Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

    May 29, 2025

    ಶ್ರವಣರಂಗ ಸವಣೂರು ವತಿಯಿಂದ ಯಕ್ಷಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ತಾಳಮದ್ದಳೆ

    May 29, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದ ಸೃಜನಾ ರಂಗಮಂದಿರದಲ್ಲಿ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿದ ನಾಟಕ ‘ಗಂಗಾವತರಣ’ | ಡಿಸೆಂಬರ್ 26
    Drama

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿದ ನಾಟಕ ‘ಗಂಗಾವತರಣ’ | ಡಿಸೆಂಬರ್ 26

    December 24, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಕನ್ನಡದ ವರಕವಿ ದ.ರಾ. ಬೇಂದ್ರೆಯವರು ಧಾರವಾಡದ ನೆಲದ ಸತ್ವವನ್ನು ಹೀರಿದ ಜನಮಾನಸ ಕವಿ. ಸಂಸಾರಿಕ ಜಂಜಾಟ ಹಾಗೂ ಬದುಕಿನ ಹೊಯ್ದಾಟದಲ್ಲಿ ಬೆಂದು ಪಕ್ವವಾದ ಬೇಂದ್ರೆಯವರು ದಿನನಿತ್ಯದ ಆಡುಮಾತಿನಲ್ಲಿಯೇ ಜೀವನದ ಒಳನೋಟಗಳನ್ನು ನೀಡುವ ಸಾವಿರಾರು ಕವಿತೆಗಳನ್ನು ಬರೆದು ಹಳ್ಳಿಯ ಮುಗ್ಧ ಮನಸುಗಳು ಹಾಗೂ ಪ್ರಜ್ಞಾವಂತ ನಾಗರಿಕರ ಮನೆ ಮನಗಳಲ್ಲಿ ನೆಲೆಸಿದ್ದಾರೆ. ಅವರ ಕವಿತೆಗಳು ಜಾನಪದ ಸೊಗಡು ಹಾಗೂ ಭಾವಗೀತೆಗಳ ಗೇಯತೆಯಿಂದ ಸದಾ ಕಾಲ ಕನ್ನಡಿಗರ ಹೃದಯದಲ್ಲಿ ಇಂದಿಗೂ ಅನುರಣಿಸುತ್ತಿವೆ.

    ‘ಗಂಗಾವತರಣ’ ವರಕವಿ ಬೇಂದ್ರೆಯವರ ಬದುಕು ಬರಹಗಳನ್ನು ಆಧರಿಸಿ ಬರೆದ ನಾಟಕ. ಬೇಂದ್ರೆ ಅವರ ಬದುಕಿನ ಹಲವಾರು ತುಣುಕುಗಳನ್ನು ಬಿಂಬಿಸುತ್ತ, ಬೇಂದ್ರೆ ಮಾಸ್ತರರ ಸಂಶೋಧನೆಗಳ ಆಳವನ್ನು ಅಗೆಯುತ್ತ, ಜೀವನದ ತಾದಾತ್ಮ್ಯವನ್ನು ತೋರುವ ಅವರ ಜೀವನ ಗಾಥೆಯ ಹಿರಿಮೆ ಗರಿಮೆಯನ್ನು ನಾಟಕಕಾರ ನಿರ್ದೇಶಕ ಶ್ರೀ ರಾಜೇಂದ್ರ ಕಾರಂತರು ಬೇಂದ್ರೆಯವರ ಗೀತೆಗಳು ಹಾಗೂ ಅದಕ್ಕನುಗುಣವಾದ ವರ್ಣ ರಂಜಿತ ನೃತ್ಯ ರೂಪಕಗಳ ಮೂಲಕ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಈ ನಾಟಕವು ಬೇಂದ್ರೆಯವರ ಬದುಕಿನ ಪುಟಗಳನ್ನು ರಂಗದ ಮೇಲೆ ಜೀವಂತಗೊಳಿಸುವುದರೊಂದಿಗೆ ಬದುಕಿನ ಸಾಧ್ಯತೆಗಳ ಬಗ್ಗೆ ಹಲವಾರು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಕಳೆದ 15 ವರ್ಷಗಳಿಂದ ದೇಶಾದ್ಯಂತ ಪ್ರದರ್ಶನಗೊಂಡಿರುವ ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಮಹತ್ವದ ಮೈಲಿಗಲ್ಲು ಎನಿಸಿದೆ.

