ಮಡಿಕೇರಿ: ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿಯ ಮಧುಕೃಪದ ಆವರಣದಲ್ಲಿ ‘ಬಾಲಗೋಕುಲ’ ಮಡಿಕೇರಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ‘ವಸಂತ ಶಿಬಿರ – 2025’ ಹೆಸರಿನಲ್ಲಿ ಉಚಿತ ಬೇಸಿಗೆ ಶಿಬಿರವನ್ನು ದಿನಾಂಕ 31 ಮಾರ್ಚ್ 2025 ರಿಂದ 9 ಏಪ್ರಿಲ್ 2025ರ ವರೆಗೆ ವನ್ನು ಆಯೋಜಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದ ಈ ಶಿಬಿರವು ಮಕ್ಕಳಿಗೆ ಬಹಳ ಉಪಯುಕ್ತವಾಗಿದ್ದು, ಮಕ್ಕಳು ತುಂಬಾ ಉತ್ಸಾಹದಿಂದ ಭಾಗವಹಿಸುವಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು ನೊಂದಣಿಗಾಗಿ ಬಾಲಗೋಕುಲ ಮಡಿಕೇರಿ: 9448541328 ಸಂಪರ್ಕಿಸ ಬಹುದಾಗಿದೆ.