನರಿ ಕವಿತಾ’ ಮಕ್ಕಳ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ

    November 3, 2025

    ಹಿರಿಯ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ಇನಿಲ್ಲ

    November 3, 2025

    ಶಾರದಾ ವಿದ್ಯಾಲಯದಲ್ಲಿ ವಚನ ಸಾಹಿತ್ಯದ ಬಗ್ಗೆ ರಸಪ್ರಶ್ನೆ

    November 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.