ಬೆಂಗಳೂರು : ಅನೂರ್ ಅನಂತಕೃಷ್ಣ ಶರ್ಮಾ ಫೌಂಡೇಷನ್ ಫಾರ್ ಮ್ಯೂಜಿಕ್ (ರಿ.) ಮತ್ತು ಶ್ರೀ ಕೃಷ್ಣಾ ಸಂಗೀತ ಸಭಾ ಜಂಟಿಯಾಗಿ ಪ್ರಸ್ತುತ ಪಡಿಸುವ ‘ಯುವ ಸಂಗೀತೋತ್ಸವ’ ಕಾರ್ಯಕ್ರಮವನ್ನು ದಿನಾಂಕ 29 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ಬೆಂಗಳೂರು ಮಾರುತಿ ಲೇ ಔಟ್ ನಲ್ಲಿರುವ ಅನೂರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೇಶವ ಚಂದ್ರ ಇವರ ಕೊಳಲು ವಾದನಕ್ಕೆ ಕುಮಾರಿ ತನ್ಮಯೀ ಉಪ್ಪಂಗಳ ಇವರು ವಯೋಲಿನ್, ವಿಷ್ಣುವರ್ಧನ್ ಕೆ. ಇವರು ಮೃದಂಗ ಮತ್ತು ಅನಿಲ್ ಪರಾಶರ ಕಾಂಜೀರ ಸಾಥ್ ನೀಡಲಿದ್ದಾರೆ. 12-00 ಗಂಟೆಗೆ ಶ್ರೀಮತಿ ಅನಘ ಭಟ್ ಇವರ ಹಿಂದೂಸ್ತಾನಿ ಹಾಡುಗಾರಿಕೆಗೆ ಕೇದಾರನಾಥ ಹವಾಲ್ದಾರ್ ಇವರು ತಬಲಾ ಮತ್ತು ತೇಜಸ್ ಕತೋಟಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. 4-00 ಗಂಟೆಗೆ ನಾಗೇಂದ್ರ ಪ್ರಸಾದ್ ಎಸ್.ಪಿ. ಇವರು ಮೃದಂಗ ಮತ್ತು ತಿರುಮಲೆ ಗೋಪಿ ಶ್ರವಣ್ ಇವರು ಮೊರ್ಚಿಂಗ್ ಲಯವಿನ್ಯಾಸ ಪ್ರಸ್ತುತ ಪಡಿಸಲಿದ್ದಾರೆ. 5-30 ಗಂಟೆಗೆ ಕರ್ಣಾಟಿಕ್ ಗಾಯನ ಕಛೇರಿಯಲ್ಲಿ ಶ್ರೀಮತಿ ಅರ್ಚನಾ ಎಲ್. ರಾವ್ ಇವರ ಹಾಡುಗಾರಿಕೆಗೆ ಅನಿರುದ್ಧ ಭಾರದ್ವಾಜ್ ಇವರು ವಯೋಲಿನ್, ಸುನಾಧ ಕೃಷ್ಣ ಅಮೈ ಇವರು ಮೃದಂಗ ಮತ್ತು ಶರತ್ ಕೌಶಿಕ್ ಇವರು ಘಟಂನಲ್ಲಿ ಸಹಕರಿಸಲಿದ್ದಾರೆ.