Subscribe to Updates

    Get the latest creative news from FooBar about art, design and business.

    What's Hot

    ಕಲಾಂಗಣದಲ್ಲಿ ಮಕ್ಕಳ ಕಥಾನುವಾದ ಕಾರ್ಯಾಗಾರ | ಜೂನ್ 28 ಮತ್ತು 29 

    June 13, 2025

    ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ನಿಧನ

    June 13, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾದಾವಧಾನ ವಾರ್ಷಿಕೋತ್ಸವದಲ್ಲಿ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು
    Yakshagana

    ನಾದಾವಧಾನ ವಾರ್ಷಿಕೋತ್ಸವದಲ್ಲಿ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು

    June 12, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಪ್ಪುಂದ : ನಾದಾವಧಾನ ಪ್ರತಿಷ್ಠಾನ (ರಿ.) ಕುಂದಾಪುರ ಇದರ ವಾರ್ಷಿಕೋತ್ಸವ -2025ರ ಅಂಗವಾಗಿ ನಾಗೂರು ಶ್ರೀ ಗೋಪಾಲಕೃಷ್ಣ ಕಲಾಮಂದಿರದಲ್ಲಿ ದಿನಾಂಕ 07 ಜೂನ್ 2025ರಂದು ಪ್ರತಿಷ್ಠಾನದ ಗುರುಗಳಾದ ಎ.ಪಿ. ಪಾಠಕ್ ಮತ್ತು ಎನ್.ಜಿ. ಹೆಗಡೆ ಮಾರ್ಗದರ್ಶನದಲ್ಲಿ ಯಕ್ಷಗಾನದ ಕುರಿತ ವಿವಿಧ ಕಾರ್ಯಕ್ರಮಗಳು ನಡೆಯಿತು.

    ನಾದಾವಧಾನ ವಿದ್ಯಾರ್ಥಿಗಳಿಂದ ಯಕ್ಷಗಾನದ ಆಯ್ದ ಪ್ರಸಂಗಗಳಿಂದ ಯಕ್ಷಗಾನ ಪದ್ಯಗಳ ಪ್ರಸ್ತುತಿ ನಡೆಯಿತು. ಖ್ಯಾತ ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ ವಾಸುದೇವ ರಂಗಾ ಭಟ್ಟ ಭಾಗವತಿಕೆಯ ಸ್ವರೂಪ ವಿವೇಚನೆ ಕುರಿತು ಮಾತನಾಡಿ, “ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪರಂಪರೆಯನ್ನು ಉಳಿಸಿಕೊಳ್ಳುತ್ತಾ ಯಕ್ಷಗಾನ ಪ್ರದರ್ಶನ, ರಂಗದಲ್ಲಿ ಶ್ರೀಮಂತವಾಗಿ ರಂಗೇರಬೇಕಾದರೆ ಭಾಗವತರ ಹೊಣೆಗಾರಿಕೆ ಮತ್ತು ಸಾಧ್ಯತೆಗಳ ಕುರಿತು ಹಲವು ದೃಷ್ಟಾಂತರಗಳ ಮೂಲಕ ಉದಾಹರಿಸಿ, ಕಲಾವಿದರ ಕಲಿಕೆ ಚೌಕಿಯಲ್ಲಿ ಸಹ ಕಲಾವಿದರೊಂದಿಗೆ ನಡೆಯಬೇಕು” ಎಂದರು.

    ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ರಾಗ ತಾಳ ಹಾಡಿನ ಮೂಲಕ ವಿವಿಧ ಮಟ್ಟುಗಳ ಪರಿಚಯ ಮಾಡಿಸಿದರು. ಉಮೇಶ್ ಶಾನ್‌ಭಾಗ್ ಉದ್ಘಾಟಿಸಿದರು. ಉಭಯ ತಿಟ್ಟುಗಳ ಅಗ್ರಗಣ್ಯ ಭಾಗವತರಿಂದ ಸಮರ್ಥ ಹಿಮ್ಮೇಳದೊಂದಿಗೆ ಯಕ್ಷ ಗಾನವೈಭವ ನಡೆಯಿತು.

    ಸಮಾರೋಪ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಾತನಾಡಿ “ಧರ್ಮ ಸಂಸ್ಕೃತಿಗಳ ಉಳಿವಿಗೆ ಯಕ್ಷಗಾನದ ಕೊಡುಗೆ ಬಹಳ ದೊಡ್ಡದು” ಎಂದರು. ಹಿರಿಯ ಭಾಗವತ ಹೇರಂಜಾಲು ಗೋಪಾಲ ಗಾಣಿಗ ಅವರನ್ನು ಸಮ್ಮಾನಿಸಲಾಯಿತು.

    ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷ ಶೇಖರ ಖಾರ್ವಿ, ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಪಟ್ಲ ಸತೀಶ್ ಶೆಟ್ಟಿ, ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಅಧ್ಯಕ್ಷ ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಡಾ. ಆದರ್ಶ ಹೆಬ್ಬಾರ್, ಹರೀಶ್ ಶೆಟ್ಟಿ ಎರ್ಮಾಳ್, ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು. ಸಂಜೆ ಅಶ್ವಿನಿ ಕೊಂಡದಕುಳಿ ಮತ್ತು ನಾದಾವಧಾನ ವಿದ್ಯಾರ್ಥಿಗಳಿಂದ ‘ಕುಶ ಲವ’ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರೊ. ಪವನ್ ಕಿರಣ್ ಕರೆ ಶುಭಶಂಸನೆ ಗೈದರು. ಮಟ್ನಕಟ್ಟಿ ಎಂ. ಗೋವಿಂದ ಸ್ವಾಗತಿಸಿ, ಡಾ. ಜಗದೀಶ್ ಶೆಟ್ಟಿ ಸಿದ್ದಾಪುರ, ಕೆಪಿ ಪಾಟಕ್ ಕಾರ್ಕಳ, ಅಶೋಕ ಆಚಾರ್ಯ ಸ್ವಾಬ್ರಕಟ್ಟೆ ನಿರೂಪಿಸಿದರು.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಅಂತರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರಿಗೆ ಗೌರವ ಸಮರ್ಪಣೆ
    Next Article ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ವಿ. ಹರಿಣಿ ಇವರ ‘ಭರತನಾಟ್ಯ ರಂಗಪ್ರವೇಶ’ | ಜೂನ್ 14
    roovari

    Add Comment Cancel Reply


    Related Posts

    ಕಲಾಂಗಣದಲ್ಲಿ ಮಕ್ಕಳ ಕಥಾನುವಾದ ಕಾರ್ಯಾಗಾರ | ಜೂನ್ 28 ಮತ್ತು 29 

    June 13, 2025

    ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ನಿಧನ

    June 13, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘Beg Borrow ಅಳಿಯ’ ಹಾಸ್ಯ ನಾಟಕ | ಜೂನ್ 14

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.