Subscribe to Updates

    Get the latest creative news from FooBar about art, design and business.

    What's Hot

    ಶ್ರೀನಿವಾಸ ವಾಡಪ್ಪಿಯವರ ‘ಮಿಗಿಲಹುದು ಭುವಿಯಬಣ್ಣ’ ಲಲಿತ ಪ್ರಬಂಧ ಲೋಕಾರ್ಪಣೆ

    January 2, 2026

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ಪುರಂದರ ಗಾನ ನರ್ತನ’ | ಜನವರಿ 03

    January 2, 2026

    ಕುವೆಂಪು ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಹಾಗೂ ವಿಚಾರಸಂಕಿರಣ

    January 2, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುವೆಂಪು ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಹಾಗೂ ವಿಚಾರಸಂಕಿರಣ
    Birthday

    ಕುವೆಂಪು ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಹಾಗೂ ವಿಚಾರಸಂಕಿರಣ

    January 2, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಚಿಂತನ ಕೇಂದ್ರ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಗಿಳಿವಿಂಡು ಒಕ್ಕೂಟ ಇದರ ವತಿಯಿಂದ ಕುವೆಂಪು ಜನ್ಮದಿನ ಪ್ರಯುಕ್ತ ವಿಶ್ವಮಾನವ ದಿನಾಚರಣೆ ಹಾಗೂ ವಿಶ್ವಮಾನವತೆ ಮತ್ತು ಪ್ರಜಾಸತ್ತಾತ್ಮಕತೆ ಎಂಬ ವಿಷಯದಲ್ಲಿ ವಿಚಾರಸಂಕಿರಣವು ದಿನಾಂಕ 29 ಡಿಸೆಂಬರ್ 2025ರಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊ. ವಿವೇಕ್ ರೈ ವಿಚಾರ ವೇದಿಕೆಯಲ್ಲಿ ನಡೆಯಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ “ಸಾಹಿತ್ಯ ರಚನೆಯ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುವೆಂಪು ಸ್ವಾತಂತ್ರ್ಯಪೂರ್ವ ಕಾಲದ ಮೌಲ್ಯಗಳು ಮತ್ತು ಸ್ವಾತಂತ್ಯೋತ್ತರ ಭಾರತದ ದುರಂತವನ್ನು ಸೂಕ್ಷ್ಮವಾಗಿ ಗ್ರಹಿಸಿದವರು” ಎಂದು ಹೇಳಿದರು.

    ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅವರು “ಕುವೆಂಪು ಏಕಮಯ ಭಾರತದ ಬದಲು ವೈವಿಧ್ಯಮಯ ಭಾರತದ ಕನಸು ಕಂಡವರು. ಅವರು ಕಂಡ ಭಾರತದಲ್ಲಿ ವಿಜ್ಞಾನದ ಮೋಹವನ್ನು ಮೀರುವ ಗುಣ. ಪ್ರಕೃತಿಯ ಜತೆಗಿನ ಆಧ್ಯಾತ್ಮಿಕ ಅನುಭೂತಿ ಗುಣವಿದೆ. ವಿಜ್ಞಾನ ಬೆಳೆದಂತೆ ಮನುಷ್ಯ ಭ್ರಮನಿರಸನಕ್ಕೊಳಗಾಗುತ್ತಾನೆ. ಬೆರಗನ್ನು ಅನುಭವಿಸುವ ಮನಸನ್ನು ಕಳಚಿಕೊಂಡಿದ್ದಾನೆ. ಪಕೃತಿಯೆದುರು ಮನುಷ್ಯನನ್ನು ನಿಲ್ಲಿಸಿದಾಗ ವಿಜ್ಞಾನ ಒಡ್ಡಿದ ಸವಾಲುಗಳನ್ನು ಎದುರಿಸಬಹುದು. ಇದನ್ನು ಅರಿತಿದ್ದ ಕುವೆಂಪು ಅವರಿಗೆ ಕಾಡು ಜಾತ್ಯತೀತ ಭಾರತದ ರೂಪಕವಾಗಿತ್ತು” ಎಂದರು.

    ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರು ಮಾತನಾಡಿದರು. ಎಸ್.ವಿ.ಪಿ. ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ ನಾಗಪ್ಪ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೆಹರೂ ಚಿಂತನಾ ಕೇಂದ್ರದ ನಿರ್ದೇಶಕ ಪ್ರೊ. ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿ, ಸಹಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ವಂದಿಸಿ, ಉಪನ್ಯಾಸಕ ಡಾ. ಯಶು ಕುಮಾರ್ ನಿರೂಪಿಸಿದರು.

    baikady Birthday Literature roovari
    Share. Facebook Twitter Pinterest LinkedIn Tumblr WhatsApp Email
    Previous Articleವೀರರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ಪುರಸ್ಕಾರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜನವರಿ 15
    Next Article ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ಪುರಂದರ ಗಾನ ನರ್ತನ’ | ಜನವರಿ 03
    roovari

    Add Comment Cancel Reply


    Related Posts

    ಶ್ರೀನಿವಾಸ ವಾಡಪ್ಪಿಯವರ ‘ಮಿಗಿಲಹುದು ಭುವಿಯಬಣ್ಣ’ ಲಲಿತ ಪ್ರಬಂಧ ಲೋಕಾರ್ಪಣೆ

    January 2, 2026

    ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ‘ಪುರಂದರ ಗಾನ ನರ್ತನ’ | ಜನವರಿ 03

    January 2, 2026

    ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ಪುರಸ್ಕಾರಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜನವರಿ 15

    January 2, 2026

    ಏಕದಿನ ಸಾಹಿತ್ಯ ಅಭಿಯಾನ ಕನ್ನಡದ ನಡಿಗೆ ಶಾಲೆಯ ಕಡೆಗೆ ಕಾರ್ಯಕ್ರಮ

    January 2, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.