Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಸುನಂದಾ ಬೆಳಗಾಂವಕರ ಅವರ ‘ಕಜ್ಜಾಯ’ ಲಲಿತ ಪ್ರಬಂಧ ಸಂಕಲನ

    July 19, 2025

    ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ

    July 19, 2025

    ನೃತ್ಯ ವಿಮರ್ಶೆ | ಕಲಾವಿದೆ ಸುಪ್ರೀತಳ ಆಹ್ಲಾದಕರ ನೃತ್ಯ ಸಂಜೆ

    July 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಡಿ ಫಾರ್ ಡೈ’ ಕಿರುಚಿತ್ರ ಬಿಡುಗಡೆ ಮತ್ತು ಗ್ರಾಮೀಣ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಸಂಸ್ಮರಣೆ
    Drama

    ‘ಡಿ ಫಾರ್ ಡೈ’ ಕಿರುಚಿತ್ರ ಬಿಡುಗಡೆ ಮತ್ತು ಗ್ರಾಮೀಣ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಸಂಸ್ಮರಣೆ

    January 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೋಟ : ‘ಶಿವರಾಮ ಕಾರಂತ ಥೀಂ ಪಾರ್ಕ್’ ಕೋಟದಲ್ಲಿ ಗೌರವ ಗಣ್ಯರನೇಕರ ಉಪಸ್ಥಿತಿಯೊಂದಿಗೆ ದಿನಾಂಕ 31-12-2023ರಂದು ‘ಡಿ ಫಾರ್ ಡೈ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮವನ್ನು ಕುಮಾರಿ ಕಾವ್ಯ ಹಂದೆ ಎಚ್. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕಲಾ ಪ್ರತಿಭೆ ಸಂಜೀವ ಕದ್ರಿಕಟ್ಟು ಇವರ ಸಂಸ್ಮರಣಾ ಕಾರ್ಯಕ್ರಮವೂ ಜರುಗಿತು.

    “ಒಂದರ್ಥದಲ್ಲಿ ಕಳೆದ ವರ್ಷಗಳ ಕೊಳೆಗಳನ್ನು ಕಿತ್ತೊಗೆಯುವ ಸಂದೇಶವನ್ನು ಸಾರಿದ ಡಿಸೈನರ್ ವಿಜಿತ್ ಇವರು ರಚಿಸಿ, ನಿರ್ದೇಶಿಸಿದ ‘ಡಿ ಫಾರ್ ಡೈ’ ಕಿರುಚಿತ್ರ ಹೊಸ ವರ್ಷಕ್ಕೆ ಹೊಸ ಆಯಾಮಗಳಾಗಿ ಹೊಸೆಯಲಿ. ಕಿರಿಯ ನಿರ್ದೇಶಕನಾಗಿ ಕಿರಿಯ ಕಲಾವಿದರನ್ನೊಡಗೂಡಿಕೊಂಡು ಕಿರಿಯವಳಾದ ನನ್ನಿಂದಲೇ ಉದ್ಘಾಟಿಸಿ, ಹಿರಿತನದ ಜವಾಬ್ದಾರಿಯನ್ನು ವಿಜಿತ್ ತಂಡ ಮೆರೆದಿದೆ” ಎಂದು ಕಿರಿಯ ರಂಗ ನಟಿ ಕು. ಕಾವ್ಯ ಹಂದೆ ಎಚ್. ಕಿರುಚಿತ್ರವನ್ನು ಉದ್ಘಾಟಿಸಿ ಮಾತನ್ನಾಡಿದರು.

