ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಇದರ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನದ 8ನೇ ವಾರ್ಷಿಕೋತ್ಸವದ ಪ್ರಯುಕ್ತ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಹಾಗೂ ಅಷ್ಟಾವಧಾನ ಕಾರ್ಯಕ್ರಮವನ್ನು ದಿನಾಂಕ 15 ಜೂನ್ 2025ರಿಂದ 21 ಜೂನ್ 2025ರವರೆಗೆ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 15 ಜೂನ್ 2025ರಂದು ಅಪರಾಹ್ನ 2-30 ಗಂಟೆಗೆ ಬಾಳದ ಅಷ್ಟಾವಧಾನಿ ಡಾ. ರಾಮಕೃಷ್ಣ ಪೆಜತ್ತಾಯ ಇವರಿಂದ ‘ಕನ್ನಡ ಸಂಸ್ಕೃತ ಅಷ್ಟಾವಧಾನ’ ಮತ್ತು ರಾತ್ರಿ 8-00 ಗಂಟೆಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಿಂದ ‘ತಾಮ್ರಧ್ವಜ ಕಾಳಗ’, ದಿನಾಂಕ 16 ಜೂನ್ 2025ರಂದು ರಾತ್ರಿ 7-00 ಗಂಟೆಗೆ ಯು.ಎಸ್.ಎ.ಯ ಕುಮಾರಿ ಸಿದ್ದಿ ಜಯದೇವ್ ತಂತ್ರಿ ಇವರಿಂದ ಭರತನಾಟ್ಯ ಕಾರ್ಯಕ್ರಮ ಮತ್ತು 8-00 ಗಂಟೆಗೆ ‘ಕರ್ಣ ಪರ್ವ’, ದಿನಾಂಕ 17 ಜೂನ್ 2025ರಂದು ‘ಗದಾ ಪರ್ವ’, ದಿನಾಂಕ 18 ಜೂನ್ 2025ರಂದು ‘ಮನ್ಮಥೋಪಖ್ಯಾನ’, ದಿನಾಂಕ 19 ಜೂನ್ 2025ರಂದು ‘ಭಾರ್ಗವ ವಿಜಯ’, ದಿನಾಂಕ 20 ಜೂನ್ 2025ರಂದು ‘ಸುದರ್ಶನ ಗರ್ವಭಂಗ’, ದಿನಾಂಕ 21 ಜೂನ್ 2025ರಂದು ‘ ಗಿರಿಜಾ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.