ಪುತ್ತೂರು : ಗೆಜ್ಜೆಗಿರಿಯ ಶ್ರೀ ಆದಿ ಧೂಮಾವತಿ ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇದರ ವತಿಯಿಂದ ‘ಶ್ರೀ ದೇವಿ ಮಹಾತ್ಮೆ’ ಹಾಗೂ ‘ಕೋಟಿ ಚೆನ್ನಯ’ ಪ್ರಸಂಗವನ್ನು ಸಮರ್ಥವಾಗಿ ಪ್ರದರ್ಶಿಸಬಲ್ಲ ಸಮರ್ಥ್ಯದ ಮಾನದಂಡದಲ್ಲಿ ಕಟ್ಟಲ್ಪಟ್ಟ ನಮ್ಮ ಅಭಿಮಾನದ ಶ್ರೀ ಗೆಜ್ಜೆಗಿರಿ ಮೇಳವು ಮುಂದಿನ 2025-26ನೇ ಸಾಲಿನ ತಿರುಗಾಟದಲ್ಲಿ ಸೇವಾರ್ಥಿಗಳ ಇಚ್ಛಾನುಸಾರ, ಆಯ್ಕೆಯ ಯಾವುದೇ ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಂಗಗಳನ್ನು ಕನ್ನಡ ಅಥವಾ ತುಳು ಭಾಷೆಗಳಲ್ಲಿ ಸಮರ್ಥವಾಗಿ ಪ್ರದರ್ಶನ ನೀಡಲಿದೆ. ನಮ್ಮ ಮೇಳದಲ್ಲಿ ಪ್ರದರ್ಶನಗೊಳ್ಳಲಿರುವ ನೂತನ ಪ್ರಸಂಗಗಳ ವಿವರ ಅತೀ ಶೀಘ್ರದಲ್ಲಿ ಪ್ರಕಟಿಸುವವರಿದ್ದು, ಯಕ್ಷಗಾನಭಿಮಾನಿಗಳಾದ ತಮ್ಮೆಲ್ಲರ ಸಂಪೂರ್ಣ ಸಹಕಾರವನ್ನು ಬಯಸುತ್ತೇವೆ.