Subscribe to Updates

    Get the latest creative news from FooBar about art, design and business.

    What's Hot

    ಡಾ. ಸುಷ್ಮಾ ಎಸ್.ವಿ.ಯವರಿಗೆ ‘ಗೌರಿ ಸುಂದರ್’ ವಾರ್ಷಿಕ ಪ್ರಶಸ್ತಿ ಪ್ರದಾನ

    May 12, 2025

    ‘ಬಾಲ ಸಾಹಿತ್ಯ ಚಿಗುರು ಪುರಸ್ಕಾರ’ಕ್ಕಾಗಿ ‘ನಕ್ಷತ್ರ ಪಟಲ’ ಕೃತಿ ಆಯ್ಕೆ

    May 12, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರಿಗೆ ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿ ಪ್ರಧಾನ

    May 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಅಲೆವೂರಾಯ ಪ್ರತಿಷ್ಠಾನದಿಂದ ‘ಯಕ್ಷ ತ್ರಿವೇಣಿ’
    Yakshagana

    ಅಲೆವೂರಾಯ ಪ್ರತಿಷ್ಠಾನದಿಂದ ‘ಯಕ್ಷ ತ್ರಿವೇಣಿ’

    January 30, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದಿ. ಲಕ್ಮೀನಾರಾಯಣ ಅಲೆವೂರಾಯರು ವರ್ಕಾಡಿಯಂತಹಾ ಕುಗ್ರಾಮದಲ್ಲೂ ಯಕ್ಷಗಾನದ ಕಂಪನ್ನು ಪಸರಿಸಿದ ಎಲೆಮರೆಯ ಕಾಯಿಯಂತೆ ಇದ್ದು ಇತಿಹಾಸ ಸೇರಿದವರು. ಹಿಂದಿ ಭಾಷಾ ಪಂಡಿತರಾಗಿದ್ದು ಕನ್ನಡದ ಮೇಲೆ ಪ್ರಭುತ್ವವನ್ನು ಹೊಂದಿದ್ದು, ಅನೇಕ ಕಲಾವಿದರನ್ನು ಯಕ್ಷರಂಗಕ್ಕೆ ನೀಡಿದ್ದಾರೆ. ತಮ್ಮ ಪ್ರಬುದ್ಧ ಜಾಣ್ಮೆಯಿಂದ ಯಕ್ಷರಂಗವನ್ನು ಆಳಿದವರು. ಅವರು ಸೇರಿ ಸ್ಥಾಪಿಸಿದ ಕಾವೀಃ ಸುಬ್ರಹ್ಮಣ್ಯೇಶ್ವರ ಯಕ್ಷ ಮಂಡಳಿಗೆಗೀಗ 51 ವರ್ಷ. ಉತ್ತಮ, ಸ್ಫುಟ ಬರವಣಿಗೆಯ ಮೂಲಕ ಅನೇಕ ಹಸ್ತಪ್ರತಿಗಳನ್ನು ತಾಳೆಗರಿ ಓಲೆಯಲ್ಲಿದ್ದುದ್ದನ್ನು ಬರೆದು ಯಕ್ಷ ಕವಿ ಮತ್ತು ಯಕ್ಷ ನಿರ್ದೇಶಕರಾಗಿ ಹಲವು ಹವ್ಯಾಸಿ ಕಲಾವಿದರ ಗುರುವೂ ಆಗಿದ್ದಾರೆ. ಅವರ ಹೆಸರಿನಲ್ಲಿ ವರ್ಕಾಡಿ ರವಿ ಅಲೆವೂರಾಯ ಹಾಗೂ ಮಧುಸೂದನ ಅಲೆವೂರಾಯರು ‘ಅಲೆವೂರಾಯರ ಪ್ರತಿಷ್ಠಾನ’ವನ್ನು ಸ್ಥಾಪಿಸಿ ಇದೀಗ 7ನೇ ವರ್ಷಾಚರಣೆಯನ್ನು ದಿನಾಂಕ 01-02-2024ರಿಂದ 03-02-2024ರವರೆಗೆ ಶ್ರೀಕ್ಷೇತ್ರ ಶರವಿನಲ್ಲಿ ಮೂರು ಬಯಲಾಟ ಹಾಗೂ ಸನ್ಮಾನಗಳನ್ನು ನಡೆಸಲಿದ್ದಾರೆ.

    ಶ್ರೀಕ್ಷೇತ್ರ ಶರವಿನ ಶಿಲೆಶಿಲೆ ಮೊಕ್ತೇಸರರಾದ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಹಾಗೂ ಡಾ. ಸುದೇಶ್ ಶಾಸ್ತ್ರಿಗಳು ದೀಪ ಬೆಳಗಿಸಿ ಉದ್ಘಾಟಿಸಲಿದ್ದು, ಪ್ರೊ. ಎಂ.ಬಿ. ಪುರಾಣಿಕ್ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ‘ವೀರ ಕುಶ-ಲವ’, ‘ಶ್ರೀ ಮಾತೇ ಭದ್ರಕಾಳಿ’ ಮತ್ತು ‘ತುಳನಾಡ ಬಲಿಯೇಂದ್ರೆ’ ಎಂಬ ಪೌರಾಣಿಕ ಪ್ರಸಂಗಗಳು ಬಯಲಾಟ ರೂಪದಲ್ಲಿ ಪ್ರದರ್ಶನಗೊಳ್ಳಲಿವೆ.
    ಡಾ. ಹರಿಕೃಷ್ಣ ಪುನರೂರು, ಸುಧಾಕರ ರಾವ್ ಪೇಜಾವರ, ವಿಜಯಲಕ್ಷ್ಮೀ ಎಲ್.ಎನ್., ಸೌಮ್ಯಾ ಪುರುಷೋತ್ತಮ್, ರವೀಂದ್ರ ಪೂಜಾರಿ, ಕು. ಅನ್ವಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಬೊಳುವಾರಿನಲ್ಲಿ ತಾಳಮದ್ದಳೆ
    Next Article ಈ ಹೊತ್ತಿಗೆಯ ‘ಕಥಾ ಪ್ರಶಸ್ತಿ’ ಹಾಗೂ ‘ಕಾವ್ಯ ಪ್ರಶಸ್ತಿ’ ಪ್ರಕಟ
    roovari

    Add Comment Cancel Reply


    Related Posts

    ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ತಾಳಮದ್ದಳೆ

    May 12, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.