Subscribe to Updates

    Get the latest creative news from FooBar about art, design and business.

    What's Hot

    ತೆಕ್ಕಟ್ಟೆಯಲ್ಲಿ ಯಶಸ್ವಿ ಪ್ರದರ್ಶನಕಂಡ “ಸೂರ್ಯ ಚಂದ್ರ” ಮಕ್ಕಳ ನಾಟಕ

    June 6, 2025

    ಬೆಂಗಳೂರಿನ ಬಸವನಗುಡಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ’ | ಜೂನ್ 07

    June 6, 2025

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ ಗಾಯನ ಸಂಗೀತ ಕಾರ್ಯಾಗಾರ | ಜೂನ್ 14 ಮತ್ತು 15

    June 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿವಿ ಯಕ್ಷಗಾನ ಕೇಂದ್ರದಿಂದ ಕುರಿಯ ಮನೆಯಲ್ಲಿ ‘ಯಕ್ಷಾಯಣ’ ದಾಖಲೀಕರಣ‌ ಕಾರ್ಯಕ್ರಮ
    Yakshagana

    ವಿವಿ ಯಕ್ಷಗಾನ ಕೇಂದ್ರದಿಂದ ಕುರಿಯ ಮನೆಯಲ್ಲಿ ‘ಯಕ್ಷಾಯಣ’ ದಾಖಲೀಕರಣ‌ ಕಾರ್ಯಕ್ರಮ

    January 19, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕುರಿಯ ಮನೆಯಲ್ಲಿ ದಿನಾಂಕ 10-01-2024ರಂದು ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ-ದಾಖಲೀಕರಣ’ ಸರಣಿಯ ಎರಡನೇ ಕಾರ್ಯಕ್ರಮವು ನಡೆಯಿತು.

    ಈ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅವರು ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡರು. “ಹಲವು ದಶಕಗಳ ಹಿಂದೆಯೇ ಅಂದರೆ‌ ಅಜ್ಜ, ತಂದೆ, ದೊಡ್ಡಪ್ಪರ‌‌ ಕಾಲದಲ್ಲಿ‌ಯೇ ಕುರಿಯ ಮನೆ ಅನೇಕ ಯಕ್ಷಗಾನಾಸಕ್ತರಿಗೆ ಆಶ್ರಯ ನೀಡಿದ್ದರೊಂದಿಗೆ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ನಾಡಿಗೆ ನೀಡಿದೆ. ಕುರಿಯ ಮನೆಯಲ್ಲಿದ್ದ ಯಕ್ಷಗಾನದ ವಾತಾವರಣವೇ ನನ್ನ ಮೇಲೆ ಅಗಾಧವಾದ‌‌ ಪರಿಣಾಮ ಬೀರಿ‌ ಯಕ್ಷಗಾನದೆಡೆಗೆ ನನ್ನನ್ನು ಆಕರ್ಷಿಸುವಂತೆ ಮಾಡಿತ್ತು. ಯಕ್ಷಗಾನಕ್ಕೆ ಪಠ್ಯ ಇಲ್ಲದಿದ್ದರೂ ಹಿಂದಿನ ಕಾಲದಲ್ಲಿ ಯಕ್ಷಗಾನವನ್ನು ನೋಡಿ ಅನುಭವಿಸಿ ಕಲಿತು ಕಲಾವಿದರಾಗುತ್ತಿದ್ದರು. ಆದರೆ ಇತ್ತೀಚೆಗೆ ಕಲಾವಿದರೇ ಇಡೀ ಯಕ್ಷಗಾನ ನೋಡದೆ ತಮ್ಮ ಪಾತ್ರ ಮುಗಿಸಿ ಹೋಗುವವರೇ ಹೆಚ್ಚು. ಯಕ್ಷಗಾನ ಮತ್ತು ಅದರ ರಂಗ ನಡೆಗಳನ್ನು ಪರಿಪೂರ್ಣವಾಗಿ ಅರಿಯದೆ ಉತ್ತಮ‌ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಯುವ ಕಲಾವಿದರು ಬದ್ಧತೆ, ಅಧ್ಯಯನಶೀಲ ಗುಣವನ್ನು ಬೆಳೆಸಿಕೊಂಡು ಯಕ್ಷಗಾನ ಶ್ರೀಮಂತಿಕೆಗೆ ಸಾಕ್ಷಿಯಾಗಬೇಕು” ಎಂದ ಅವರು ಹಲವು ದಶಕಗಳ ತಮ್ಮ ಯಕ್ಷಪಯಣದ ಅನುಭವವನ್ನು ಮೆಲುಕು ಹಾಕಿದರು.

    ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ‌ ಡಾ. ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನ ಹಿರಿಯ ಕಲಾವಿದರ ಯಕ್ಷಗಾನದ ಅನುಭವವನ್ನು ದಾಖಲೀಕರಣಗೊಳಿಸಿ ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಯಕ್ಷಾಯಣ-ದಾಖಲೀಕರಣ‌ ಎಂಬ ಮಹತ್ವದ ಯೋಜನೆಯನ್ನು ಹಮ್ಮಿಕೊಂಡಿದೆ. ಇದೀಗ ಸರಣಿಯ ಎರಡನೇ ಕಾರ್ಯಕ್ರಮವನ್ನು ಕುರಿಯ ನಿವಾಸದಲ್ಲಿ ತೆಂಕುತಿಟ್ಟು ಯಕ್ಷಗಾನ‌ ರಂಗದ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿ ಅವರ ಅನುಭವ‌ ಕಥನವನ್ನು ದಾಖಲೀಕರಣ‌ಗೊಳಿಸುತ್ತಿದ್ದೇವೆ” ಎಂದರು.

    ಈ ಸಂದರ್ಭದಲ್ಲಿ ಕುರಿಯ ಗಣಪತಿ ಶಾಸ್ತ್ರಿ ಅವರ ಸಹೋದರ ಕುರಿಯ ಗೋಪಾಲ ಶಾಸ್ತ್ರಿ, ಗಣಪತಿ ಶಾಸ್ತ್ರಿಯವರ ಪತ್ನಿ ಶ್ಯಾಮಲ, ಸಂಬಂಧಿಕರಾದ ಲಲಿತಾ, ಪಲ್ಲವಿ, ರಾಮಪ್ರಕಾಶ, ಶ್ರೀರಾಮ, ಗಂಗಾಲಕ್ಷ್ಮೀ, ನಾಟ್ಯ ಗುರುಗಳಾದ ದೀವಿತ್ ಕೋಟ್ಯಾನ್, ಯಕ್ಷಗಾನ ಕೇಂದ್ರದ ಸಂಶೋಧನಾಧಿಕಾರಿ ಡಾ. ಸತೀಶ್, ಸ್ವಾತಿ ರಾವ್, ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಪ್ರಸಾದ್, ಯಕ್ಷಮಂಗಳ ವಿದ್ಯಾರ್ಥಿ ಅಭಿರಾಮ್ ಮೊದಲಾದವರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಗಣರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಭಾಷಣ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ
    Next Article ಕ.ಸಾ.ಪ. ಮಂಗಳೂರು ತಾಲೂಕು ಘಟಕದಿಂದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿರವರಿಗೆ ಅಭಿನಂದನೆ
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ಯಕ್ಷಗಾನ ಹಿಮ್ಮೇಳ ಹಾಗೂ ಮುಮ್ಮೇಳ ತರಗತಿಗಳು

    June 6, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಮಾಗಮ 7’ | ಜೂನ್ 07

    June 6, 2025

    ಮಂಗಳೂರು ಪುರಭವನದಲ್ಲಿ ಕೊಂಕಣಿ ಯಕ್ಷಗಾನ

    June 5, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.