Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ರಂಗ ತರಬೇತಿಯ ಸರಣಿ ಕಾರ್ಯಾಗಾರ | ಮಾರ್ಚ್ 29 ಮತ್ತು 30
    Theatre

    ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ರಂಗ ತರಬೇತಿಯ ಸರಣಿ ಕಾರ್ಯಾಗಾರ | ಮಾರ್ಚ್ 29 ಮತ್ತು 30

    March 15, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಂಗ ಭಾಷೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವ ಕಲಾವಿದರುಗಳಿಗೆ ಹಾಗೂ ರಂಗಾಸಕ್ತರಿಗೆ ಮತ್ತೊಂದು ಹೆಜ್ಜೆ. ಪ್ರೇಕ್ಷಕರು – ವೀಕ್ಷಕರು ಮರೆಯಲಾಗದ ಕಲಾವಿದರಾಗ ಬಯಸುವ ಮನಗಳಿಗೆ, ಒಂದಷ್ಟು ಶಕ್ತಿ – ಬಣ್ಣ ತುಂಬಿ, ಅದ್ಭುತ ಕಲಾವಿದರಾಗಬೇಕೆಂಬ ಆಸೆಯನ್ನು ತನ್ನೊಳಗೆ ತುಂಬಿಕೊಂಡಿರುವ ಆಸಕ್ತರಿಗೆ, ಆ ಯಶಸ್ಸಿನ ದಾರಿಯ ಹುಡುಕಾಟಕ್ಕೆ ಇಂಬು ಕೊಡುವ ಪ್ರಕ್ರಿಯೆ…. ಎರಡು ದಿನಗಳ ವಿವಿಧ ರಂಗ ತರಬೇತಿಯ ಸರಣಿ ಕಾರ್ಯಾಗಾರವು ಉಡುಪಿ ರಂಗಭೂಮಿ (ರಿ.) ವತಿಯಿಂದ ದಿನಾಂಕ 29 ಮತ್ತು 30 ಮಾರ್ಚ್ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.

    ಹೆಸರಾಂತ ರಂಗ ನಿರ್ದೇಶಕ, ಝೀ ಟಿವಿಯ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಮತ್ತು ರಂಗಭೂಮಿಯು ಆಯೋಜಿಸುವ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಮೂರು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ ಶ್ರೀ ಮಂಜುನಾಥ ಎಲ್. ಬಡಿಗೇರ್ ಇವರಿಂದ ಎರಡು ದಿನಗಳ ಅಭಿನಯ ಕೇಂದ್ರಿತ ರಂಗ ತರಬೇತಿ ಶಿಬಿರ. ಎರಡು ದಿನಗಳ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಲು, ಊಟೋಪಚಾರ ಸೇರಿದಂತೆ ನೋಂದಣಿ ಶುಲ್ಕ ₹ 500/-. ಈ ಶಿಬಿರದ ಯಾವುದೇ ಮಾಹಿತಿ ಬೇಕಿದ್ದರೆ ಇವರಲ್ಲಿ ಯಾರನ್ನಾದರಖ ಸಂಪರ್ಕಿಸಿ.
    ಪ್ರದೀಪ್ ಚಂದ್ರ ಕುತ್ಪಾಡಿ – 9448952847
    ಶ್ರೀಪಾದ್ ಹೆಗಡೆ – 9845111449
    ವಿವೇಕಾನಂದ ಎನ್. – 8660179220
    ರವಿರಾಜ ನಾಯಕ್ – 9845345410
    ಡಾ. ವಿಷ್ಣುಮೂರ್ತಿ ಪ್ರಭು – 9108587192
    ಅಮಿತಾಂಜಲಿ ಕಿರಣ್ – 9886452040
    ರೇವತಿ ನಾಡಗೀರ – 8762563517
    ರಾಘವ ಬಿ‌‌ – 8660515781

    ಶಿಬಿರದಲ್ಲಿ ಭಾಗವಹಿಸಲು ಸಂಸ್ಥೆಯ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯರಾದ ಶ್ರೀ ಸೂರ್ಯ ಪ್ರಕಾಶ್ – 7795291485 ಇವರಿಗೆ ₹500/- ಗೂಗಲ್ ಪೇ ಮಾಡಿ ಹಾಗೂ ಅವರಿಗೆ ನಿಮ್ಮ ಹೆಸರು, ವಿಳಾಸ ಮತ್ತು ಗೂಗಲ್ ಪೇ ಮಾಡಿರುವುದರ (ಸ್ಕ್ರೀನ್ ಶಾಟ್) ಮಾಹಿತಿಯನ್ನು ಆದಷ್ಟು ಬೇಗ ನೀಡಿ ನೋಂದಾಯಿಸಿಕೊಳ್ಳಿ. ಗಮನಿಸಿ – ಮೊದಲು ನೋಂದಾಯಿಸಿದವರಿಗೆ ಆದ್ಯತೆ).

    ಶಿಬಿರದ ಸಮಯ : ಬೆಳಿಗ್ಗೆ 9-00 ರಿಂದ ಸಂಜೆ 7-00 ಗಂಟೆ ತನಕ (ಶಿಬಿರದ ನಿರ್ದೇಶಕರು ಅವಶ್ಯಕತೆ ಕಂಡರೆ ನಿಗದಿತ ಸಮಯದಲ್ಲಿ ಬದಲಾವಣೆ ಮಾಡಬಹುದು)
    # ಪ್ರಥಮ ದಿನ ಬಂದಾಗ ನೀವು ಗೂಗಲ್ ಪೇ ಮಾಡಿರು ಮಾಹಿತಿ ಹಾಗೂ ನಿಮ್ಮ ಒಂದು ಪಾಸ್ ಪೋರ್ಟ್ ಸೈಜ್ ಫೋಟೋವನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ನೀಡಿ.
    # ಪ್ರತಿದಿನ ಬೆಳಿಗ್ಗೆ ಗಂಟೆ 8-45ಕ್ಕೆ ಕಡ್ಡಾಯವಾಗಿ ಉಪಸ್ಥಿತರಿರಬೇಕು.
    # ಶಿಬಿರಾರ್ಥಿಗಳಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಲಘ ಉಪಹಾರ ನೀಡಲಾಗುವುದು.
    # ವ್ಯಾಯಾಮ ಹಾಗೂ ಆಂಗಿಕ ಚಲನೆಗೆ ಅನುಕೂಲಕರ ಉಡುಪು ಧರಿಸಿರಿ.
    # ಒಂದು ನೋಟ್ ಬುಕ್ ಹಾಗೂ ಪೆನ್ ನಿಮ್ಮ ಜೊತೆ ಇರಲಿ.
    # ಎರಡೂ ದಿನ ಭಾಗವಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.

    baikady roovari theatre workshop
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತಾಜ್ ಮಹಲಿನ ಟೆಂಡರ್’ | ಮಾರ್ಚ್ 16
    Next Article ಹಾವಂಜೆಯಲ್ಲಿ ‘ಬಾಲ ಲೀಲಾ -2025’ ಚಿಣ್ಣರ ಬೇಸಿಗೆ ಶಿಬಿರ | ಏಪ್ರಿಲ್ 10ರಿಂದ 13
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.