    “ಹಲವಾರು ವರ್ಷಗಳ ಹಿಂದಿನಿಂದಲೂ ನಾಟಕ ರಚಿಸಿ, ನಿರ್ದೇಶಿಸಿ, ಅಭಿನಯಿಸುವ ಮೂಲಕ ಕಲಾ ಪ್ರಪಂಚಕ್ಕೆ ಕಾಲಿರಿಸಿದ ಸಂಜೀವ ಕದ್ರಿಕಟ್ಟು, ವ್ಯಾವಹಾರಿಕವಾಗಿ ಬಹು ಚಟುವಟಿಕೆಯಲ್ಲಿ ನಿರತನಾದ ಸಂದರ್ಭದಲ್ಲಿಯೂ ಕಲೆಯ ತುಡಿತ ಅವರಲ್ಲಿ ಮಾಸಿರಲಿಲ್ಲ. ಆನೆ, ಕುದುರೆ, ತಟ್ಟಿರಾಯ, ಗೋರಿಲ್ಲ, ಬೊಂಬೆಗಳನ್ನೆಲ್ಲಾ ರಚಿಸುತ್ತಾ ಬಿಡುವಿನ ಸಮಯದಲ್ಲಿ ಬೊಂಬೆಗಳೊಂದಿಗೆ ಕಲಾವಿದನಾಗಿ ಕೈಚಳಕದಿಂದ ಬೆಳಗಿ ಅನೇಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ತನ್ನಿಂದ ನಿರ್ಮಿತವಾದ ಬೊಂಬೆಗಳನ್ನು ಅಲಂಕಾರಕ್ಕಾಗಿ ರವಾನಿಸುತ್ತಾ ಕಲೆಯ ಆಸಕ್ತಿಯನ್ನು ಮೆರೆದ ಸಂಜೀವಣ್ಣ ಅಕಾಲ ಮರಣದಿಂದಾಗಿ ಕಲಾ ಪ್ರಪಂಚವನ್ನು ಬಡವಾಗಿಸಿದರು” ಎಂದು ನರೇಂದ್ರ ಕುಮಾರ್ ಕೋಟ ಸಂಸ್ಮರಣಾ ಮಾತುಗಳಲ್ಲಿ ನುಡಿದರು.

    ಗೌರವ ಉಪಸ್ಥಿತಿಯಲ್ಲಿ ಅಭಿಲಾಷಾ ಹಂದೆ, ಉದಯ ಶೆಟ್ಟಿ ಪಡುಕೆರೆ, ಸಚಿನ್ ಅಂಕೋಲ, ಪ್ರದೀಪ ವಿ. ಸಾಮಗ, ಶ್ರೀಶ ಭಟ್, ಗಿರಿಧರ್ ಕೋಟ, ಆಕಾಶ್ ದೇವಾಡಿಗ ಉಪಸ್ಥಿತರಿದ್ದು ಕಿರುಚಿತ್ರದ ಕಥಾ ವಸ್ತುವಿನ ವಿಶ್ಲೇಷಣೆಗಳನ್ನು ವಿಮರ್ಷಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕಾಸರಗೋಡು ಕನ್ನಡ ಭವನದ ರೂವಾರಿ ವಾಮನ್ ರಾವ್ ಬೇಕಲ್ ದಂಪತಿಗೆ ‘ಕುವೆಂಪು ವಿಶ್ವಮಾನವ ಕನ್ನಡರತ್ನ ಪ್ರಶಸ್ತಿ’ ಪ್ರದಾನ
    Next Article ಉದಯೋನ್ಮುಖ ನೃತ್ಯ ಕಲಾವಿದೆ ಧನ್ಯ ಎಂ. ಕಶ್ಯಪ್ ರಂಗಪ್ರವೇಶ | ಜನವರಿ 13ರಂದು
    roovari

    Add Comment Cancel Reply


    Related Posts

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಕಣಿವೆಯ ಹಾಡು’ | ಜುಲೈ 20

    July 18, 2025

    ತಿಂಗಳ ನಾಟಕ ಸಂಭ್ರಮದಲ್ಲಿ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ | ಜುಲೈ 19

    July 17, 2025

    ರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ನಿಧನ

    July 16, 2025

    ವಿಶೇಷ ಲೇಖನ – ಚಿಂತನಶೀಲ ಬರಹಗಾರ ಎಂ. ಎಸ್. ಕೆ. ಪ್ರಭು

    July 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.