Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೋಟದ ಕಾರಂತ ಸಭಾ ಭವನದಲ್ಲಿ ‘ಯುಗಾದಿ ಸಾಹಿತ್ಯೋತ್ಸವ’ | ಏಪ್ರಿಲ್ 11
    Awards

    ಕೋಟದ ಕಾರಂತ ಸಭಾ ಭವನದಲ್ಲಿ ‘ಯುಗಾದಿ ಸಾಹಿತ್ಯೋತ್ಸವ’ | ಏಪ್ರಿಲ್ 11

    April 6, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ಮಿತ್ರ ಮಂಡಳಿ ಕೋಟ, ಡಾ. ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಇದರ ಜಂಟಿ ಆಶ್ರಯದಲ್ಲಿ ‘ಯುಗಾದಿ ಸಾಹಿತ್ಯೋತ್ಸವ’ವನ್ನು ದಿನಾಂಕ 11-04-2024ರಂದು ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರಂತ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಬೆಳಗ್ಗೆ ಗಂಟೆ 9.30ರಿಂದ ಶ್ರೀಮತಿ ಪಲ್ಲವಿ ತುಂಗ ಇವರಿಂದ ಅಡಿಗ ಕಾವ್ಯ ರಸಧಾರೆ. 10-00 ಗಂಟೆಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಇವರ ಉಪಸ್ಥಿತಿಯಲ್ಲಿ ಕುಂದಾಪುರದ ಸಾಹಿತಿ ಹಿರಿಯ ನ್ಯಾಯವಾದಿಯಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗಂಟೆ 10-45ಕ್ಕೆ ‘ಸಾಹಿತ್ಯ ಸಲ್ಲಾಪ’ದಲ್ಲಿ ಉಪನ್ಯಾಸ -1ರಲ್ಲಿ ‘ಶ್ರೀ ನೀಲಾವರ ಸುರೇಂದ್ರ ಅಡಿಗರ ಶೈಕ್ಷಣಿಕ ಕೃತಿಗಳು’ ಎಂಬ ವಿಷಯದ ಬಗ್ಗೆ ಉಪಪ್ರಾಂಶುಪಾಲರಾದ ಡಾ. ಕೆ. ಅಶೋಕ ಕಾಮತ್ ಇವರು, ಉಪನ್ಯಾಸ -2ರಲ್ಲಿ ‘ಅಡಿಗ, ಇತ್ತೀಚಿನ ಸಾಹಿತ್ಯಾನುಸಂಧಾನ’ ಎಂಬ ವಿಷಯದ ಬಗ್ಗೆ ಸಾಹಿತಿ ಮತ್ತು ಶಿಕ್ಷಕರಾದ ಶ್ರೀ ಅರವಿಂದ ಚೊಕ್ಕಾಡಿ ಇವರು ಮತ್ತು ಉಪನ್ಯಾಸ -3ರಲ್ಲಿ ‘ನನ್ನ ಇತ್ತೀಚಿನ ಆತ್ಮಚರಿತೆಗಳ ಓದು’ ಎಂಬ ವಿಷಯದ ಬಗ್ಗೆ ಉಡುಪಿಯ ಕತೆಗಾರ ಮತ್ತು ವಿಮರ್ಶಕ ಶ್ರೀ ಬೆಳಗೋಡು ರಮೇಶ್ ಭಟ್ ಇವರು ಉಪನ್ಯಾಸ ನೀಡಲಿರುವರು.

    ಗಂಟೆ 1.30 ಕ್ಕೆ ಶ್ರೀಮತಿ ಸುಕನ್ಯಾ ಎಸ್. ಸೋಮಯಾಜಿ ಕಾರ್ಡಡ ಮತ್ತು ಬಳಗದವರಿಂದ ‘ಭಾವ ಗೀತ ರಸಾಯನ’ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯಲಿರುವ ‘ಯುಗಾದಿ ಕವಿಗೋಷ್ಠಿ’ (ಕ್ವಾಟ ಕನ್ನಡದಲ್ಲಿ)ಯ ಅಧ್ಯಕ್ಷತೆಯನ್ನು ಶಿಕ್ಷಕ-ಸಾಹಿತಿ ಶ್ರೀ ನರೇಂದ್ರ ಕುಮಾರ್ ಕೋಟ ಇವರು ವಹಿಸಲಿದ್ದು, ಶ್ರೀ ಕೃಷ್ಣ ಸಿದ್ಧಾಪುರ, ಶ್ರೀಮತಿ ಪೂರ್ಣಿಮ ಕಮಲಶಿಲೆ, ಶ್ರೀ ಪಿ.ವಿ. ಆನಂದ ಸಾಲಿಗ್ರಾಮ, ಶ್ರೀ ಮಂಜುನಾಥ ಸಾಸ್ತಾನ, ಶ್ರೀಮತಿ ತನುಜ ಕೋಟೇಶ್ವರ ಮತ್ತು ಶ್ರೀಮತಿ ಸಂಪ್ರೀತ ಪುರಾಣಿಕ ಕುಂದಾಪುರ ಮುಂತಾದ ಕವಿಗಳು ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಉಡುಪಿಯ ಡಾ. ಮಹಾಬಲೇಶ್ವರ ರಾವ್ ಮತ್ತು ಶ್ರೀ ನೀಲಾವರ ಸುರೇಂದ್ರ ಅಡಿಗ ಇವರುಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ಕೊರವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಮಾರ ಪ್ರಣವ ಇವರಿಗೆ ನಿ. ಅಣ್ಣಾಜಿ ಬಲ್ಲಾಳ ಬಾಲ ಪುರಸ್ಕಾರ ನೀಡಿ ಗೌರವಿಸಲಾಗುವುದು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಶ್ರೀ ರಾಮ್ ಜಾನಪದ ಕಲಾ ತಂಡದವರಿಂದ ‘ಜಾನಪದ ವೈಭವ’ | ಏಪ್ರಿಲ್ 7
    Next Article ತುಳು ಮತ್ತು ಕನ್ನಡ ಸಾಹಿತಿ ಮಲಾರ್ ಜಯರಾಮ ರೈ ಅವರಿಗೆ ಕಸಾಪ ಕೇರಳ ಗಡಿನಾಡ ಘಟಕದಿಂದ ಸನ್ಮಾನ
    roovari

    Add Comment Cancel Reply


    Related Posts

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ‘ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ’ | ಮೇ 17

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.