Subscribe to Updates

    Get the latest creative news from FooBar about art, design and business.

    What's Hot

    ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ಜಿಲ್ಲಾ ಮಟ್ಟದ ಯುವ ಜನೋತ್ಸವ’

    October 17, 2025

    ಸಂಗೀತ ವಿಮರ್ಶೆ | ರಸಿಕರನ್ನು ಸೆರೆಹಿಡಿದ ಮನಮೋಹನಕೃಷ್ಣರ ಗಾಯನ

    October 17, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಸಂಗೀತ್ ಸಮ್ಮೇಳನ್’ | ಅಕ್ಟೋಬರ್ 19

    October 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಕ್ಷಗಾನ ಕಲಾಕೇಂದ್ರದ ಐವತ್ತರ ಸಂಭ್ರಮ ಪ್ರಯುಕ್ತ ‘ಯಕ್ಷ ಸಪ್ತೋತ್ಸವ 2024’ | ಅಕ್ಟೋಬರ್ 21ರಿಂದ 27
    Yakshagana

    ಯಕ್ಷಗಾನ ಕಲಾಕೇಂದ್ರದ ಐವತ್ತರ ಸಂಭ್ರಮ ಪ್ರಯುಕ್ತ ‘ಯಕ್ಷ ಸಪ್ತೋತ್ಸವ 2024’ | ಅಕ್ಟೋಬರ್ 21ರಿಂದ 27

    October 20, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಐವತ್ತರ ಸಂಭ್ರಮ ಪ್ರಯುಕ್ತ ‘ಯಕ್ಷ ಸಪ್ತೋತ್ಸವ 2024’ವನ್ನು ದಿನಾಂಕ 21 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.

    ದಿನಾಂಕ 21 ಅಕ್ಟೋಬರ್ 2024ರಂದು ವಿದ್ವಾನ್ ಅಶೋಕ ಆಚಾರ್ ಇವರಿಂದ ಭಜನೆ ಹಾಡುಗಳ ಬಳಿಕ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀ ಕೃಷ್ಣ ಜನ್ಮ’ ಎಂಬ ಪ್ರಸಂಗದ ಯಕ್ಷಗಾನ ನಡೆಯಲಿದೆ.

    ದಿನಾಂಕ 22 ಅಕ್ಟೋಬರ್ 2024ರಂದು ಶ್ರೀ ಅಚ್ಚುತ ಪೂಜಾರಿ ಮತ್ತು ಶ್ರೀ ಚಂದ್ರಕಾಂತ ನಾಯರಿ ಇವರಿಂದ ಸುಗಮ ಸಂಗೀತ ಬಳಿಕ ‘ಕಾಲಯವನ ಸಂಹಾರ’ ಯಕ್ಷಗಾನ, ದಿನಾಂಕ 23 ಅಕ್ಟೋಬರ್ 2024ರಂದು ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಇವರ ನೆನಪಿನಲ್ಲಿ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಹೂವಿನ ಕೋಲು ಪ್ರದರ್ಶನ, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ ಶ್ರೀ ಹೆರಂಜಾಲು ಗೋಪಾಲ ಗಾಣಿಗ ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಬಳಿಕ ‘ಪ್ರದ್ಯುಮ್ನ ವಿಜಯ’ ಯಕ್ಷಗಾನ, ದಿನಾಂಕ 24 ಅಕ್ಟೋಬರ್ 2024ರಂದು ಭಾಗವತ ಕಾಳಿಂಗ ನಾವಡ ನೆನಪಿನಲ್ಲಿ ವಿಪ್ರ ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ನೃತ್ಯ ವೈವಿಧ್ಯ ಹಾಗೂ ಯಕ್ಷಗಾನ ಪ್ರಸಾದನ ಕಲಾವಿದರಾದ ಶ್ರೀ ನರಸಿಂಹ ಮಡಿವಾಳ ಇವರಿಗೆ ‘ನಮ್ಮ ಕಾಳಿಂಗ ಪ್ರಶಸ್ತಿ’ ಪ್ರದಾನವಾಗಲಿದೆ. ಬಳಿಕ ‘ಶ್ಯಮಂತಕ ವಿಲಾಸ’ ಯಕ್ಷಗಾನ, ದಿನಾಂಕ 25 ಅಕ್ಟೋಬರ್ 2024ರಂದು ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಇವರಿಂದ ‘ಗಾನ ವೈಭವ’ ಹಾಗೂ ‘ಉಷಾ ಪರಿಣಯ’ ಯಕ್ಷಗಾನ, ದಿನಾಂಕ 26 ಅಕ್ಟೋಬರ್ 2024ರಂದು ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ಸಾಂಸ್ಕೃತಿಕ ವೈಭವ ಹಾಗೂ ‘ಗಾಂಧಾರಿ ಶಾಪ’ ಯಕ್ಷಗಾನ ಬಯಲಾಟ ನಡೆಯಲಿದೆ.

    ದಿನಾಂಕ 27 ಅಕ್ಟೋಬರ್ 2024ರಂದು ಕಲಾಕೇಂದ್ರದ ಸಂಸ್ಥಾಪಕರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾದ್ಯಾಯರಾದ ಐರೋಡಿ ಸದಾನಂದ ಹೆಬ್ಬಾರ್ ನೆನಪಿನಲ್ಲಿ ಶ್ರೀ ನಟರಾಜ ನೃತ್ಯ ನಿಕೇತನ ಚಿತ್ರಪಾಡಿ ಸಾಲಿಗ್ರಾಮ ವಿದುಷಿ ಭಾಗೀರತಿ ಎಂ. ರಾವ್ ಇವರ ಶಿಷ್ಯರಿಂದ ‘ನೃತ್ಯ ಸೌರಭ’ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ಬಹುಮುಖಿ ಪ್ರತಿಭೆಯ ಮುಖ್ಯೋಪಾದ್ಯಾಯರಾದ ಶ್ರೀ ಗುಂಡ್ಮಿ ರಾಮಚಂದ್ರ ಐತಾಳ ಇವರಿಂದ ‘ಸದಾನಂದ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಬಳಿಕ ‘ಕೃಷ್ಣ ಪರಂದಾಮ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಬಂಟ್ವಾಳದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ‘ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮ
    Next Article ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ  
    roovari

    Add Comment Cancel Reply


    Related Posts

    ಖ್ಯಾತ ತೆಂಕುತಿಟ್ಟು ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ

    October 16, 2025

    ಶ್ರೀ ಬಟ್ಟೆ ವಿನಾಯಕ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ | ಅಕ್ಟೋಬರ್ 19

    October 15, 2025

    ಕೋಟದಲ್ಲಿ ಸುವರ್ಣ ಪರ್ವದ ಸಮಾರೋಪ ಸಂಭ್ರಮ | ಅಕ್ಟೋಬರ್ 19

    October 15, 2025

    ಸಾಗರದ ಕುಡುಪಲಿ ಸ್ವರಲಾಯದಲ್ಲಿ ‘ಯಕ್ಷಗಾನ ಅಷ್ಟಾವಧಾನ’ | ಅಕ್ಟೋಬರ್ 18

    October 14, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.