Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಶ್ರೀಶ ಯಕ್ಷೋತ್ಸವ-2023’ದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ
    Awards

    ‘ಶ್ರೀಶ ಯಕ್ಷೋತ್ಸವ-2023’ದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಪ್ರದರ್ಶನ

    December 21, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಶ್ರೀಶ ಯಕ್ಷೋತ್ಸವ ಸಮಿತಿ, ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ತಲಕಳ ಮತ್ತು ಶ್ರೀ ತಲಕಳ ಮೇಳ ಇವರುಗಳ ಸಹಯೋಗದಲ್ಲಿ 15ನೇ ವರ್ಷದ ‘ಶ್ರೀಶ ಯಕ್ಷೋತ್ಸವ -2023’ ಮುರನಗರದಲ್ಲಿ ದಿನಾಂಕ 15-12-2023ರಿಂದ 17-12-2023ರವರೆಗೆ ನಡೆಯಿತು.

    ಈ ಸಮಾರಂಭವು ದಿನಾಂಕ 15-12-2023ರಂದು ಉದ್ಘಾಟನೆಗೊಂಡು, ಸಭಾ ಕಾರ್ಯಕ್ರಮದ ನಂತರ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಸದಸ್ಯರಿಂದ ‘ಕರ್ಣಾರ್ಜುನ’ ಹಾಗೂ ಶ್ರೀ ತಲಕಳ ಮೇಳದ ಕಲಾವಿದರಿಂದ ‘ಪ್ರದೋಷ ಪೂಜೆ’ ಎಂಬ ಪ್ರಸಂಗ ಪ್ರದರ್ಶನಗೊಂಡಿತು. ದಿನಾಂಕ 16-12-2023ರಂದು ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಧರ್ಮ ದಂಡನೆ’ ಹಾಗೂ ಶ್ರೀ ತಲಕಳ ಮೇಳದ ಕಲಾವಿದರಿಂದ ‘ಕಾರಿಂಜ ಕಾಂಜವೆ’ ತುಳು ಯಕ್ಷಗಾನ ಪ್ರದರ್ಶನ ನಡೆಯಿತು.

    ದಿನಾಂಕ 17-12-2023ರಂದು ಯಕ್ಷಗಾನ ಗುರುಗಳಾದ ಶ್ರೀಯುತ ಗಣೇಶ್ ಕೊಲೆಕಾಡಿ ಇವರ ಮೂಲ್ಕಿ ಸಮೀಪದ ಅತಿಕಾರಿಬೆಟ್ಟು ಇಲ್ಲಿರುವ ನಿವಾಸಕ್ಕೆ ತೆರಳಿ ಅವರ ಶಿಷ್ಯ ದಿ. ಶ್ರೀಶ ತಲಕಳ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪೇಟ, ಶಾಲು ಸ್ಮರಣಿಕೆ, ಹಾರ ಫಲವಸ್ತು, ಪ್ರಶಸ್ತಿ ಪತ್ರದೊಂದಿಗೆ ನಗದು ರೂ.10,000/- ನೀಡಿ ಗೌರವಿಸಲಾಯಿತು. ಶ್ರೀಶ ಯಕ್ಷೋತ್ಸವ ಸಮಿತಿ ಸದಸ್ಯರಾದ ಶ್ರೀಮತಿ ಶರ್ಮಿಳಾ ಪುರಂದರ, ಶ್ರೀನಿವಾಸ ಉಡುಪ, ಮೈತ್ರಿ ಉಡುಪ, ರವಿ ಕುಮಾರ್, ಶರಣ್ ರಾಜ್ ಪೂಜಾರಿ, ಸುಮತಿ ಅದ್ಯಪಾಡಿ, ತಲಕಳ ಮೇಳ ಹಾಗೂ ಶ್ರೀಶ ಕಲಿಕಾ ಕೇಂದ್ರದ ಸಂಚಾಲಕರಾದ ಯೋಗಾಕ್ಷಿ ಗಣೇಶ್ ತಲಕಳ, ಮೇಲ್ವಿಚಾರಕರಾದ ಗಣೇಶ್ ತಲಕಳ, ಶ್ರೀಶ ತಲಕಳ ಅವರ ತಾಯಿ ಗುಲಾಬಿ ತಿಮ್ಮಪ್ಪ ಗುಜರನ್, ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಇದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೀರ್ತಿಶೇಷ ದಿವಂಗತ ಕೆ. ತಿಮ್ಮಪ್ಪ ಗುಜರನ್ ಸಂಸ್ಮರಣ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಪ್ರಸಂಗಕರ್ತ ಶ್ರೀ ಮಾಧವ ಭಂಡಾರಿ ಕುಳಾಯಿ ಇವರಿಗೆ ರೂ.10,000/- ನಗದಿನೊಂದಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಹಿಮ್ಮೇಳ ಗುರುಗಳಾದ ಶ್ರೀ ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ, ಹಿರಿಯ ಕಲಾವಿದ ಕೇಶವ ಶಕ್ತಿ ನಗರ, ಸಮಿತಿ ಸದಸ್ಯರಾದ ಶ್ರೀನಿವಾಸ ಉಡುಪ ಕತ್ತಲ್ಸಾರ್, ಶ್ರೀಮತಿ ಡಾ. ರತಿ ಶ್ರೀಧರ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಜಯ ಗೋಪಾಲ್ ಉಪಸ್ಥಿತರಿದ್ದರು.

