Subscribe to Updates

    Get the latest creative news from FooBar about art, design and business.

    What's Hot

    ಉಡುಪಿಯ ರವೀಂದ್ರ ಮಂಟಪದಲ್ಲಿ ‘ಸಾಮರಸ್ಯ ಪ್ರಶಸ್ತಿ ಪುರಸ್ಕಾರ’ ಪ್ರದಾನ | ಮೇ 24

    May 23, 2025

    ವಿಶೇಷ ಲೇಖನ | ಪ್ರಸಿದ್ಧ ಬರಹಗಾರ್ತಿ ಹಾಗೂ ಸಂಗೀತ ತಜ್ಞೆ ದೇವಕಿ ಮೂರ್ತಿ

    May 22, 2025

    “ಭಜನೆಯಿಂದ ಮನಶಾಂತಿ” – ಪ್ರಭಾಕರ್ ಜೀ

    May 22, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆಯ ಹಯಗ್ರೀವದಲ್ಲಿ ‘ಯಕ್ಷತಂತ್ರ ನೃತ್ಯ ಜ್ಞಾನ’ ಕಾರ್ಯಕ್ರಮ
    Kannada

    ತೆಕ್ಕಟ್ಟೆಯ ಹಯಗ್ರೀವದಲ್ಲಿ ‘ಯಕ್ಷತಂತ್ರ ನೃತ್ಯ ಜ್ಞಾನ’ ಕಾರ್ಯಕ್ರಮ

    March 3, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ಯಶಸ್ವೀ ಕಲಾವೃಂದ ರಿ. ಕೊಮೆ ತಕ್ಕಟ್ಟೆ ಆಶ್ರಯದಲ್ಲಿ ಯಕ್ಷದೇಗುಲ (ರಿ.) ಬೆಂಗಳೂರು ಹಾಗೂ ಸ್ಕ್ಯಾಚ್ ಸಂಸ್ಥೆಯ ಸಹಯೋಗದಲ್ಲಿ ‘ಯಕ್ಷತಂತ್ರ ನೃತ್ಯ ಜ್ಞಾನ’ ಎನ್ನುವ ಕಾರ್ಯಕ್ರಮ ದಿನಾಂಕ 01 ಮಾರ್ಚ್ 2025 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನಾಡಿ “ಅಧುನಿಕ ತಂತ್ರಜ್ಞಾನ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡ ಹಾಗೆಯೇ ಕಲೆಯಲ್ಲಿಯೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಕಾಲಕ್ಕಿದೆ. ಬದಲಾಗುತ್ತಿರುವಂತಹ ಈ ಕಾಲಘಟ್ಟದಲ್ಲಿ ಅನೇಕ ತಂತ್ರಜ್ಞಾನಗಳ ಜೊತೆ ಕಲೆ ಬೆಳೆಯಬೇಕಾಗಿದೆ, ಉಳಿಯಬೇಕಾಗಿದೆ. ಬಯಲಿನಲ್ಲೇ ಯಕ್ಷಗಾನ ಕಲಿಯುವಂತಹ ಕಾಲಘಟ್ಟದಿಂದ ಗುರುಗಳ ಮುಖೇನ ಅಭ್ಯಾಸ ಮಾಡುವಂತಹ ಸ್ಥಿತಿಗೆ ಒಳಗಾದಂತಹ ಸಂದರ್ಭದಲ್ಲಿ ಇದೀಗ ಸ್ಕ್ಯಾಚ್ ಸಂಸ್ಥೆಗಳ ಮೂಲಕ ತಂತ್ರಜ್ಞಾನವನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ. ಯಕ್ಷದೇಗುಲದಂತಹ ಪ್ರಸಿದ್ಧ ಸಂಸ್ಥೆಯು ಸ್ಕ್ಯಾಚ್ ಸಂಸ್ಥೆಯನ್ನು ಪರಿಚಯಿಸುತ್ತಾ ಯಶಸ್ವೀ ಕಲಾವೃಂದದ ಕಲಾವಿದರುಗಳಿಗೆ ಗುರುವಿಲ್ಲದೇ ಹೇಗೆ ಕಲಿಕೆ ಸಾಧ್ಯ ಎನ್ನುವುದನ್ನು ತೋರಿಸುವ ಪ್ರಿಯಾಂಕ ಕೆ. ಮೋಹನ್ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.” ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು, ಪ್ರಿಯಾಂಕ ಕೆ. ಮೋಹನ್, ಜ್ಯೋತಿ ಕೆದಲಾಯ, ಸುಜಾತ, ಪೂರ್ಣಿಮ, ವನಿತಾ ಉಪಾಧ್ಯ, ಶಾರದ ವಿ. ಹೊಳ್ಳ ಇನ್ನಿತರರು ಉಪಸ್ಥಿತರಿದ್ದರು.

    kannada yakshagana
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಡಾ. ನಾ. ಮೊಗಸಾಲೆಯವರ ‘ಕೊಪ್ಪರಿಗೆ ಮನೆ’
    Next Article ವಿಜಯಪುರದಲ್ಲಿ ‘ಭರತನ ಬಂಧುಪ್ರೇಮ’ ಗಮಕ-ವಾಚನ-ವ್ಯಾಖ್ಯಾನ | ಮಾರ್ಚ್ 08
    roovari

    Add Comment Cancel Reply


    Related Posts

    ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಇವರಿಗೆ ಗೃಹ ಸನ್ಮಾನ, ಯಕ್ಷ ಸಹಾಯನಿಧಿ ಮತ್ತು ಪ್ರಶಸ್ತಿ ಪ್ರದಾನ

    May 22, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025

    ರವೀಂದ್ರ ಕಲಾಕ್ಷೇತ್ರದಲ್ಲಿ ದಿಗ್ಗಜ ಕಲಾವಿದರಿಂದ ‘ತಾಳಮದ್ದಳೆ’ | ಮೇ 25

    May 21, 2025

    ಶ್ರೀ ವಿದ್ಯಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮಾಸಿಕ ಕೂಟ

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.