ತೆಕ್ಕಟ್ಟೆ: ಪಟ್ಲ ದಶಮ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಬಡಗು ತಿಟ್ಟು ಯುವ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಯಕ್ಷ ನುಡಿಸಿರಿ ಬಳಗಕ್ಕೆ ಸನ್ಮಾನ ಕಾರ್ಯಕ್ರಮ ದಿನಾಂಕ 11 ಜೂನ್ 2025 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಸಮಾರಂಭದಲ್ಲಿ ಯಕ್ಷ ನುಡಿಸಿರಿ ಬಳಗದ ಎಲ್ಲಾ ಕಲಾವಿದರನ್ನು ಗೌರವಿಸಿದ ಯಶಸ್ವೀ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ ಮಾತನಾಡಿ “ಯಕ್ಷ ನುಡಿಸಿರಿ ಬಳಗದ ಸದಸ್ಯರು ನಿರಂತರವಾಗಿ ಯಶಸ್ವೀ ಕಲಾವೃಂದದ ವೇದಿಕೆಯಲ್ಲಿ ಅಭ್ಯಾಸ ನಡೆಸಿ ಬಹುಮಾನವನ್ನು ಪಡೆದಿರುವುದು ನಮ್ಮ ಸಂಸ್ಥೆಗೆ ಗೌರವದ ಸಂಗತಿ. ನಿರಂತರ ಕಲಾ ಮನಸ್ಸಿನಿಂದ ತೊಡಗಿಕೊಂಡು ಅನೇಕ ಕಲಾವಿದರನ್ನು ರಂಗದಲ್ಲಿ ವೈಭವೀಕರಿಸಿದ ಯಕ್ಷ ನುಡಿಸಿರಿ ಸಂಸ್ಥೆ ಪಟ್ಲ ದಶಮ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದ್ದ ಬಡಗು ತಿಟ್ಟು ಯುವ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದದ್ದು ನಮಗೂ ಸಂಭ್ರಮ” ಎಂದರು.
ಸಂಸ್ಥೆಯ ಮುಖ್ಯಸ್ಥ ಡಾ. ಜಗದೀಶ್ ಶೆಟ್ಟಿ ಮಾತನಾಡಿ “ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಂಸ್ಥೆಗೆ ಎಲ್ಲಾ ಕಲಾವಿದರಿಗೂ ಬರುವುದು ಅನುಕೂಲವಾಯಿತು. ಕಲೆಯನ್ನೇ ತಪಸ್ಸಿನಂತೆ ಆರಾಧಿಸುತ್ತಿರುವ ಯಶಸ್ವೀ ಕಲಾವೃಂದ ಎಲ್ಲಾ ಕಲಾ ಮನಸ್ಸುಗಳಿಗೆ ಸಹಕಾರಿಯಾಗಿ ನಿಂತಿರುವುದು ಕಲಾವಿದರಿಗೆ ಹೆಮ್ಮೆಯ ವಿಷಯ” ಎಂದರು.
ಭಾಗವತ ಸುರೇಶ್ ಶೆಟ್ಟಿ ಶಂಕರನಾರಾಯಣ, ನಿರ್ದೇಶಕ ನರಸಿಂಹ ತುಂಗ, ಯಲ್ಲಾಪುರ ರಾಘವೇಂದ್ರ ಹೆಗಡೆ, ಮತ್ತಿತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಕವನ | ಮುಂಗಾರು ಮಳೆ