Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನಲ್ಲಿ ಕ್ಲೇ ಮಾಡೆಲಿಂಗ್ ಪ್ರದರ್ಶನ | ಮೇ 24

    May 21, 2025

    ಬಾನು ಮುಷ್ತಾಕ್‌ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ‘ಬೂಕರ್ ಪ್ರಶಸ್ತಿ’

    May 21, 2025

    ಹರಿಹರಪುರದಲ್ಲಿ ‘ಭಾಗವತರ ಸಂಸ್ಮರಣೆ ಗಾನಾರಾಧನೆ’ | ಮೇ 25

    May 21, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ | ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ನಾಟಕ “55 ನಿಮಿಷದ ಪ್ರೇಮ ಕಥೆ” – ಜಗದೀಶ ಕೆಂಗನಾಳ್
    Drama

    ನಾಟಕ ವಿಮರ್ಶೆ | ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದ ನಾಟಕ “55 ನಿಮಿಷದ ಪ್ರೇಮ ಕಥೆ” – ಜಗದೀಶ ಕೆಂಗನಾಳ್

    August 4, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೊಸಕೋಟೆ : ಹೊಸಕೋಟೆಯ ನಿಂಬೆಕಾಯಿಪುರದ ‘ಜನಪದರು ರಂಗ ಮಂದಿರ’ದಲ್ಲಿ, ರಂಗಪಯಣ ತಂಡ ಬೆಂಗಳೂರು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗಾಗಿ ಜುಲೈ 31ರಂದು 31 ಜಿಲ್ಲೆಗಳ 31 ರಂಗ ಮಂದಿರಗಳಲ್ಲಿ 31 ಕಲಾವಿದರು ಏಕಕಾಲದಲ್ಲಿ ನಿಗದಿತ ಸಮಯ ಸಂಜೆ 7-10ರಿಂದ 8-05ರವರೆಗೆ ರಾಜಗುರು ಹೊಸಕೋಟೆಯವರ ರಚನೆ – ಸಂಗೀತ – ನಿರ್ದೇಶನದಲ್ಲಿ – “55 ನಿಮಿಷದ ಒಂದು ಪ್ರೇಮ ಕಥೆ…” ನಾಟಕವನ್ನು ಬೆ೦ಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ‘ಜನಪದರು ತಂಡ’ದ ನಟ ನಾಗೇಶ್ ಬೋಧನ ಹೊಸಹಳ್ಳಿಯವರು ನಟಿಸಿ ಸೈ ಎನಿಸಿಕೊಂಡರು. ಪ್ರೇಕ್ಷಕರು ಕುತೂಹಲದಿಂದ ಏಕವ್ಯಕ್ತಿ ಪ್ರದರ್ಶನ ಸವಿದರು. ಅತಿಥಿಗಳಾಗಿ ಸಾಹಿತಿ ಡಾ. ಬಾಲಗುರುಮೂರ್ತಿ, ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ.ಎನ್. ನಾರಾಯಣಸ್ವಾಮಿ ಹಾಗೂ ಕಲಾವಿದ ನಾಗೇಶರನ್ನು ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ರ ಪಾಪಣ್ಣ ಕಾಟಂ ನಲ್ಲೂರು ಸನ್ಮಾನಿಸಿ ಗೌರವಿಸಿದರು. ಪದಾಧಿಕಾರಿಗಳಾದ ಜಗದೀಶ್ ಕೆಂಗನಾಳ್, ಸಿದ್ದೇಶ್ವರ ದೊಡ್ದ ಬನಹಳ್ಳಿ, ಚಲಪತಿ ಹಾಗೂ ಮುನಿರಾಜು ಮತ್ತು ಇತರರು ಉಪಸ್ಥಿತರಿದ್ದರು.

    ನಾಗೇಶ್ ಬೋಧನ ಹೊಸಹಳ್ಳಿ

    ‘ಬಯಸಿದಂತೆ ಬಾಳು ಸಿಗದ… ವಾಸ್ತವದ 55 ನಿಮಿಷಗಳ ಒಂದು ಪ್ರೇಮ ಕಥೆ’

