ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಖ್ಯಾತ ಕವಿ, ಸಾಹಿತಿ ಹೆಚ್. ಎಸ್. ವೆಂಕಟೇಶಮೂರ್ತಿ ಇವರಿಗೆ ನುಡಿ ನಮನ ಹಾಗೂ ಖ್ಯಾತಿ ಗಾಯಕಿ ಸಂಗೀತ ಕಟ್ಟಿ ಇವರಿಂದ ಗಾಯನ ಕಾರ್ಯಕ್ರಮ ದಿನಾಂಕ 15 ಜೂನ್ 2025ರ ಭಾನುವಾರ ಬೆಳಗ್ಗೆ ಘಂಟೆ 10.00 ರಿಂದ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಯಶವಂತಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಧೀಂದ್ರ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಖ್ಯಾತ ಕವಿ ಡಾ. ಬಿ. ಆರ್. ಲಕ್ಷ್ಮಣರಾವ್ ನುಡಿ ನಮನ ಸಲ್ಲಿಸಲಿದ್ದಾರೆ. ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್, ಖ್ಯಾತ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಪ್ರಾಧ್ಯಾಪಕಿ ಹಾಗೂ ಲೇಖಕಿಯಾದ ಡಾ. ವತ್ಸಲ ಮೋಹನ್, ಎಚ್. ಎಸ್. ವಿ. ಕುರಿತು ಮಾತನಾಡಲಿದ್ದಾರೆಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ ಪ್ರಕಾಶಮೂರ್ತಿ ಡಾ. ಜೈರಾಮ್, ಡಾ. ಮಂಜುನಾಥ್, ಡಾ. ವೆಂಕಟಸ್ವಾಮಿ, ಡಾ, ವಿನಯ್ ಪಾಲ್ಗೊಳ್ಳಲಿದ್ದಾರೆ.
ಹೆಚ್. ಎಸ್. ವಿ. ರಚಿಸಿದ ಗೀತೆಗಳ ಗಾಯನವನ್ನ ಖ್ಯಾತ ಅಂತರಾಷ್ಟ್ರೀಯ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಸ್ಥಳಿಯ ಕಲಾವಿದರಾದ ವೀರೇಶ್, ರವಿ ಇಗ್ಗಲೂರು, ಸೇರಿದಂತೆ ಹಲವರು ಗಾಯನ ನಡೆಸಿಕೊಡಲಿದ್ದಾರೆ. ಬಳಿಕ ಖ್ಯಾತ ಸಂಗೀತಗಾರರಾದ ಶ್ರೀಮತಿ ಸಂಗೀತ ಕಟ್ಟಿ ಇವರಿಂದ ಗಾಯನ ನಡೆಯಲಿದೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಹೆಚ್. ಎಸ್. ಸುಧೀಂದ್ರ ಕುಮಾರ್
ತಿಳಿಸಿದ್ದಾರೆ.