    ಬೆಂಗಳೂರಿನ ರಂಗಸೌರಭ ತಂಡವು ಪ್ರಸ್ತುತಪಡಿಸುತ್ತಿರುವ ‘ಗಂಗಾವತರಣ’ ಇದೀಗ ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 26 ಡಿಸೆಂಬರ್ 2024ರಂದು ಸಂಜೆ 6-00 ಗಂಟೆಗೆ ಪ್ರದರ್ಶಿತವಾಗಲಿದೆ. ಧಾರವಾಡ ನಗರದ ರಂಗಪ್ರಿಯರಿಗೆ ಹಾಗೂ ವಿದ್ಯಾರ್ಥಿ ಮಿತ್ರರಿಗೆ ಬೇಂದ್ರೆ ವಾಂಗ್ಮಯದ ಅರಿವು ಮೂಡಿಸಲು ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳಿಂದಲೇ ಅಭಿನಯಸಲ್ಪಡುತ್ತಿರುವ ಈ ನಾಟಕವನ್ನು ಧಾರವಾಡದ ಸ್ನೇಹ ಪ್ರತಿಷ್ಠಾನ, ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಡಾ. ಅಣ್ಣಾಜಿರಾವ್ ಸಿರೂರ ರಂಗಮಂದಿರ ಪ್ರತಿಷ್ಠಾನದವರು ಆಯೋಜಿಸಿದ್ದಾರೆ.

    ಈ ನಾಟಕದ ಪ್ರವೇಶ ಪತ್ರಗಳಿಗಾಗಿ ಹಾಗೂ ಇತರ ವಿವರಗಳಿಗಾಗಿ ಶ್ರೀ ಹರ್ಷ ಡಂಬಳ – 9845703404 ಹಾಗೂ ಶ್ರೀ ಸಮೀರ್ ಜೋಶಿ – 9845447002 ಇವರನ್ನು ಸಂಪರ್ಕಿಸಬಹುದು. ಮಹಾನಗರದ ಈ ಅಪರೂಪದ ಸದುಪಯೋಗಪಡಿಸಿಕೊಳ್ಳಬೇಕಾಗಿ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಂಚಾಲಕರಾದ ಶ್ರೀ ಸಮೀರ್ ಜೋಶಿ ವಿನಂತಿಸುತ್ತಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ 16ನೇ ವರ್ಷದ ‘ಆಸ್ರಣ್ಣ ಪ್ರಶಸ್ತಿ’ ಪ್ರದಾನ ಮತ್ತು ಯಕ್ಷಗಾನ
    Next Article ಬೀರಣ್ಣ ಮಲಕಣ್ಣ ಪುಜಾರೀ ಕನ್ನಡ ಭವನದ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಆಯ್ಕೆ
    roovari

    Add Comment Cancel Reply


    Related Posts

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    ವಿಶ್ವ ಕನ್ನಡ ಜಾನಪದ ಪರಿಷತ್ ವತಿಯಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10 

    May 29, 2025

    ರಂಗ ಚಿನ್ನಾರಿಯಿಂದ ಸಂಸ್ಕೃತಿ ಉಳಿಸುವ ಕೆಲಸ – ಎಡನೀರು ಶ್ರೀ ಗಳು

    May 28, 2025

    ಬೆಂಗಳೂರಿನ ಮಲ್ಲತ್ತಳ್ಳಿ ಕಲಾಗ್ರಾಮದಲ್ಲಿ ನಾಟಕ ಪ್ರದರ್ಶನ | ಮೇ 30

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.