ಸಿರಿಬಾಗಿಲು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನ, ಕಾಸರಗೋಡು ಇವರು ಆಯೋಜಿಸುವ ವಿಶೇಷವಾದ ಯಕ್ಷಗಾನ ಪ್ರಸಂಗ ರಚನಾ ಶಿಬಿರವು ದಿನಾಂಕ 06 ಜುಲೈ 2025ನೇ ಆದಿತ್ಯವಾರದಂದು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಉಚಿತವಾಗಿ ನಡೆಯಲಿದೆ.
ಯುವ ಪ್ರಸಂಗ ಕವಿಗಳು ಛoದೋಬದ್ಧವಾಗಿ ಯಕ್ಷಗಾನ ಪದಗಳ ರಚನೆ, ಕಾಲಗಳ ಗಣತಿಗೆ ಅನುಗುಣವಾಗಿ ಯಾವ ಪದಗಳನ್ನು ರಚಿಸಬೇಕು, ಯಾವ ಪಾತ್ರಗಳಿಗೆ ಯಾವ ರಚನೆಗಳು ಸರಿಹೊಂದುತ್ತವೆ, ನವ ರಸಗಳಲ್ಲಿ ಯಾವ್ಯಾವ ರಸಗಳಿಗೆ ಯಾವ್ಯಾವ ರಾಗ, ತಾಳಗಳ ಬಳಕೆ ಮಾಡಬೇಕು, ಕಥಾ ಸನ್ನಿವೇಶಗಳನ್ನು ಹೇಗೆ ಹೆಣೆಯಬೇಕು… ಇತ್ಯಾದಿಗಳ ಕುರಿತು ಮಾರ್ಗದರ್ಶನವನ್ನು ಈ ಶಿಬಿರದಲ್ಲಿ ಪಡೆಯಬಹುದು.
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷ ಕವಿಗಳಾದ ಶ್ರೀ ಶ್ರೀಧರ ಡಿ. ಎಸ್. ಕಿನ್ನಿಗೋಳಿ ಹಾಗೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮೈಸೂರು ಇವರ ಮಾರ್ಗದರ್ಶನದಲ್ಲಿ ಈ ಶಿಬಿರ ನಡೆಯಲಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪವಾದ ಇದರ ಪ್ರಯೋಜನವನ್ನು ಆಸಕ್ತರೆಲ್ಲಾ ಪಡೆದುಕೊಳ್ಳಬೇಕೆಂದು ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ತಿಳಿಸಿದ್ದಾರೆ.
ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9448344380.