ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಸಕಲ ರಂಗಹೆಜ್ಜೆ ಸಂಸ್ಥೆಯು ಆಯೋಜಿಸಿದ ಒಂದು ತಿಂಗಳ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 10 ಹಾಗೂ 11 ಮೇ 2025 ರಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದಲ್ಲಿ ನಡೆಯಿತು.
ಸಕಲ ರಂಗ ಹೆಜ್ಜೆ ಟ್ರಸ್ಟ್ (ರಿ) ಸಂಸ್ಥೆಯ ಖಜಾಂಚಿಯಾದ ಶ್ರೀಮತಿ ನಾಗಮಣಿ ಪಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪ್ರಸಿದ್ದ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ, ನಗೆಮಾತಿನ ಸರದಾರ ಶ್ರೀ ರಿಚರ್ಡ್ ಲೂಯಿಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ರಂಗಕಮಿ೯ಗಳಾದ ಶ್ರೀ ಕಾನಾ ಶ್ರೀನಿವಾಸ್, ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾದ ಶ್ರೀ ಕೋಡಿ ರಂಗಪ್ಪ, ಚಲನಚಿತ್ರ ಸಂಭಾಷಣೆ ಬರಹಗಾರರು ಹಾಗೂ ನಿರ್ದೇಶಕರಾದ ಶ್ರೀ ವರದರಾಜು, ಪ್ರೌಢಶಾಲಾ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿಗಳಾದ ಶ್ರೀ ಪಿ. ಸರ್ಧಾರ್ಚಾಂದ್ ಪಾಷ, ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ನಿರ್ಮಲ .ವಿ, ಸಮಾಜ ಸೇವಕರಾದ ಶ್ರೀ ಸಿ.ಎಲ್. ಶ್ರೀನಿವಾಸ್ (ಡ್ಯಾನ್ಸ್ ಸೀನು), ಪಂಚಗಿರಿ ಭೋಧನಾ ಪ್ರೌಢ ಶಾಲೆ ಚಿಕ್ಕಬಳ್ಳಾಪುರದ ಮುಖ್ಯ ಶಿಕ್ಷಕರಾದ ಶ್ರೀ ನಾರಾಯಣಸ್ವಾಮಿ, ಜಾನಪದ ಹಾಡುಗಾರರು ಹಾಗೂ ರಂಗ ನಿರ್ದೇಶಕರಾದ ಶ್ರೀ ಗ. ನ. ಅಶ್ವತ್, ರಂಗಭೂಮಿ, ಸಿನಿಮಾ ನಟ ಮತ್ತು ನಿರ್ದೇಶಕರಾದ ಡಾ. ದೇವನಹಳ್ಳಿ ದೇವರಾಜ್, ಚುಟುಕು ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಶ್ರೀ ಚಲಪತಿಗೌಡ, ಹೂವಿನ ವ್ಯಾಪಾರಿಗಳಾದ ಶ್ರೀ ವೆಂಕಟರಾಜು, ಟಿ.ಎ.ಪಿ.ಸಿ.ಎಂ.ಎಸ್.ಐ. ಚಿಕ್ಕಬಳ್ಳಾಪುರ ಹಾಗೂ ಕ.ರಾ.ಅ.ಪ.ಬಿ. ಗುತ್ತಿಗೆದಾರರ ಸಂಘ ಚಿಕ್ಕಬಳ್ಳಾಪುರದ ಮಾಜಿ ಅಧ್ಯಕ್ಷರಾದ ಶ್ರೀ ವಿ. ಮಧುಚಂದ್ರ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಡಾ. ಸಿದ್ದಲಿಂಗಯ್ಯ ರಚನೆಯ “ಏಕಲವ್ಯ”, ಎಚ್. ಎಸ್. ವೆಂಕಟೇಶ್ ಮೂರ್ತಿ ರಚನೆಯ “ಕುಣಿಕುಣಿ ನವಿಲೇ” ಜೊತೆಗೆ ಪ್ರಹಸನ ನಾಟಕವಾದ” ನೀರಿಗಾಗಿ ಕೂಗು ಮತ್ತು ಬಕಾಸುರ ಕಥೆ” ಪ್ರದರ್ಶನಗೊಂಡಿತು.