    ಮೇಳದ ಮಹಾಪೋಷಕರಾದ ಶ್ರೀ ಸಂಜಯ್ ಕುಮಾರ್ ರಾವ್ ಇವರು ಶ್ರೀಶ ಹಾಗೂ ಕೆ. ತಿಮ್ಮಪ್ಪ ಗುಜರನ್ ಇವರುಗಳ ಸಂಸ್ಮರಣೆಗೈದರು. ಶ್ರವಣ್ ಉಡುಪ ಸನ್ಮಾನ ಪತ್ರ ವಾಚಿಸಿ, ಸಮಿತಿ ಸದಸ್ಯರುಗಳಾದ ಶರ್ಮಿಳಾ ಪುರಂದರ, ಮೈತ್ರಿ ಉಡುಪ ಸಹಕರಿಸಿದರು. ಮೇಲ್ವಿಚಾರಕರಾದ ಗಣೇಶ್ ತಲಕಳ ಸ್ವಾಗತಿಸಿ, ಸಂಚಾಲಕರಾದ ಯೋಗಾಕ್ಷಿ ಗಣೇಶ್ ವಂದಿಸಿ ಕಲಾವಿದ ಮಾಣಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರದ ಸದಸ್ಯರಿಂದ ‘ಪಂಚವಟಿ –ಶೂರ್ಪನಖಾ ಮಾನಭಂಗ ಹಾಗೂ ಕೃಷ್ಣ ಲೀಲೆ’ ಯಕ್ಷಗಾನ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಣಿಕೃಷ್ಣ ಸ್ವಾಮಿ ಅಕಾಡೆಮಿಯಿಂದ ‘ಉದಯರಾಗ’ – 47
    Next Article ನಾಟಕ ವಿಮರ್ಶೆ | ‘ಚಂದ್ರಗಿರಿಯ ತೀರದಲ್ಲಿ’
    roovari

    Add Comment Cancel Reply


    Related Posts

    ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    ಸಿರಿಬಾಗಿಲಿನಲ್ಲಿ ಯಕ್ಷಗಾನ ಪ್ರಸಂಗ ರಚನಾ ಕಮ್ಮಟ | ಜುಲೈ 06

    June 7, 2025

    ಯಕ್ಷಗಾನ ವೃತ್ತಿ ಮೇಳದ ಕಲಾವಿದರಿಗೆ ಮಾರ್ಗದರ್ಶಿ ಶಿಬಿರ | ಜುಲೈ 01

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.