ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ಆಯೋಜಿಸುವ ಸಂಸ್ಕೃತಿ ಸಮಾರಂಭದ ಯಕ್ಷವರ್ಷ ಕಾರ್ಯಕ್ರಮದಡಿಯಲ್ಲಿ ‘ಲಂಕಾ ದಹನ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 21 ಜೂನ್ 2025ರಂದು ಸಂಜೆ 6-00 ಗಂಟೆಗೆ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಸರ್ವಶ್ರೀಗಳಾದ ಚಂದ್ರಕಾಂತ ರಾವ್ ಮೂಡಬೆಳ್ಳೆ, ಕೆ.ಜೆ. ಸುದೀಂದ್ರ, ವಾಗ್ವಿಲಾಸ ಭಟ್, ಕೊಂಡದಕುಳಿ ರಾಮಚಂದ್ರ ಹೆಗಡೆ, ಪ್ರಸನ್ನ ಶೆಟ್ಟಿಗಾರ್, ಹೆನ್ನಾಬೈಲ್ ಸಂಜೀವ ಶೆಟ್ಟಿ, ಹಾಲಾಡಿ ಸತೀಶ, ನರಸಿಂಹ ತುಂಗ, ನಿತ್ಯಾನಂದ ಶೆಟ್ಟಿಗಾರ್, ಪ್ರಶಾಂತ ಮಯ್ಯ ದಾರಿಮಕ್ಕಿ, ವಿನಯ ಕುಮಾರ ಹಟ್ಟಿಯಂಗಡಿ, ಅನುಪ ಉರಾಳ ಇವರುಗಳು ಸಹಕರಿಸಲಿದ್ದಾರೆ.