ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ಯುವ ಮಹೋತ್ಸವ 2025’ದಲ್ಲಿ ರಾಷ್ಟ್ರ ಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 09 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಡಾನ್ ಬೋಸ್ಕೋ ಹಾಲ್ ನಲ್ಲಿ ನಡೆಯಲಿದೆ.
ಮ್ಯೂಸಿಕಲ್ ಟ್ರಿಯೋ ಕಾರ್ಯಕ್ರಮದಲ್ಲಿ ಉಸ್ತಾದ್ ರಫೀಕ್ ಖಾನ್ ಇವರಿಂದ ಸಿತಾರ್ ವಾದನ, ಪಂಡಿತ್ ರೋನು ಮಜುಂದಾರ್ ಇವರಿಂದ ಬಾನ್ಸುರಿ ವಾದನ ಹಾಗೂ ಪಂಡಿತ್ ಜಯತೀರ್ಥ ಮೇವುಂಡಿ ಇವರ ಗಾಯನಕ್ಕೆ ಯಶವಂತ್ ವೈಷ್ನವ್ ತಬಲಾ ಮತ್ತು ಶ್ರೀ ನರೇಂದ್ರ ಎಲ್. ನಾಯಕ್ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಸ್ವರ ಭಾರತಿ ಪ್ರಶಸ್ತಿ’ ಪಡೆದ ಪ್ರಥಮ ಬಹುಮಾನ ವಿಜೇತರು ಕಾರ್ಯಕ್ರಮ ನೀಡಲಿದ್ದಾರೆ.
‘ಯುವ ಮಹೋತ್ಸವ 2025’ದ ಅಂಗವಾಗಿ ಬೆಳಿಗ್ಗೆ 9-00 ಗಂಟೆಗೆ ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯ ಮತ್ತು ಹಾಡುಗಾರಿಕೆಯಲ್ಲಿ ತರಗತಿಗಳನ್ನು ಉಸ್ತಾದ್ ರಫೀಕ್ ಖಾನ್, ಡಾ. ಶಶಾಂಕ್ ಮಕ್ತೆದಾರ್ ಮತ್ತು ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಇವರುಗಳು ನಡೆಸಿಕೊಡಲಿದ್ದು, ನೋಂದಣಿ ಶುಲ್ಕ ರೂ.500/- ಆಗಿರುತ್ತದೆ.