ಕಲ್ಲಡ್ಕ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಯಕ್ಷಧ್ರುವ-ಯಕ್ಷಶಿಕ್ಷಣ ‘ಯಕ್ಷಗಾನ ಶಿಕ್ಷಣ ಅಭಿಯಾನ’ವನ್ನು ದಿನಾಂಕ 24 ಜೂನ್ 2025ನೇ ಮಂಗಳವಾರದಂದು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಅತಿಥಿ ಅಭ್ಯಾಗತರಿಂದ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಲಾಯಿತು. ಭುವಿ ದೇವರ ಸ್ತುತಿಯನ್ನು ಹಾಡಿದಳು.
ಈ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ್ ಮಾದವ ಶ್ರೀಮಾನ್ ಇವರ ಅಧ್ಯಕ್ಷೀಯ ನುಡಿಗಳಲ್ಲಿ “ಯಕ್ಷಗಾನವು ಶಿಕ್ಷಣದ ಜೊತೆ ಇರುವಂತಹ ಒಂದು ಕಲೆ. ಇದರಿಂದ ಮನಸ್ಸಿನ ಭಾವನೆಯು ಹತೋಟಿಯಲ್ಲಿರುತ್ತದೆ” ಎಂದು ಹೇಳಿದರು. ವೇದಿಕೆಯಲ್ಲಿ ಇನ್ನೋರ್ವ ಅತಿಥಿಯಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ವಿಟ್ಲ ಘಟಕದ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರು “ಯಕ್ಷಗಾನವು ಒಂದು ಶಿಕ್ಷಣ. ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಶುಭ ಹಾರೈಸಿದರು.
ಅತಿಥಿಯಾದ ಭಾಗವಹಿಸಿದ ನಿವೃತ್ತ ಉಪನ್ಯಾಸಕರು ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಯುತ ಪಿ. ಪೂವಪ್ಪ ಶೆಟ್ಟಿ ಇವರ ಹಿತನುಡಿಗಳಲ್ಲಿ ಯಕ್ಷಗಾನದಿಂದ ಮಾನಸಿಕ ಸಂತೋಷ ಸಿಗುವುದು ಹಾಗೂ ಅಳಿವಿನಂಚಿನಲ್ಲಿರುವ ಕಲೆಯನ್ನು ಪಟ್ಲ ಪೌಂಡೇಶನ್ ಸಂಸ್ಥಾಪಕರಾದ ಸತೀಶ್ ಪಟ್ಲರವರು ಕಲೆಯ ಅಭಿಮಾನ ಹಾಗೂ ಛಲದಿಂದ ಯಕ್ಷಗಾನಕ್ಕೆ ಹೇಗೆ ಶ್ರಮಿಸಿದ್ದಾರೆ ಎಂಬುವುದರ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಯಕ್ಷಗಾನ ಶಿಕ್ಷಕರಾದ ಶ್ರೀಯುತ ಅಮ್ಮುಂಜೆ ಮೋಹನ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೊದಲ ಹೆಜ್ಜೆಯ ತರಬೇತಿಯನ್ನು ಕೊಟ್ಟರು. ವೇದಿಕೆಯಲ್ಲಿ ಭಾಸ್ಕರ್ ಶೆಟ್ಟಿ (ವಿಟ್ಲ ಘಟಕದ ಸಹಸಂಚಾಲಕರು) ಹಾಗೂ ಶ್ರೀರಾಮ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಪೌಂಡೇಶನ್ (ರಿ.) ಮಂಗಳೂರು ಇದರ ವತಿಯಿಂದ ‘ಯಕ್ಷಧ್ರುವ ಯಕ್ಷ ಶಿಕ್ಷಣ’ ಪುಸ್ತಕವನ್ನು ಶ್ರೀ ರಾಮ ಪ್ರೌಢ ಶಾಲೆಯ ವಾಚನಾಲಯಕ್ಕೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ನಿರೂಪಿಸಿ, ಗೋಪಾಲ್ ಶ್ರೀಮಾನ್ ಸ್ವಾಗತಿಸಿ, ಸಹ ಶಿಕ್ಷಕಿ ಸವಿತಾ ವಂದಿಸಿ, ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.