    ಈ ಬದುಕೇ ಹೀಗೆ ಕಟು ಸತ್ಯಗಳ ಕಥನ. ಮುಗ್ಧ ಬಾಲ್ಯದಿಂದ ಭ್ರಾಮಕ ಯವ್ವನ ಕಾಲೇಜಿಗೆ ಕಾಲಿಡುತ್ತಲೇ ಚಿಗುರೊಡೆದ ಮೀಸೆಗೆ ಚೆಲುವೆ ಚಿಂತೆ. ಅಲ್ಲಿಯ ಪ್ರೇಮದ ಹುಡುಗಿಯ ಹುಡುಗಾಟದ ಮಧ್ಯೆ, ನಗರದ ನಾಗಾಲೋಟದ ಬದುಕಿಗೆ ನೆಲೆ ಕಳೆದುಕೊಂಡ ಕುಟುಂಬದ ಬವಣೆಯಲ್ಲಿ ಮಾಯವಾಗುವ ಪ್ರೀತಿಯ ಹುಡುಗಿಯ ಹುಡುಕಾಟ, ದೈನಂದಿನ ಸಮಸ್ಯೆಯೊಂದಿಗೆ ಬದುಕು ಕಟ್ಟಿಕೊಳ್ಳುವ ಯುವಕ, ಸಮಯದ ಬಿಡುವಿನ ಮಧ್ಯೆ ಹುಡುಗಿಯ ಕುಟುಂಬ, ಆದರೆ ಪ್ರಿಯತಮೆಯ ಸಾವಿನ ದುರಂತ ಅಂತ್ಯ ಕಥೆಗೆ ಕುತೂಹಲ ತಂದು, ಮುಂದೇನು ? ಅನ್ನುವಷ್ಟರಲ್ಲೇ ಕಥೆಯ ಅಂತ್ಯದಲ್ಲಿ ನಾಟಕಕಾರನ ಕೈಚಳಕ ಕಾಣುತ್ತದೆ. ಇಂದಿನ ಕೆಲವು ಯುವಕರು ಪ್ರೇಮದ ಅಮಲಿನಲ್ಲಿ ತನ್ನ ಬದುಕಿನಿಂದಾಗಿ ಇಡೀ ಕುಟುಂಬದ ಬಾಳ ನೆಮ್ಮದಿಯನ್ನು ಹದಗೆಡಿಸಿ ನರಕ ದರ್ಶನ ಮಾಡುವಂತೆ ಬದುಕುವ ಇಂದಿನ ಯುವ ಸಮುದಾಯವು ಆಲೋಚಿಸುವಂತೆ ಮಾಡುತ್ತದೆ. ರಾಜಗುರು ಹೊಸಕೋಟೆಯವರ ಕಥೆ ಮುಂದೆ ನಾಟಕ ನೋಡುವ ಹಾಗೆ ಮಾಡಿತು. ಸರಳ ರ೦ಗ ಪರಿಕರ, ಸಂಗೀತ ಸಮರ್ಪಕವಾಗಿತ್ತು. ಜನಪದರು ತಂಡದ ನಾಗೇಶ ಬೋಧನ ಹೊಸಹಳ್ಳಿ ಯಾವ ರಂಗ ಪದವೀಧರರಲ್ಲದಿದ್ದರೂ, ಹವ್ಯಾಸಿ ಅನುಭವದ ಮೂಲಕ ಏಕವೃಕ್ತಿ ಪ್ರದರ್ಶನ ನೀಡುವಲ್ಲಿ ಸಮರ್ಥವಾಗಿ ವಾಚಿಕ, ಆಂಗಿಕ ಅಭಿನಯಗಳನ್ನು ಪ್ರದರ್ಶಿಸಿದರು. ಒಟ್ಟಾರೆ ಒಂದು ಸು೦ದರ ಪ್ರಯತ್ನ.

    •  ಜಗದೀಶ ಕೆಂಗನಾಳ್

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಸರಣಿ ತಾಳಮದ್ದಳೆ ‘ತ್ರಿಪುರ ಮಥನ’
    Next Article ಕಟೀಲಿನಲ್ಲಿ ರಂಗ ಚಟುವಟಿಕೆ ಕಾರ‍್ಯಾಗಾರ
    roovari

    Add Comment Cancel Reply


    Related Posts

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ನಟನ ರಂಗಶಾಲೆಯಿಂದ ‘ರಂಗಭೂಮಿ ಡಿಪ್ಲೋಮಾ’ಗೆ ಆಹ್ವಾನ | ಮೇ 25

    May 20, 2025

    ಲೇಖಕ, ಪ್ರಕಾಶನ, ರಂಗಕರ್ಮಿ ಡಾ. ರಮಾಕಾಂತ ಜೋಶಿ ನಿಧನ

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.